ಕ್ರೈಂ ಸ್ಟೋರಿರಾಜ್ಯಸುದ್ದಿ

ಕಾರಲ್ಲಿ ಬಂದು ಇಬ್ಬರ ತಲೆ ಉರುಳಿಸಿ ಹೋದ್ರು..!

ಯಾದಗಿರಿ: ಹಳೆಯ ದ್ವೇಷದ ಕಾರಣ ದಲಿತ ಮುಖಂಡನನ್ನು ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿರುವ ಘಟನೆ ಯಾದಗಿರಿ ಜಿಲ್ಲೆಯ ಶಹಾಪೂರ ತಾಲೂಕಿನ ಸಾದ್ಯಾಪೂರದ ಬಳಿ ನಡೆದಿದೆ.

ಕಣ್ಣಿಗೆ ಕಾರದ ಪುಡಿ ಎರಚಿ ಜೋಡಿ ದಲಿತ ಮುಖಂಡ ಮತ್ತು ಆತನ ಜೊತೆಗಿದ್ದವನ ಕೊಲೆ ಮಾಡಲಾಗಿದೆ.

ದಲಿತ ಮುಖಂಡ ಮಾಪ್ಪಣ್ಣ ಮದ್ರಕ್ಕಿ(48) ಅಲಿಸಾಬ್ (50) ಕೊಲೆ ಯಾದ ವ್ಯಕ್ತಿಗಳು. ಮದ್ರಕ್ಕಿ ಗ್ರಾಮದಿಂದ ಶಹಾಪೂರದತ್ತ ತರಕಾರಿ ತರಲು ಹೊರಟ್ಟಿದ್ದ ಮಾಪಣ್ಣ& ಅಲಿಸಾಬ್ ಬೈಕ್ ನಲ್ಲಿ ಶಹಾಪೂರದತ್ತ ಹೊರಟ್ಟಿದ್ದಾಗ ಈ ವೇಳೆ ಕಾರ್ ನಲ್ಲಿ ಬಂದ ದುಷ್ಕರ್ಮಿಗಳಿಂದ ಅಟ್ಯಾಕ್ ಮಾಡಿ ಮಾಪ್ಪಣ್ಣನ ಸ್ಥಳದಲ್ಲಿಯೇ ದುಷ್ಕ್ರಮಿಗಳು ಈ ವೇಳೆ ಸ್ಥಳದಿಂದ ಓಡಿ ಹೋಗ್ತಿದ್ದ ಅಲಿಸಾಬ್ ನನ್ನ ಅಟ್ಟಾಡಿಸಿ ಕೊಚ್ಚಿ ಕೊಲೆ ಮಾಡಿದ್ದಾರೆ ಇನ್ನೂ ಸ್ಥಳಕ್ಕೆ ಭೀಮರಾಯನ ಗುಡಿ ಪೊಲೀಸರು ಭೇಟಿ, ಪರಿಶೀಲನೆ ನಡೆಸಿದ್ದಾರೆ ಭೀಮರಾಯನಗುಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದ್ದ ಮೃತ ದೇಹಗಳನ್ನು ಶಹಾಪೂರ ಸಮುದಾಯ ಆಸ್ಪತ್ರೆಗೆ ಸೇರಿಸಲಾಗಿದೆ ಇದೇ ಕೊಲೆಯಾದವರ ಮನೆಯವರು ಆಸ್ಪತ್ರೆ ಮುಂಬಾಗ ಜಮಾವಣೆಗೊಂಡಿದ್ದಾರೆ.

ಇನ್ನು ಘಟನಾ ಸ್ಥಳಕ್ಕೆ ಭೇಟಿ ನೀಡಿ ಮಾಧ್ಯಮದ ಜೊತೆ ಮಾತನಾಡಿದ ಯಾದಗಿರಿ ಜಿಲ್ಲಾ ಎಸ್​ಪಿ ಪೃಥ್ವಿಕ್ ಶಂಕರ್ ಅವರು, ‘ಮೇಲ್ನೋಟಕ್ಕೆ ಹಳೆಯ ವೈಷಮ್ಯ ಕಾಣುತ್ತಲಿದೆ.

2014ರಲ್ಲಿ ಕೊಲೆಯತ್ನ ಪ್ರಕರಣದಲ್ಲಿ ಭಾಗಿಯಾಗಿರುವ ಹುಸೇನಿ ಅವರ ಬಗ್ಗೆ ಅನುಮಾನವಿದೆ. ಈ ಬಗ್ಗೆ ತಂಡವನ್ನು ರಚಿಸಿದೆ. ಗ್ರಾಮದಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿದೆ

Comments (0)

Your email address will not be published. Required fields are marked *

Back to top button