ಜಾತಿ ಗಣತಿ ವರದಿ ಇಂಪ್ಲಿಮೆಂಟ್ ಆಗದಿದ್ರೆ 200 ಕ್ಷೇತ್ರದಲ್ಲಿ ಕೈಗೆ ಸೋಲು ಖಚಿತವಂತೆ. ಇದು ಕೇವಲ ಊಹಾಪೋಹವಲ್ಲ.. ಸಿಎಂ ಕಚೇರಿ ಪಡಸಾಲೆಯಿಂದಲೇ ಬಂದ ಸ್ಫೋಟಕ ಸಮೀಕ್ಷೆ ಇದಾಗಿದೆ.
ಜಾತಿಗಣತಿ ವಿರುದ್ಧ ಆಕ್ರೋಶ ಸ್ಪೋಟಗೊಳ್ಳುತ್ತಲೇ ಸಿದ್ದರಾಮಯ್ಯ ಹೊಸ ಅಸ್ತ್ರ ಪ್ರಯೋಗಿಸಿದ್ದಾರೆ. ಖುದ್ದು ಸಂಪುಟ ಸದಸ್ಯರು ಎದುರಾಡಿದಾಗ ಸಿದ್ದು ತಲೆ ಗಿರ ಗಿರ ಅನ್ನೋಕೆ ಶುರುವಾಗಿತ್ತು. ಹೀಗಾಗಿ ತನ್ನ ಅಹಿಂದ ಸಿದ್ಧಾಂತ ಉಳಿಸಲು ಕಡೇ ಆಟ ಆಡಲು ನಿರ್ಧರಿಸಿದ್ದಾರೆ. ಮತ್ತೊಮ್ಮೆ ರಹಸ್ಯ ಸಮೀಕ್ಷೆ ಮಾಡಿಸಿದ್ದಾರೆ. ಇದನನ್ನು ರಾಹುಲ್ ಗಾಂಧಿಯವರ ಮುಂದಿಡಲು ಸಿದ್ಧತೆ ಮಾಡಿಕೊಳ್ಳಲಾಗ್ತಿದೆ.
ಯಾರೂ ವಿರೋಧಿಸಿದ್ರೂ ಜಾತಿಗಣತಿಯನ್ನು ಜಾರಿ ಮಾಡಿಯೇ ಸಿದ್ದ ಅಂತಿದ್ದಾರೆ ಸಿದ್ದರಾಮಯ್ಯ. ಇದಕ್ಕೆ ಪ್ರಬಲವಾದ ಕಾರಣವನ್ನೂ ಸಹ ಕಂಡಕೊಂಡಿದ್ದಾರೆ. ಜಾತಿಗಣತಿ ವರದಿ ಜಾರಿ ಮಾಡದಿದ್ರೆ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋಲುತ್ತಂತೆ. ಕಾಂಗ್ರೆಸ್ ಗೆಲುವಿಗಾಗಿ ಜಾತಿ ಗಣತಿ ಜಾರಿ ಅನಿವಾರ್ಯ ಅಂತಾ ಸಿದ್ದು ಆಪ್ತ ವಲಯದ, OBC ತಜ್ಞರಿಂದ ಸಮೀಕ್ಷಾ ವರದಿಯಲ್ಲಿ ಹೀಗಂತ ಉಲ್ಲೇಖಿಸಲಾಗಿದೆ.
ಈ ಅಹಿಂದ ಸಮೀಕ್ಷೆಯಲ್ಲಿ ಏನಿದೆ ಅನ್ನೋದನ್ನ ನೋಡೋದಾದ್ರೆ…
- 201 ಕ್ಷೇತ್ರಗಳಲ್ಲಿ ಅಹಿಂದ ಮತಗಳಿಲ್ಲದೇ ಯಾರೂ ಕೂಡ ಗೆಲ್ಲುವುದಕ್ಕೆ ಆಗೋಲ್ಲ.
- 23 ಕ್ಷೇತ್ರಗಳಲ್ಲಷ್ಟೇ ಮೇಲ್ಜಾತಿಗಳ ಮತಗಳ ಪ್ರಾಬಲ್ಯ ಇದೆ.
- ಹೀಗಾಗಿ ಯಾವುದೇ ಕಾರಣಕ್ಕೂ ಜಾತಿ ಗಣತಿ ಜಾರಿ ತಡೆಯುವುದು ಬೇಡ.
