Thursday, November 20, 2025
19.9 C
Bengaluru
Google search engine
LIVE
ಮನೆ#Exclusive NewsTop Newsಮಗನಿಗೆ ಕೆಲಸ ಕೊಡಿಸುವಂತೆ ಪುರಸಭೆ ಕಚೇರಿ ಮುಂದೆ ತಂದೆ ಪ್ರತಿಭಟನೆ

ಮಗನಿಗೆ ಕೆಲಸ ಕೊಡಿಸುವಂತೆ ಪುರಸಭೆ ಕಚೇರಿ ಮುಂದೆ ತಂದೆ ಪ್ರತಿಭಟನೆ

ಗದಗ: ಮಗನಿಗೆ ಕೆಲಸ ಕೊಡುವಂತೆ ಮೈಗೆ ಮಲ ಬಳಿದುಕೊಂಡು ಪುರಸಭೆ ಎದುರು ವ್ಯಕ್ತಿಯೊಬ್ಬ ವಿಚಿತ್ರವಾಗಿ ಪ್ರತಿಭಟನೆ ನಡೆಸಿರುವ ಘಟನೆ ಗದಗ ಜಿಲ್ಲೆ ಲಕ್ಷ್ಮೇಶ್ವರ ಪುರಸಭೆ ಆವರಣದಲ್ಲಿ ನೆಡೆದಿದೆ.

ಸುರೇಶ್​ ಬಸವನಾಯಕ್​ ಎಂಬಾತ ಧರಣಿ ಸತ್ಯಾಗ್ರಹ ಮಾಡಿದ್ದು, ಪುರಸಭೆಯಲ್ಲಿ ಮಗನಿಗೆ ಕೆಲಸ ಕೊಡುವಂತೆ ಪಟ್ಟು ಹಿಡಿದಿದ್ದಾನೆ. ಇದಕ್ಕಾಗಿ ಮೈಗೆ ಮಲ ಬಳಿದುಕೊಂಡು ಪ್ರತಿಭಟನೆ ನಡೆಸಿದ್ದಾರೆ.

40 ವರ್ಷಗಳಿಂದ ಪುರಸಭೆಯಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದು, ಈಗ ಮಗನಿಗೆ ಕೆಲಸ ಕೊಡಿ ಎಂದು ಸುರೇಶ್​ ಆಗ್ರಹಿಸಿದ್ದಾನೆ. ಈ ವೇಳೆ ಪುರಸಭೆಯವರು ಮ್ಯಾನ್​ ಫವರ್​ ಏಜೆನ್ಸಿ ಮೂಲಕ ಅರ್ಜಿ ಹಾಕುವಂತೆ ಹೇಳಿದ್ದಾರೆ. ಆದರೆ ಪಟ್ಟು ಬಿಡದ ಸುರೇಶ್​​ ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದಾನೆ.

ವಿನೂತನ ಪ್ರತಿಭಟನೆಯಿಂದಾಗಿ ಸ್ಥಳದಲ್ಲಿ ಕೆಲ ಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಕೆಲ ಹೊತ್ತಿನ ಬಳಿಕ ಪೊಲೀಸರು ಸುರೇಶ್​ನನ್ನು ಸಮಾಧಾನ ಮಾಡಿ ಅಲ್ಲಿಂದ ಕಳುಹಿಸಿದ್ದಾರೆ.

+ posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments