ಹುಬ್ಬಳ್ಳಿ: ಅದು ಮೂರು ದಶಕದ ಹಿಂದೆ ನಡೆದಿದ್ದ ಪ್ರಕರಣ..1992ನೇ ಇಸವಿಯಲ್ಲಿ ರಾಮ ಜನ್ಮ ಭೂಮಿಗಾಗಿ ಇಡೀ ದೇಶದ ಹಿಂದೂ ಕರ ಸೇವಕರು ಟೊಂಕ ಕಟ್ಟಿ ನಿಂತಿದ್ರು. ಮೂವತ್ತು ವರ್ಷಗಳೇ ಕಳೆದು ಹೋಗಿವೆ. ಕರ ಸೇವಕರ ಹೋರಾಟದ ಫಲವಾಗಿ ರಾಮ ಜನ್ಮ ಭೂಮಿಯಲ್ಲಿ ರಾಮ ದೇಗುಲವೂ ಎದ್ದು ನಿಂತು ಉದ್ಘಾಟನೆ ಕಾಯುತ್ತಿದೆ. ಇದೀಗ ಹಳೇ ಕೇಸುಗಳು ರೀ ಓಪನ್ ಆಗಿದ್ದು, ರಾಮ ಭಕ್ತರ ಬೆನ್ನತ್ತಿದ್ದಾರೆ ಪೊಲೀಸ್ರು.

ಹೌದು…ಈಗಾಗಲೇ ದೇಶದಲ್ಲಿ ಎಲ್ಲಿ ನೋಡಿದರೂ ರಾಮನ ಜಪ ಶುರುವಾಗಿದೆ. ಇದೇ ಜನೇವರಿ 22 ರಂದು ಆಯೋಧ್ಯೆಯಲ್ಲಿ ರಾಮಮಂದಿರ ಗರ್ಭ ಗುಡಿಯಲ್ಲಿ ರಾಮನ ಮೂರ್ತಿ ಪ್ರತಿಷ್ಠಾಪನೆ ನಡೆಯುತ್ತಿದೆ. ರಾಮ ಮಂದಿರದ ಕನಸು ಕಾಣುತ್ತಿದ್ದ ಅಸಂಖ್ಯಾತ ಹಿಂದೂಗಳು ಸಂಭ್ರಮದ ಅಲೆಯಲ್ಲಿದ್ದಾರೆ. ರಾಮ ಮಂದಿರಕ್ಕಾಗಿ ಅದೆಷ್ಟೋ ಹೋರಾಟಗಳು ನಡೆದಿವೆ,ಅದೆಷ್ಟೋ ಜನ ಪ್ರಾಣ ಕಳೆದುಕೊಂಡಿದ್ದಾರೆ. ಆದ್ರೆ ಇದೀಗ ಹುಬ್ಬಳ್ಳಿಯಲ್ಲಿ ರಾಮಜನ್ಮಭೂಮಿ ಹೋರಾಟಕ್ಕೆ ಮರುಜೀವ ನೀಡಲಾಗಿದ್ದು, ಆರೋಪಿತರಿಗೆ ಈಗ ಬಂಧನ ಭೀತಿ ಎದುರಾಗಿದೆ.

ಹುಬ್ಬಳ್ಳಿಯಲ್ಲಿ ರಾಮ ಜನ್ಮಭೂಮಿ ಹೋರಾಟಗಾರರಿಗೆ ಆತಂಕ ಶುರುವಾಗಿದೆ. ಬರೊಬ್ಬರಿ 31 ವರ್ಷದ ಹಿಂದೆ ನಡೆದ ಗಲಭೆಯಲ್ಲಿ ಹುಬ್ಬಳ್ಳಿ ಪೊಲೀಸರು ಓರ್ವನನ್ನ ಅರೆಸ್ಟ್ ಮಾಡಿದ್ದು, ಇದೀಗ ಆ ಹೋರಾಟದಲ್ಲಿ ಭಾಗಿಯಾದವರಿಗೂ ಬಂಧನದ ಭೀತಿ ಶುರುವಾಗಿದೆ. ಎಸ್ ಹುಬ್ಬಳ್ಳಿ ಪೊಲೀಸರು 3 ದಶಕಗಳ ಹಿಂದಿನ ರಾಮಜನ್ಮಭೂಮಿ ಹೋರಾಟದ ಪ್ರಕರಣಕ್ಕೆ ಈಗ ಮರುಜೀವ ನೀಡಿದ್ದಾರೆ. 31 ವರ್ಷಗಳ ಹಳೆ ಪ್ರಕರಣಕ್ಕೆ ಜೀವ ಕೊಡಲು ಹುಬ್ಬಳ್ಳಿ ಪೊಲೀಸರು ಮುಂದಾಗಿದ್ದು, ಹುಬ್ಬಳ್ಳಿ ಪೊಲೀಸರಿಂದ ಅಂದಿನ ಆರೋಪಿಗಳ ಏಕಾಏಕಿ ಹುಡುಕಾಟ ಈಗ ಶುರುವಾಗಿದೆ.

ರಾಮಮಂದಿರ ಹೋರಾಟದ ಸಂದರ್ಭದಲ್ಲಿ ಸಂಭವಿಸಿದ್ದ ಗಲಭೆಯಲ್ಲಿ ಭಾಗಿಯಾದವರ ಹುಡುಕಾಟ ಆರಂಭವಾಗಿದ್ದು ಅದರಲ್ಲಿ ಇಬ್ಬರನ್ನ ಅರೆಸ್ಟ್ ಮಾಡಿದ್ದಾರೆ. ಕರ ಸೇವೆಗು ಮುನ್ನ ಅಂದ್ರೆ ಡಿಸೆಂಬರ್ 5, 1992 ರಂದು ಹುಬ್ಬಳ್ಳಿ ನಗರದಲ್ಲಿ ಗಲಭೆ ಸಂಭವಿಸಿತ್ತು, ಗಲಭೆಯಲ್ಲಿ ಒಂದು ಮಳಿಗೆಗೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ 9 ಜನರ ವಿರುದ್ಧ ಅಂದು ಹುಬ್ಬಳ್ಳಿಯ ಶಹರ ಠಾಣೆಯಲ್ಲಿ FIR ದಾಖಲಾಗಿತ್ತು. 31 ವರ್ಷದ ಬಳಿಕ ಪ್ರಕರಣಕ್ಕೆ ಸಂಬಂಧಿಸಿದಂತೆ 3 ನೇ ಆರೋಪಿ ಶ್ರೀಕಾಂತ್ ಪೂಜಾರಿಯನ್ನು ಕಳೆದ ಶುಕ್ರವಾರ ಬಂಧಿಸಿ, ನ್ಯಾಯಾಂಗ ವಶಕ್ಕೆ ಪೊಲೀಸರು ಒಪ್ಪಿಸಿದ್ದಾರೆ. ಆದರೆ ಈ ಪ್ರಕರಣ ಈಗ್ಯಾಕೆ ಪೊಲೀಸರು ಮರು ಜೀವ ನೀಡಿದ್ರು ಅನ್ನೋದು ದೊಡ್ಡ ಪ್ರಶ್ನೆಯಾಗಿದೆ. ಇನ್ನು ಅಂದಿನ ಗಲಭೆಯಲ್ಲಿ ಒಟ್ಟು 9 ಜನರ ವಿರುದ್ದ ಪ್ರಕರಣ ದಾಖಲಾಗಿದ್ದು, ಅದರಲ್ಲಿ ಮೊದಲ ಆರೋಪಿಯಾಗಿರೋ ರಾಜು ಧರ್ಮದಾಸ್ ಶ್ರೀಕಾಂತ್ ಬಂಧನದ ವಿಚಾರ, ಮತ್ತು ಅವರನ್ನ ಪೊಲೀಸರು ಕರೆದಿರೋ ಬಗ್ಗೆ ಹೇಳೋದು ಹೀಗೆ…
ಇನ್ನು 1992 ರಲ್ಲಿ ಪ್ರಕರಣ ದಾಖಲಾದಾಗ ಆರೋಪಿತರು ವ್ಯಕ್ತಿಗಳು 30ರಿಂದ 35 ವರ್ಷದ ಒಳಗಿನ ಯುವಕರಾಗಿದ್ದರು. ಈಗ ಅವರಿಗೆಲ್ಲ 55 ರಿಂದ 60 ವರ್ಷಗಳಾಗಿವೆ. ಹುಬ್ಬಳ್ಳಿಯಲ್ಲಿ ನಡೆದ ಹೋರಾಟದಲ್ಲಿ,ರಾಜು ಧರ್ಮದಾಸ್, ಶ್ರೀಕಾಂತ್ ಪೂಜಾರಿ, ಅಶೋಕ್ ಕಲಬುರಗಿ, ಷಣ್ಮುಖ ಕಾಟಗಾರ. ಗುರುನಾಥಸಾ ಕಾಟಿಗಾರ, ರಾಮಚಂದ್ರಸಾ ಕಲಬುರಗಿ ಹಾಗೂ ಅಮೃತ ಕಲಬುರಗಿ ವಿರುದ್ದ ಕೇಸ್ ದಾಖಲಾಗಿತ್ತು. ಅಂದು ಕೇಸ್ ದಾಖಲಾದವರಿಗೆ ಇದೀಗ ಹುಬ್ಬಳ್ಳಿ ಪೊಲಿಸರು ಕರೆ ಮಾಡಿ ಸ್ಟೇಶನ್ ಗೆ ಬನ್ನಿ ಎನ್ನುತ್ತಿದ್ದಾರೆ.

ಇದೀಗ ಕೆಲ ಹೋರಾಟಗಾರರು ಜಾಮೀನಿನ ಮೇಲೆ ಹೊರಗಡೆ ಇದ್ದಾರೆ ಎಂದು ಹೇಳಲಾಗುತ್ತಿದೆ. ಹುಬ್ಬಳ್ಳಿ ಪೊಲೀಸ್ ಅಧಿಕಾರಿಗಳು ಕೆಲವರಿಗೆ ಕರೆ ಮಾಡಿದ್ದಾರೆ,ಕೆಲವರು ಪ್ರಕರಣದಲ್ಲಿ ಭಾಗಿಯದಾವರು ಸಾವನ್ನಪ್ಪಿದ್ದಾರೆ. ಆದ್ರೆ ಪ್ರಕರಣದ ಮೂರನೇ ಆರೋಪಿ ಶ್ರೀಕಾಂತ್ ಅರೆಸ್ಟ್ ಮಾಡಿರೋದು ಹಲವು ಅನುಮಾನಕ್ಕೆ ಕಾರಣವಾಗಿದೆ. ಇನ್ನು ಈ ಬಗ್ಗೆ ಹುಧಾ ಪೊಲೀಸ್ ಕಮೀಷನರ್ ಹೇಳೋದು ಹೀಗೆ..
ಒಟ್ಟಾರೆ ಹು-ಧಾ ಪೊಲೀಸರು 31 ವರ್ಷ ಹಳೆಯ ಪ್ರಕರಣಕ್ಕೆ ಮರುಜೀವ ನೀಡಿದ್ದು, ಪೊಲೀಸರು ಏನೇ ಹೇಳಿದ್ರು,ರಾಮ ಮೂರ್ತಿ ಪ್ರತಿಷ್ಠಾಪನೆ ಸಮಯದಲ್ಲಿಯೇ ರಾಮ ಜನ್ಮಭೂಮಿ ಹೋರಾಟದಲ್ಲಿ ಭಾಗಿಯಾದವರನ್ನು ಅರೆಸ್ಟ್ ಮಾಡಿರೋದು ಹಲವು ಅನುಮಾನಕ್ಕೆ ಕಾರಣವಾಗಿದೆ.