- ಬಿಜೆಪಿ, ಜೆಡಿಎಸ್ ಒತ್ತಡಕ್ಕೆ ಜಾತಿ ಗಣತಿ ಜಾರಿ ತಡೆದರೆ,ಕಾಂಗ್ರೆಸ್ಗೇ ನಷ್ಟ.
ಹೀಗೆ ರಾಹುಲ್ ಗಾಂಧಿ ಎದುರು ವಿವರವಾದ ವರದಿ ಸಲ್ಲಿಕೆಗೆ ಸಿದ್ಧರಾಮಯ್ಯ ನಿರ್ಧಾರ ಮಾಡಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರ ಅಹಿಂದ ಶಪಥಕ್ಕೂ ಕಾರಣವೂ ಇದೆ. ತನ್ನ ಜೀವಿತಾವಧಿಯಲ್ಲಿ ಅಹಿಂದ ಪರ ಹೋರಾಡಿದವರು. ಅಹಿಂದ ಅನ್ನುವ ಮತ ಬ್ಯಾಂಕ್ ಇದೆಯೋ ಇಲ್ವೋ ಗೊತ್ತಿಲ್ಲ. ಆದರೆ ಅಹಿಂದ ಅನ್ನುವ ಪದದಿಂದ ಒಕ್ಕಲಿಗ, ಲಿಂಗಾಯತ, ಬ್ರಾಹ್ಮಣ ಸಮುದಾಯಗಳು ಹೆದರಿದ್ದು ಸತ್ಯ. ದೇಶವ್ಯಾಪಿ ಅಹಿಂದ ಹವಾ ಎಬ್ಬಿಸಿದ್ದು ಸತ್ಯ. ಒಂದು ವೇಳೆ ಜಾತಿ ಗಣತಿ ಹೆಸರಲ್ಲಿ ಅಹಿಂದ ಒಂದಾದ್ರೆ, ಅಹಿಂದ ಕೋಟೆಯನ್ನ ಇನ್ನೆಂದೂ ರಾಜ್ಯದಲ್ಲಿ ಕೆಡವಲು ಸಾಧ್ಯವಿಲ್ಲ. ಹೀಗಾಗಿ ತಾನು ನಂಬಿದ ಸಮುದಾಯಗಳಿಗೆ ಐತಿಹಾಸಿಕ ಕೊಡುಗೆ ನೀಡಲು ಸಿದ್ದರಾಮಯ್ಯ ಕನಸು ಕಟ್ಟಿದ್ದು ನನಸು ಮಾಡಲು ಹೊರಟ್ಟಿದ್ದಾರೆ.
ಮತ್ತೊಂದು ಅಂಶವನ್ನು ಗಮನಿಸೋದಾದ್ರೆ, ಹೆಚ್.ಡಿ. ದೇವೇಗೌಡರ ಪಾಲಿಟಿಕ್ಸ್ಗರ ತಿರುಗೇಟು ಕೊಡಲು ಸಿದ್ದರಾಮಯ್ಯ ಹೊರಟಿದ್ದಾರೆ. ಒಳಮೀಸಲಾತಿ ತಂದು ಅಹಿಂದ ಛಿದ್ರಗೊಳಿಸಿದ್ದ ದೇವೇಗೌಡರು, ಭೂಸುಧಾರಣೆ ಕಾಯ್ದೆಗೆ ತಿದ್ದುಪಡಿ ತಂದು ಅರಸು ಆಶಯ ಮುಗಿಸಿದ್ರು. ಇದೆಲ್ಲವನ್ನೂ ಮೌನವಾಗಿಯೇ ಗಮನಿಸುತ್ತ ಬಂದಿದ್ದ ಸಿದ್ದರಾಮಯ್ಯ, ಇದೀಗ ತಮ್ಮ ಕಡೆಯ ಅಧಿಕಾರಾವಧಿಯಲ್ಲಿ, ತನ್ನ ಸಿದ್ಧಾಂತ ಚಿರಾಯುವಾಗಿಸಲು ಜಾತಿಗಣತಿ ಜಾರಿಯ ಅಸ್ತ್ರ ಬಿಟ್ಟಿದ್ದಾರೆ.