ಶಿವಮೊಗ್ಗ: ತುಂಬ ಸಂತೋಷದ ಸಂಗತಿ ಆಗಿದೆ. ಮೋದಿ ಅವರು ನನ್ನ ಜೊತೆ ಉಳಿದಿದ್ದಾರೆ. ಬಿಜೆಪಿ ಪಕ್ಷ. ಕೋರ್ಟ್ ಮತ್ತು ಚುನಾವಣೆ ಆಯೋಗಕ್ಕೆ ಹೋಗಿದ್ದರು. ಆದರೆ ಅವರಿಗೆ ಎರಡು ಕಡೆ ಹಿನ್ನಡೆ ಆಗಿದೆ ಎಂದು ಪಕ್ಷೇತರ ಅಭ್ಯರ್ಥಿ ಕೆ. ಎಸ್. ಈಶ್ವರಪ್ಪ ಹೇಳಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೋದಿ ಪೋಟೋ ಬಳಕೆಗೆ ನನಗೆ ಅವಕಾಶ ಸಿಕ್ಕಿದೆ. ಮೋದಿ ಅವರು ನನ್ನ ಹೃದಯಲ್ಲಿ ಇದ್ದಾರೆ ಮೋದಿ ಅವರ ಆದರ್ಶ ನನಗೆ ಮಾದರಿ , ಚುನಾವಣೆ ಗೆಲ್ಲಲು ಮೋದಿ ಫೋಟೋ ನನಗೆ ಅನುಕೂಲ ಆಗಿದೆ ಎಂದರು.
ಶಿರಾಳಕೊಪ್ಪ ದಲ್ಲಿ ನಡೆಯುತ್ತಿದ್ದ ನನ್ನ ಕಾರ್ಯಕ್ರಮದಲ್ಲಿ ಕೆಲ ಗೂಂಡಾಗಳಿಂದ ಕಾರ್ಯಕ್ರಮಕ್ಕೆ ಅಡ್ಡಿ ಮಾಡಿಸಿದ್ದಾರೆ. ನಾವು ಗೂಂಡಾ ರಾಜ್ಯದಲ್ಲಿದ್ದೇವೆ, ನಿನ್ನೆ ಘಟನೆಯಿಂದ ನನಗೆ ಬೇಸರ ಆಗಿದೆ. ಈ ಘಟನೆಯನ್ನು ಬಿಎಸ್ ವೈ. ಮತ್ತು ರಾಘವೇಂದ್ರ ಗಮನಿಸಬೇಕು. 40 ವರ್ಷದಲ್ಲಿ ಇದೇ ಮೊದಲ ಬಾರಿಗೆ ಈ ರೀತಿ ಘಟನೆ ನಡೆದಿದೆ. ಬಿಎಸ್ ವೈ ಮತ್ತು ರಾಘವೇಂದ್ರ ಕುತಂತ್ರ ಮಾಡುತ್ತಿದ್ದಾರೆ. ಇದೇ ರೀತಿ ಮುಂದುವರೆಸಿದರೆ ನಾನು ತಕ್ಕ ಉತ್ತರ ನೀಡುತ್ತೇನೆ , ಯಡಿಯೂರಪ್ಪ ಈ ರೀತಿ ಮಾಡುತ್ತಾರೆಂದು ಕೊಂಡಿರಲಿಲ್ಲ ಎಂದು ಈಶ್ವರಪ್ಪ ಬೇಸರ ಹೊರಹಾಕಿದರು.
ಫ್ರೀಡಂ ಟಿವಿಯಲ್ಲಿ ಜಾಹೀರಾತು ನೀಡಲು
ಈ ನಂಬರ್ ಗೆ ಸಂಪರ್ಕಿಸಿ
Phone Number : +91 9164072277
Email id : salesatfreedomtv@gmail.com