ಬೆಂಗಳೂರು : ಕಳೆದ ಮೂರ್ನಲ್ಕು ದಿನಗಳ ಹಿಂದೆ ಜಯನಗರ ಕಾಂಪ್ಲೆಕ್ಸ್ ಬಳಿ ಹಿರಿಯ ನಾಗರೀಕ ವ್ಯಾಪಾರಿಗಳೊಬ್ಬರ ಬ್ಯಾಗ್ ಇಡಿದು ಎಳೆದಾಡಿದ ವಿಡಿಯೋ ವೈರಲ್ ಆಗಿತ್ತು. ವೃದ್ದರೊಂದಿಗೆ ಮಾರ್ಷಲ್ ಗಳು ಅಮಾನವೀಯವಾಗಿ ನಡೆದುಕೊಂಡ ವಿಡಿಯೋ , ವೈರಲ್ ಆದ ಕೆಲವೇ ಕ್ಷಣಗಳಲ್ಲಿ ಸಾರ್ವಜನಿಕ ವಲಯದಿಂದ ಸಾಕಷ್ಟು ವಿರೋಧ, ಆಕ್ರೋಶ ವ್ಯಕ್ತವಾಗಿತ್ತು.
ಈ ಸಂಬಂಧ ಬಿಬಿಎಂಪಿಯ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಾತ್ಕಾಲಿಕವಾಗಿ ಇಬ್ಬರು ಮಾರ್ಷಲ್ಗಳನ್ನ ವಜಾ ಮಾಡಿದ್ದಾರೆ .ಇಬ್ಬರು ಮಾರ್ಷಲ್ಗಳು ಬೆಂಗಳೂರು ದಕ್ಷಿಣ ವಲಯದ ಜಯನಗರ ವಾಣಿಜ್ಯ ಸಂಕೀರ್ಣದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು.