ಬೆಂಗಳೂರು : ಡಾ. ಚೋಳನಹಳ್ಳಿ ನಂಜಪ್ಪ ಮಂಜುನಾಥ್ ಜಯದೇವ ಹೃದ್ರೋಗ ಸಂಸ್ಥೆಯಿಂದ ಹೊರ ನಡೆಯಲಿದ್ದಾರೆ. ಈ ತಿಂಗಳ 30 ಅವರ ಸೇವಾವಧಿಯ ಕೊನೆಯ ದಿನ. ಅಂದೇ ಅವರ ನಿವೃತ್ತಿ.
ಡಾ. ಮಂಜುನಾಥ್ ಅವರದು ಸುದೀರ್ಘ ವೃತ್ತಿ ಬದುಕು. ಮೈಸೂರಿನಲ್ಲಿ ಎಂ ಬಿ ಬಿಎಸ್ ಮಾಡಿದ ನಂತರ ಮಂಗಳೂರು ಮತ್ತು ಬೆಂಗಳೂರಿನಲ್ಲಿ ಉನ್ನತ ವ್ಯಾಸಂಗ. .ಡಾ. ಮಂಜುನಾಥ್ ಅವರ ಹೆಸರಿನ ಜೊತೆಗೆ ಕೇಳಿ ಬರುವ ಹೆಸರು ಜಯದೇವ ಹೃದ್ರೋಗ ಆಸ್ಪತ್ರೆ..ಈ ಸರ್ಕಾರಿ ಸಂಸ್ಥೆಯನ್ನು ಸಾಮಾನ್ಯ ಜನರ ಆಸ್ಪತ್ರೆಯನ್ನಾಗಿ ರೂಪಿಸಿದ ಕೀರ್ತಿ ಡಾ. ಮಂಜುನಾಥ್ ಅವರಿಗೆ ಸಲ್ಲಬೇಕು.
2007 ರಲ್ಲಿ ಜಯದೇವ ಹೃಉದ್ರೋಗ ಸಂಸ್ಥೆಯ ಮುಖ್ಯಸ್ಥರಾದ ಡಾ. ಮಂಜುನಾಥ್ ಸರ್ಕಾರಗಳು ಬದಲಾದರೂ ಅವರು ಬದಲಾಗಲಿಲ್ಲ. ಕಾಂಗ್ರೆಸ್ ಇರಲಿ, ಬಿಜೆಪಿ ಇರಲಿ ಜೆಡಿಎಸ್ ಇರಲಿ, ಎಲ್ಲರಿಗೂ ಡಾ. ಮಂಜುನಾಥ್ ಯಾವುದೇ ಪಕ್ಷ ಅಧಿಕಾರಕ್ಕೆ ಬರಲಿ, ಡಾ ಮಂಜುನಾಥ್ ಅಧಿಕಾರ ಅಭಾದಿತ.
ಒಂದು ಸರ್ಕಾರಿ ಅಸ್ಪತ್ರೆ ಖಾಸಗಿ ಅಸ್ಪತ್ರೆಗಳ ಜೊತೆ ಪೈಪೋಟಿ ನಡೆಸುವಂತೆ ಬೆಳೆಯಿತು. ಜನರ ಕೈಗೆಟಕುವ ಬೆಲೆಯಲ್ಲಿ ಚಿಕಿತ್ಸೆಯ ವ್ಯವಸ್ಥೆ ಜಾರಿಗೆ ಬಂತು.
25 ಕೊಟಿ ರೂಪಾಯಿಗಳ ಸಂಚಯಿತು ನಿಧಿಯನ್ನು ಪ್ರಾರಂಭಿಸಿ ಈ ಹಣದಿಂದ ಬಡವರಿಗೆ ಉಚಿತ ಚಿಕಿತ್ಸೆ ಮತ್ತು ಔಷಧೋಪಚಾರ ನೀಡುವ ವ್ಯವಸ್ಥೆ ಮಾಡಲಾಯಿತು. ಹಾಗೆ ಮೈಸೂರು ಮತ್ತು ಗುಲ್ಬರ್ಗದಲ್ಲಿ ಜಯದೇವ ಅಸ್ಪತ್ರೆಯ ಶಾಖೆಗಳನ್ನು ಪ್ರಾರಂಭಿಸಲಾಯಿತು. ಸರ್ಕಾರಿ ಅಸ್ಪತ್ರೆ ಎಂದರೆ ಗಲೀಜಿನ ಅಗರ ಎಂದು ನಂಬಿರುವ ಸಂದರ್ಭದಲ್ಲಿ ಸ್ವಚ್ಛ ಹೈಟೆಕ್ ಆಸ್ಪತ್ರೆಯನ್ನಾಗಿ ರೂಪಿಸಿದವರು ಡಾ, ಮಂಜುನಾಥ್.
1957 ಜುಲೈ ನಲ್ಲಿ ಜನಸಿದ ಡಾ. ಮಂಜುನಾಥ್ ಅವರಿಗೆ ಈಗ ಬರೋಬ್ಬರಿ 66 ವರ್ಷ. ಸುಮಾರು ಎಂಟು ವರ್ಷಗಳ ಸೇವಾ ವಿಸ್ತರಣೆಯ ನಂತರ ಈಗ ನಿರ್ಗಮನ. ಡಾ. ಮಂಜುನಾಥ್ ಸಾಧನೆ ಎನೇ ಇರಲಿ, ದೇವೇಗೌಡರ ಅಳಿಯ ಆದ ಅವರ ಬಗ್ಗೆ ಹಲವು ಟೀಕೆಗಳಿಗೂ ಕೊರತೆಯಿಲ್ಲ. ಮಾಜಿ ಪ್ರಧಾನಿ ದೇವೇಗೌಡರ ಅಳಿಯ ನಾಗಿರುವುದರಿಂದ ಆವರಿಗೆ ಹೆಚ್ಚಿನ ಅವಕಾಶ ದೊರಕಿದೆ ಎಂಬ ದೂರುಗಳಿವೆ. ಇವರ ಸೇವಾವಧಿ ವಿಸ್ತರಣೆಯಿಂದ ಅವಕಾಶ ಕಳೆದುಕೊಂಡ ಅರ್ಹರು ಬೇಸರಗೊಂಡಿದ್ದರೆ ಅದು ಸಹಜ.
ಡಾ. ಮಂಜುನಾಥ್ ಅವರಿಗೆ ಇಷ್ಟು ವರ್ಷಗಳ ಕಾಲ ಸೇವಾ ವಿಸ್ತರಣೆ ನೀಡಿದ್ದು ಸರಿಯೇ ಎಂಬು ಪ್ರಶ್ನಿಸುವವೆರೂ ಇದ್ದಾರೆ. ಇದರಿಂದ ಹಲವರು ಅವಕಾಶ ವಂಚಿತರಾದರು ಎಂದು ವಾದಿಸುವವರೂ ಇದ್ದಾರೆ. ಢಾ. ಮಂಜುನಾಥ್ ಅವರು ತಮ್ಮ ಉತ್ತರಾಧಿಕಾರಿಯನ್ನು ಬೆಳೆಸಿ ನಿರ್ಗಮಿಸಬೇಕಿತ್ತು ಎಂಬ ಮಾಗಳು ಇವೆ. ಈ ಮಾತುಗಳನ್ನು ಸಂಪೂರ್ಣವಾಗಿ ನಿರಾಕರಿಸಲು ಸಾದ್ಯವಿಲ್ಲ.
ಡಾ. ಮಂಜುನಾಥ್ ಅವರ ಸೇವಾ ವಿಸ್ತರಣೆಗೆ ಸಂಬಂಧಿಸಿದಂತೆ ಸರ್ಕಾರಗಳಷ್ಟೇ ಉತ್ತರ ಕೊಡಬೇಕು.
ಹೃದ್ರೋಗ ಚಿಕಿತ್ಸೆಗಾಗಿ ಕೋಟ್ಯಾಂತರ ರೂಪಾಯಿ ನೀಡಬೇಕಾದ ಇವತ್ತಿನ ಸಂದರ್ಭದಲ್ಲಿ ಉಚಿತ ಚಿಕಿತ್ಸೆ ನೀಢುವುದು ಸಾಮಾನ್ಯ ಕೆಲಸ ಅಲ್ಲ. ಹಾಗೆ ತಮ್ಮ ಸೇವಾವಧಿಯಲ್ಲಿ ಜಯದೇವ ಪ್ರತಿಶತ 300 ರಷ್ಟು ಬೆಳವಣಿಗೆ ಕಂಡಿದ್ದೂ ಸಾಧನೆಯೇ.
ಪದ್ಮಶ್ರೀ ಪ್ರಶಸ್ತಿಯನ್ನು ಪಡೆದಿರುವ ಡಾ. ತಮ್ಮ ವೃತ್ತಿಯನ್ನು ಮುಂದುವರಿಸುವುದಾಗಿ ಹೇಳಿದ್ದಾರೆ. ರಾಜಕೀಯ ಪ್ರವೇಶ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ, ಅವರು ಹೃದ್ರೋಗಿಗಳ ಪರೀಕ್ಷೆಗೆ ತೆಗೆದುಕೊಳ್ಳುತ್ತಿದ್ದುದು 400 ರೂಪಾಯಿ ಕನ್ಸಲ್ಟೇಷನ್ ಫೀ. ಇನ್ನು ಮುಂದೆ ಇದೇ ವೃತ್ತಿಯನ್ನು ಅವರು ಮುಂದುವರಿಸಬಹುದು.
ಇನೇ ಇರಲಿ ಜಯದೇವ ಹೃದ್ರೋಗ ಸಂಸ್ಥೆ ಇತಿಹಾಸದಲ್ಲಿ ಡಾ. ಮಂಜುನಾಥ್ ಅವರ ಅವಧಿ ಹಲವು ಕಾರಣಗಳಿಗಾಗಿ ಮುಖ್ಯವಾದುದು. ಸರ್ಕಾರಿ ಸಂಸ್ಥೆಯನ್ನು ಮಾದರಿಯಾಗಿ ಬೆಳೆಸಿದ ಡಾ.ಮಂಜುನಾಥ್ ಅವರ ಕಾರ್ಯಶೈಲಿ ಉಳಿದವರಿಗೆ ಮಾದರಿಯಾಗಲಿ. ಜಯದೇವ ಆಸ್ಪತ್ರೆಯ ನೂತನ ಸಾರಥಿ ಮತ್ತಷ್ಟು ಜನಪರ ಕೆಲಸ ಮಾಡಲಿ.
ಎನಿ ವೇ ಆಲ್ ದ ಬೆಸ್ಟ್ ಡಾ. ಮಂಜುನಾಥ್. ಜನಸೇವೆಗೆ ಸರ್ಕಾರಿ ಸಂಸ್ಥೆಗಳೇ ಬೇಕೆಂದೇನಿಲ್ಲ. ಜನರಿಗೆ ಮತ್ತಷ್ಟು ಸೇವೆ ನೀಡುವ ಶಕ್ತಿ ನಿಮ್ಮದಾಗಲಿ.