Thursday, September 11, 2025
27.2 C
Bengaluru
Google search engine
LIVE
ಮನೆUncategorizedರಾಮೇಶ್ವರಂ ಕೆಫೆ ಟಾರ್ಗೆಟ್ ಆಗಿದ್ಯಾಕೆ? ಹೊಟೇಲ್ ಹಿಸ್ಟರಿ ಗೊತ್ತಾ?

ರಾಮೇಶ್ವರಂ ಕೆಫೆ ಟಾರ್ಗೆಟ್ ಆಗಿದ್ಯಾಕೆ? ಹೊಟೇಲ್ ಹಿಸ್ಟರಿ ಗೊತ್ತಾ?

ಬೆಂಗಳೂರಿನ ಕುಂದಲಹಳ್ಳಿ ಸಮೀಪವಿರುವ ರಾಮೇಶ್ವರಂ ಕೆಫೆಯಲ್ಲಿ ಬ್ಲಾಸ್ಟ್ ಆಗಿದೆ.. ಬ್ಲಾಸ್ಟ್ ಸಂಭವಿಸಿರುವ ಈ ಹೊಟೇಲ್ ಇತಿಹಾಸ ಗೊತ್ತಿದೆಯಾ..? ದಕ್ಷಿಣ ಭಾರತದ ತಿಂಡಿಗಳ ಮೂಲಕ ಜನಪ್ರಿಯವಾಗಿರುವ ರಾಮೇಶ್ವರಂ ಕೆಫೆ ತ್ವರಿತ ಸೇವೆಯನ್ನು ನೀಡುವ ರೆಸ್ಟೋರೆಂಟ್ ಆಗಿದೆ.

ಈ ಕೆಫೆಯಲ್ಲಿ ನಾವು ಯಾವ ಸಮಯದಲ್ಲಿ ಹೋದರೂ ಜನಜಂಗುಳಿ ಕಾಣಬಹುದು. ಆದರೆ ಈ ಒಂದು ಕೆಫೆಯು ಮಾಸಿಕವಾಗಿ ಅಂದರೆ ಒಂದು ತಿಂಗಳಿನಲ್ಲಿಯೇ ಬರೋಬ್ಬರಿ 4.5 ಕೋಟಿ ರೂಪಾಯಿ ಗಳಿಕೆಯನ್ನು ಹೊಂದಿದೆ.

ರಾಮೇಶ್ವರಂ ಕೆಫೆ ಹುಟ್ಟಿದ್ದು ಹೇಗೆ?
ರಾಮೇಶ್ವರಂ ಕೆಫೆಯನ್ನು ದಿವ್ಯಾ ರಾಘವೇಂದ್ರ ರಾವ್ ಮತ್ತು ರಾಘವೇಂದ್ರ ರಾವ್ ಸಂಸ್ಥಾಪನೆ ಮಾಡಿದ್ದಾರೆ. ಇಬ್ಬರೂ ಕೂಡಾ ತಮ್ಮ ಈ ವ್ಯಾಪಾರಕ್ಕೆ ಹೆಚ್ಚಿನ ಹೆಗ್ಗಳಿಕೆಯನ್ನು ಪಡೆದಿದ್ದಾರೆ. ಭಾರತದ ಮಾಜಿ ರಾಷ್ಟ್ರಪತಿ ಡಾ. ಎಪಿಜಿ ಅಬ್ದುಲ್ ಕಲಾಂ ಜನನ ಸ್ಥಳವನ್ನು ತಮ್ಮ ರೆಸ್ಟೋರೆಂಟ್‌ನ ಹೆಸರನ್ನಾಗಿ ಇಬ್ಬರು ಇರಿಸಿಕೊಂಡಿದ್ದಾರೆ. ಎಲ್ಲ ತಿಂಡಿಗಳನ್ನು ಹೊಟೇಲ್‌ನಲ್ಲಿ ತಯಾರಿಸಲಾಗುತ್ತದೆ.

ಟಾರ್ಗೆಟ್‌ ಆಯ್ತಾ ರಾಮೇಶ್ವರಂ ಕೆಫೆ?
ರಾಮೇಶ್ವರಂ ಕೆಫೆಯು ಎಲ್ಲಾ ರೀತಿಯ ಜನರಿಗೆ ಮುಂಜಾನೆ 5 ರಿಂದ ಮಧ್ಯರಾತ್ರಿ 1 ಗಂಟೆಯವರೆಗೆ ಸೇವೆ ಸಲ್ಲಿಸುವ ಬೆಂಗಳೂರಿನಲ್ಲಿರುವ ಏಕೈಕ ರೆಸ್ಟೋರೆಂಟ್ ಇದಾಗಿದೆ.ದಿವ್ಯಾ ಮತ್ತು ರಾಘವೇಂದ್ರ ರಾವ್ ಸ್ಥಾಪಿಸಿರುವ ರಾಮೇಶ್ವರಂ ಕೆಫೆ ಈಗ ಬೆಂಗಳೂರಿನ ವಿವಿಧ ಭಾಗಗಳಲ್ಲಿ ಹರಡಿದೆ.ಎಲ್ಲಾ ಬ್ರ್ಯಾಂಚ್ಗಳಲ್ಲೂ ಉತ್ತಮ ಬ್ಯುಸಿನೆಸ್ ಕಾಣುತ್ತಿದೆ. ಹೀಗಾಗಿಯೇ ಹೊಟೇಲ್ ಉದ್ಯಮವನ್ನ ಹಾಳು ಮಾಡೋಕೆ ಅಂತ ಬ್ಲ್ಯಾಸ್ಟ್ ಪ್ಲ್ಯಾನ್ ಮಾಡಲಾಗಿದೆಯಾ..? ಗೊತ್ತಿಲ್ಲ. ಪೂರ್ಣ ತನಿಖೆ ಮುಗಿದ ನಂತ್ರವಷ್ಟೆ ಸತ್ಯ ಹೊರಬರಬೇಕಿದೆ.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments