Wednesday, April 30, 2025
30.3 C
Bengaluru
LIVE
ಮನೆ#Exclusive NewsTop Newsಹಿಟ್ ಆ್ಯಂಡ್ ರನ್ ಕೇಸ್; ಲಾರಿ ಚಾಲಕ ವಶಕ್ಕೆ

ಹಿಟ್ ಆ್ಯಂಡ್ ರನ್ ಕೇಸ್; ಲಾರಿ ಚಾಲಕ ವಶಕ್ಕೆ

ಧಾರವಾಡ: ನಗರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೈಕ್ ಚಾಲಕನಿಗೆ ಆ್ಯಕ್ಸಿಡೆಂಟ್ ಮಾಡಿ ಪರಾರಿಯಾಗುತ್ತಿದ್ದ ಲಾರಿಯನ್ನು ಸಿನಿಮೀಯ ರೀತಿಯಲ್ಲಿ ಚೇಸ್ ಮಾಡಿ ವಶಕ್ಕೆ ಪಡೆಯುವಲ್ಲಿ ಧಾರವಾಡ ಸಂಚಾರಿ ಠಾಣೆ ಪೋಲಿಸರು ಯಶಸ್ವಿಯಾಗಿದ್ದಾರೆ.

ಕೇರಳ ಮೂಲದ ನೊಂದಣಿ ಹೊಂದಿರುವ ಲಾರಿಯು ಧಾರವಾಡ ಹೊರವಲಯ ರಾಷ್ಟ್ರೀಯ ಹೆದ್ದಾರಿ ಮೂಲಕ ಬೆಳಗಾವಿ ಕಡೆಗೆ ಸಾಗುತ್ತಿದ್ದ ವೇಳೆ, ಧಾರವಾಡದ ಹೊಯ್ಸಳ ನಗರದ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೈಕ್ ಸವಾರನಿಗೆ ಹಿಟ್ ಆ್ಯಂಡ ರನ್ ಮಾಡಿ ಪರಾರಿಯಾಗಲು ಮುಂದಾಗಿತ್ತು. ಹಿಟ್ ಆ್ಯಂಡ್ ರನ್ ನಿಂದಾಗಿ ಧಾರವಾಡದ ಕುಮಾರಸ್ವಾಮಿ ನಗರ ಸುಭಾಷ್‌ಚಂದ್ರ ಕೋರೆ ಸ್ಥಳದಲ್ಲಿಯೇ ಸಾವನಪ್ಪಿದ್ದರು. ಸ್ಥಳೀಯರ ಮಾಹಿತಿ ಮೇರೆಗೆ ಕ್ಯೂಕಾಗಿ ಸ್ಥಳಕ್ಕೆ ಭೇಟಿ ನೀಡಿದ ಸಂಚಾರಿ ಪೊಲೀಸರು ಮೃತ ಬೈಕ್ ಸವಾರನ ಮೃತ ದೇಹವನ್ನು ಜಿಲ್ಲಾಸ್ಪತ್ರೆಗೆ ಸಾಗಿಸಿ, ಲಾರಿಯನ್ನು ಸಿನಿಮೀಯ ರೀತಿಯಲ್ಲಿ ಚೇಸ್ ಮಾಡಿ ತೆಗೂರು ಬಳಿ ವಶಕ್ಕೆ ಪಡೆದ ಠಾಣೆಗೆ ಕರೆತಂದು ಕಾನೂನು ಕ್ರಮ ಕೈಗೊಂಡಿದ್ದಾರೆ. ಈ ಕುರಿತು ಧಾರವಾಡ ಸಂಚಾರಿ ಪೊಲೀಸರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

+ posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments