ರಾಯಚೂರು: ಬಸ್ನ ಸ್ಟೇರಂಗ್ ಕಟ್ ಆಗಿ ಚಾಲಕನ ನಿಯಂತ್ರಣ ತಪ್ಪಿ ಬೆಂಗಳೂರಿನಿಂದ ಮಂತ್ರಾಲಯಕ್ಕೆ ಹೊರಟಿದ್ದ ಕೆಎಸ್ಆರ್ಟಿಸಿ ಬಸ್ ರಸ್ತೆ ಪಕ್ಕದ ಜಮೀನುಗೆ ಪಲ್ಟಿಯಾಗಿರುವ ಘಟನೆ ಕರ್ನೂಲ್ ಜಿಲ್ಲೆಯ ತುಗ್ಗಿಲಿಮಂಡಲಂನ ರಾತನ ಗ್ರಾಮದ ಬಳಿ ನಡೆದಿದೆ..
ಕೆಎಸ್ಆರ್ಟಿಸಿ ಸ್ಲೀಪರ್ ಬಸ್ನಲ್ಲಿದ್ದ 29 ಜನರ ಪೈಕಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಹಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.. ಗಾಯಳುಗಳು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.. ಘಟನಾ ಸ್ಥಳಕ್ಕೆ ಭೇಟಿ ನೀಟಿ ಪರಿಶೀಲನೆ ನಡೆಸಿದ್ದಾರೆ..
ದೂರ ಪ್ರಯಾಣದ ಬಸ್ಗಳಿಗೆ ಇಬ್ಬರೇ ಚಾಲಕರು ಇರುವುದರಿಂದ ಅಪಘಾತಗಳು ಹೆಚ್ಚು ಆಗುವ ಸಾಧ್ಯತೆ ಇದ್ದು, ಬೆಂಳೂರು- ಮಂತ್ರಾಲಯ-ರಾಯಚೂರು ಬಸ್ಗಳಿಗೆ ಇಬ್ಬರು ಚಾಲಕರನ್ನು ಒದಗಿಸಬೇಕು ಎಂದು ಪೊಲೀಸ್ ಸರ್ಕಲ್ ಇನ್ಸ್ಪೆಕ್ಟರ್ ಶೇಖರ್ ಮನವಿ ಮಾಡಿದ್ದಾರೆ..


