Saturday, September 13, 2025
21.6 C
Bengaluru
Google search engine
LIVE
ಮನೆ#Exclusive Newsಜಮೀರ್​ ಅಹ್ಮದ್​ ಸೂಪರ್​ ಸಿಎಂ ತರ ವರ್ತಿಸುತ್ತದ್ದಾರೆ : ಎಂ.ಪಿ.ರೇಣುಕಾಚಾರ್ಯ

ಜಮೀರ್​ ಅಹ್ಮದ್​ ಸೂಪರ್​ ಸಿಎಂ ತರ ವರ್ತಿಸುತ್ತದ್ದಾರೆ : ಎಂ.ಪಿ.ರೇಣುಕಾಚಾರ್ಯ

 

 ದಾವಣಗೆರೆ: ಸೂಪರ್‌ ಸಿಎಂರಂತೆ ವರ್ತಿಸುತ್ತಿರುವ ವಕ್ಫ್​ ಸಚಿವ ಜಮೀರ್‌ಗೆ ಕಡಿವಾಣ ಹಾಕಿ ಎಂದು ಮಾಜಿ ಸಚಿವ, ಎಂ.ಪಿ.ರೇಣುಕಾಚಾರ್ಯ ಆಗ್ರಹಿಸಿದ್ದಾರೆ. ಭಾನುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಜಮೀರ್ ವಕ್ಫ್​ ಮಂಡಳಿಗೆ ಹಿಂದುಗಳಿಗೆ ಸೇರಿದ ಜಮೀನು, ಮಠಗಳು, ದೇವಸ್ಥಾನ, ಪರಿಶಿಷ್ಟರು, ಹಿಂದುಳಿದವರ ಜಮೀನು ಸ್ವಾಧೀನಪಡಿಸಿಕೊಳ್ಳಲು ಹವಣಿಸುತ್ತಿದ್ದಾರೆ. ಇವತ್ತು ರೈತರು, ಮಠ, ಮಂದಿರಗಳ   ಆಸ್ತಿಗಳನ್ನು  ವಕ್ಫ್​  ಆಸ್ತಿ  ಅಂತಾ ಘೋಷಿಸಿದವರು ನಾಳೆ ವಿಧಾನಸೌಧವನ್ನೂವಕ್ಫ್​ ಆಸ್ತಿ ಎಂದು ಘೋಷಿಸಬಹುದು ಎಂದರು. ರೈತರು, ಮಠಗಳಿಗೆ ರಾಜ್ಯ ಸರ್ಕಾರ ವಕ್ಫ್​ ಮಂಡಳಿಯಿಂದ ಜಾರಿಗೊಳಿಸಿದ ನೋಟಿಸ್‌ ಮಾತ್ರವಲ್ಲದೇ, ಆರ್‌ಟಿಸಿ ಕಾಲಂ 11ರಲ್ಲಿ ನಮೂದಿಸಿದ ವಕ್ಫ್​ ಹೆಸರನ್ನೂ ಸಂಪೂರ್ಣ ರದ್ದುಪಡಿಸಬೇಕು. ಪಹಣಿಯ ಕಾಲಂ 11ರಲ್ಲಿ ವಕ್ಫ್​ ಆಸ್ತಿ ಎಂಬುದಾಗಿ ನಮೂದು ಮಾಡಿದ ನಂತರ ಬದಲಾವಣೆ ಸಾಧ್ಯವಿಲ್ಲ. ಹಾಗಾಗಿ, ಸರ್ಕಾರವು ವಕ್ಫ್​ ಮಂಡಳಿಯನ್ನೇ ರದ್ದುಪಡಿಸಬೇಕು ಎಂದು ಆಗ್ರಹಿಸಿದರು.

+ posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments