Wednesday, April 30, 2025
35.6 C
Bengaluru
LIVE
ಮನೆರಾಜಕೀಯಬಿಜೆಪಿ ನನ್ನ ಮನೆ ನಾವು ಕಟ್ಟಿ ಬೆಳೆಸಿದ ಮನೆ : ಜಗದೀಶ್​ ಶೆಟ್ಟರ್

ಬಿಜೆಪಿ ನನ್ನ ಮನೆ ನಾವು ಕಟ್ಟಿ ಬೆಳೆಸಿದ ಮನೆ : ಜಗದೀಶ್​ ಶೆಟ್ಟರ್

ಬೆಂಗಳೂರು :  ಬಿಜೆಪಿ ಬಿಟ್ಟು ಕಾಂಗ್ರೆಸ್​ ಸೇರ್ಪಡೆಯಾಗುವ ಅಂದು ಅನಿವಾರ್ಯವಾಗಿತ್ತು. ಆ ನಂತರ ನಾನು ಕಾಂಗ್ರೆಸ್​​ಲ್ಲಿದ್ದಾಗ ಶೆಟ್ಟರ್​ಗೆ ಅನ್ಯಾಯ ಆಗಿದೆ. ಅದನ್ನು ಸರಿಪಡಿದಬೇಕು ಎಂದು ಬಿಜೆಪಿಯ ಪ್ರತಿಯೊಬ್ಬ ನಾಯಕರು ಹೇಳ್ತಿದ್ರು. ವಿಜಯೇಂದ್ರ ರಾಜ್ಯಾಧ್ಯಕ್ಷರಾದ ಬಳಿಕ ಯಡಿಯೂರಪ್ಪ ನನ್ನನ್ನು ಹಲವು ಬಾರಿ ಸಂಪರ್ಕ ಮಾಡಿದ್ದರು.  ನೀವು ಬಿಜೆಪಿಗೆ ಮತ್ತೆ ಬರಲೇಬೇಕೆಂದು ಯಡಿಯೂರಪ್ಪ ಮತ್ತೆ ವರಿಷ್ಠರು ಕೂಡ ನೀವು ಪಕ್ಷಕ್ಕೆ ಬರಬೇಕೆಂದು ಭಾವನೆ ವ್ಯಕ್ತಪಡಿಸಿದ್ರು. ಆ ಭಾವನೆಗೆ ಸ್ಪಂದಿಸಿ ನಾನು ಮತ್ತೆ ಮರಳಿ ಗೂಡಿಗೆ ಬಂದಿದ್ದೇನೆ ಎಂದು ಮಾಜಿ ಸಿಎಂ ಜಗದೀಶ್​ ಶೆಟ್ಟರ್​ ಹೇಳಿದ್ದಾರೆ.

ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯಲ್ಲಿ ಸೂಕ್ತ ಗೌರವ ಕೊಡುವ ಭರವಸೆ ನೀಡಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಹಾಗೂ ಗೃಹ ಸಚಿವ ಅಮಿತ್​​ ಶಾ ಅವರು ನನ್ನ ಜೊತೆಗೆ ಗೌರವದಿಂದ ನಡೆದುಕೊಂಡಿದ್ದಾರೆ. ಬಿಜೆಪಿ ನನ್ನ ಮನೆ ನಾವು ಕಟ್ಟಿ ಬೆಳೆಸಿದ ಮನೆ, ನಮ್ಮ ತಂದೆ ಜನಸಂಘದಿಂದಲೇ ಪಕ್ಷ ಕಟ್ಟಿದ್ದಾರೆ ಎಂದರು.

ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ನಡೆದ ಘಟನಾವಳಿಗ ಹಿನ್ನೆಲೆಯಲ್ಲಿ ನಾನು ಕಾಂಗ್ರೆಸ್​ ಸೇರ್ಪಡೆ ಆಗಿದ್ದೆ.  ಕಾಂಗ್ರೆಸ್​ ತೊರೆದು ಬಿಜೆಪಿಗೆ ಬಂದ ಮೂಲ ಉದ್ದೇಶ ಪ್ರಧಾನಿ ಮೋದಿ ಉತ್ತಮ ಕೆಲಸ ಮಾಡಿದ್ದಾರೆ. ಅವರು ಮತ್ತೊಮ್ಮೆ ಪ್ರಧಾನಿ ಆಗಬೇಕು ಎಂಬುದಾಗಿದೆ ಹಾಗೂ ನಂಬರ್​ ಒನ್​ ಸ್ಥಾನಕ್ಕೆ ಬರಬೇಕು ಎಂಬುದು ನನ್ನ ಅಭಿಲಾಷೆ ಎಂದು ಹೇಳಿದರು.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments