Tuesday, June 24, 2025
25.1 C
Bengaluru
Google search engine
LIVE
ಮನೆ#Exclusive NewsTop Newsಬಾಂಗ್ಲಾದೇಶದಲ್ಲಿ ಬಂಧಿತರಾದ ಎಲ್ಲಾರಿಗೂ ನ್ಯಾಯ ಸಿಗಬೇಕು: ವಾಷಿಂಗ್ಟನ್​​​​​ನಲ್ಲಿ ರಾಜ್ಯ ಇಲಾಖೆ ಸ್ಪಷ್ಟನೆ

ಬಾಂಗ್ಲಾದೇಶದಲ್ಲಿ ಬಂಧಿತರಾದ ಎಲ್ಲಾರಿಗೂ ನ್ಯಾಯ ಸಿಗಬೇಕು: ವಾಷಿಂಗ್ಟನ್​​​​​ನಲ್ಲಿ ರಾಜ್ಯ ಇಲಾಖೆ ಸ್ಪಷ್ಟನೆ

ಬಾಂಗ್ಲಾದೇಶವು ಮೂಲಭೂತ ಮಾನವ ಹಕ್ಕುಗಳ ತತ್ವಗಳಿಗೆ ಅನುಗುಣವಾಗಿ ಎಲ್ಲಾ ಬಂಧಿತರಿಗೆ ಸೂಕ್ತ ಕಾನೂನು ಸಹಾಯ ಸಿಗುವಂತೆ ನೋಡಿಕೊಳ್ಳುಬೇಕು ಎಂದು ಅಮೆರಿಕ ಹೇಳಿದೆ. ಭಾರತ-ಬಾಂಗ್ಲಾದೇಶ ಬಾಂಧವ್ಯದಲ್ಲಿ ಹೆಚ್ಚುತ್ತಿರುವ ಒತ್ತಡದ ಮಧ್ಯೆ, ಬಾಂಗ್ಲಾದೇಶವು ಮೂಲಭೂತ ಮಾನವ ಹಕ್ಕುಗಳ ತತ್ವಗಳಿಗೆ ಅನುಗುಣವಾಗಿ ಎಲ್ಲಾ ಬಂಧಿತರಿಗೆ ಸೂಕ್ತವಾದ ಕಾನೂನು ಪ್ರಾತಿನಿಧ್ಯವನ್ನು ಖಚಿತಪಡಿಸಿಕೊಳ್ಳಬೇಕು ಎಂದು ವಾಷಿಂಗ್ಟನ್‌ನಲ್ಲಿರುವ ಯುಎಸ್ ರಾಜ್ಯ ಇಲಾಖೆಯ ವಕ್ತಾರರು ಹೇಳಿದ್ದಾರೆ.

ವಕೀಲರು ಬಾರದ ಕಾರಣ ಚಿತ್ತಗಾಂಗ್ ನ್ಯಾಯಾಲಯದಲ್ಲಿ ಬಂಧಿತ ಚಿನ್ಮಯ್ ಕೃಷ್ಣ ದಾಸ್ ಜಾಮೀನು ವಿಚಾರಣೆಯನ್ನು ಒಂದು ತಿಂಗಳ ಕಾಲ ಮುಂದೂಡಲಾಯಿತು. ಅಷ್ಟೇ ಅಲ್ಲದೆ ಅಲ್ಲಿನ ಅಧಿಕಾರಿಗಳು ವಕೀಲರನ್ನು ಕೋರ್ಟ್​ನ ಆವರಣಕ್ಕೆ ಬರದಂತೆ ತಡೆದಿದ್ದರು.

ಹಿಂದೂಗಳ ಮೇಲೆ ನಡೆಯುತ್ತಿರುವ ದಾಳಿಗಳ ವರದಿಗಳನ್ನು ಬಾಂಗ್ಲಾ ಪ್ರಧಾನಿ ಯೂನಸ್ ತಳ್ಳಿಹಾಕಿದ್ದರು. ಗುರುವಾರ ಧಾರ್ಮಿಕ ಮುಖಂಡರ ಜತೆ ಮತ್ತೊಂದು ಸಭೆ ನಡೆಸಲಿದ್ದಾರೆ. ರವೀಂದ್ರ ಘೋಷ್ ಎಂದು ಗುರುತಿಸಲಾದ ವಕೀಲರೊಬ್ಬರು ನ್ಯಾಯಾಲಯದ ವಿಚಾರಣೆಗೆ ಹಾಜರಾಗಲು ಢಾಕಾದಿಂದ ಸುಮಾರು 250 ಕಿಮೀ ಪ್ರಯಾಣಿಸಿದ್ದರು. ಆದರೆ, ಸ್ಥಳೀಯರು ನ್ಯಾಯಾಲಯದ ಆವರಣಕ್ಕೆ ಪ್ರವೇಶ ನಿರಾಕರಿಸಿದರು ಎಂದು ಅವರು ಹೇಳಿದರು.

+ posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments