ಬೆಂಗಳೂರಿನ ಭೈರತಿಯಲ್ಲಿ ಸಂಜೀವಿನಿ ಹೆಲ್ತ್ ಕ್ಲಿನಿಕ್ ಇಟ್ಟುಕೊಂಡಿರುವ ನಕಲಿ ವೈದ್ಯ ಡಾ ಪ್ರಮೋದ್ ಬಡ ರೋಗಿಗಳ ಜೀವದ ಜೊತೆ ಚೆಲ್ಲಾಟ ಆಡ್ತಿದ್ದಾನೆ.
ಎಂಬಿಬಿಎಸ್ ಮಾಡಿರುವ ಡಾಕ್ಟರ್ ಒಬ್ಬರ ಹೆಸರಲ್ಲಿ ಕೆಪಿಎಂಇ ಸರ್ಟಿಫಿಕೇಟ್ ಪಡೆದ ವಂಚಕ ಪ್ರಮೋದ್ ತನ್ನನ್ನು ತಾನು ಡಾಕ್ಟರ್ ಅಂತ ಪೋಸ್ ಕೊಟ್ಟುಕೊಂಡು ಜನರನ್ನು ಯಾಮಾರಿಸ್ತಿದ್ದಾನೆ.
ಈ ಬಗ್ಗೆ ಮಾಹಿತಿ ಪಡೆದ ನಿಮ್ಮ ಫ್ರೀಡಂ ಟಿವಿ, ನಕಲಿ ಆಸ್ಪತ್ರೆಗೆ ಭೇಟಿ ಕೊಟ್ಟಾಗ, ವಿಷಯ ತಿಳಿದ ನಕಲಿ ವೈದ್ಯ ಅಲ್ಲಿಂದ ಎಸ್ಕೇಪ್ ಆಗಿದ್ದಾನೆ. ಇಡೀ ದಿನ ಕ್ಲಿನಿಕ್ ಗೆ ವಾಪಸ್ ಬಂದಿಲ್ಲ. ಕರೆ ಮಾಡಿದ್ರೆ ಕೀಮೋ ಥೆರಪಿ ಮಾಡ್ತಿದ್ದೀನಿ.. ಯಾರಿಗೋ ಹಾವು ಕಚ್ಚಿದೆ.. ಟ್ರೀಟ್ಮೆಂಟ್ ಕೊಡ್ತಿದ್ದೀನಿ ಅಂತಾ ಬೊಗಳೆ ಬಿಡ್ತಾನೆ.
ಇಷ್ಟಕ್ಕೂ ಟ್ರೀಟ್ಮೆಂಟ್ ಕೊಡೋಕೆ ನೀನು ಡಾಕ್ಟರ್ ಅಲ್ಲ.. ಕಾಂಪೌಂಡರ್ ಕೂಡ ಅಲ್ವಲ್ಲಪ್ಪ ಅಂತ ಕೇಳಿದ್ರೆ, ನಾನು ಹೈ ಲೆವೆಲ್ ಗೆ ಹೋಗ್ಬೇಕಾಗತ್ತೆ ಅಂತ ಮಿನಿಸ್ಟರ್ ಭೈರತಿ ಸುರೇಶ್ ಹೆಸರನ್ನು ಡಾಕ್ಟರ್ ಪ್ರಮೋದ್ ಬಳಸ್ತಾನೆ. ಮಿನಿಸ್ಟರ್ ಹೆಸರೇಳಿ ಬೆದರಿಸಲು ನೋಡಿದ್ದಾನೆ.
ಈ ಬಗ್ಗೆ ಭೈರತಿ ಸುರೇಶ್ ಪಿಎ ದೇವೇಂದ್ರ ಅವರಿಗೆ ಏನ್ರಿ ನಕಲಿ ಡಾಕ್ಟರ್ಗೆ ನೀವು ಸಪೋರ್ಟ್ ಮಾಡ್ತಿದ್ದೀರ ಅಂತ ಕೇಳಿದ್ರೆ, ಅಯ್ಯಯ್ಯೋ ಸಾಹೇಬ್ರು ಯಾಕೆ ಹಂಗೆ ಮಾಡ್ತಾರೆ. ಮನೆಗೆ ಬರ್ತಾರೆ, ಪರಿಚಯ ಇರೋದು ಹೌದು. ಅವರು ನಿಜವಾದ ಡಾಕ್ಟರ್ ಹೌದೋ ಅಲ್ವೋ ಅಂತ ನಾವು ಚೆಕ್ ಮಾಡಿಲ್ಲ. ಈಗಲೇ ನಕಲಿ ವೈದ್ಯ ಅಂತಾ ಗೊತಾಗ್ತಿರೋದು ಅಂತಾ ಸ್ಪಷ್ಟನೆ ನೀಡಿದ್ರು.
ಅಸಲಿಯತ್ತು ಏನಪ್ಪ ಅಂದ್ರೆ ಈ ಪ್ರಮೋದ್ ಮಾಡಿರೋದು ಎಲೆಕ್ಟ್ರೋಪತಿ ಕೋರ್ಸ್. ಅದು ಎಂಬಿಬಿಎಸ್ ಅಲ್ಲ. ಜತೆಗೆ ಎಲೆಕ್ಟ್ರೋಪತಿ ನಮ್ಮ ರಾಜ್ಯದಲ್ಲಿ ಬ್ಯಾನ್ ಆಗಿದೆ. ಆದ್ರೂ, ಎಂಬಿಬಿಎಸ್ ವೈದ್ಯನ ಹೆಸರಲ್ಲಿ ಹಾಡಹಗಲೇ ನೂರಾರು ಜನರಿಗೆ ಮನಸಿಗೆ ಬಂದಂಗೆ ಮೆಡಿಸಿನ್ ಕೊಡ್ತಿದ್ದಾನೆ ಈ ಫೋರ್ಜರಿ ಪ್ರಮೋದ.
ಯಾರೋ ಡಾ. ಚಂದ್ರಮೋಹನ್ ಅನ್ನೋರ ಹೆಸರಲ್ಲಿ ವಂಚಕ ಪ್ರಮೋದ್ ಸರ್ಟಿಫಿಕೇಟ್ ಪಡೆದಿದ್ದಾನೆ. ಆದರೆ ಆ ಡಾಕ್ಟರ್ ಚಂದ್ರಮೋಹನ್ ಕ್ಲಿನಿಕ್ ಗೆ ಬರೋದೆ ಇಲ್ಲ. ಅವನ ಹೆಸರಲ್ಲಿ ನಕಲಿ ಡಾಕ್ಟರ್ ಪ್ರಮೋದನ ಜನರ ಜೀವದ ಜೊತೆ ಆಟ ಆಡ್ತಿದ್ದಾನೆ. ಇಂಥವರನ್ನು ಆರೋಗ್ಯ ಸಚಿವರು ಮಟ್ಟ ಹಾಕಬೇಕಿದೆ.