ಬೆಂಗಳೂರು; ದರ್ಶನ್ ಗೆಳತಿ ಪವಿತ್ರಾ ಗೌಡಗೆ ಕೆಟ್ಟ ಮೆಸೇಜ್ ಹಾಗೂ ಫೋಟೋಗಳನ್ನು ಕಳಿಸಿದ್ದ ಎಂಬ ಕಾರಣಕ್ಕೆ ದರ್ಶನ್ ಅಂಡ್ ಗ್ಯಾಂಗ್, ರೇಣುಕಾ ಸ್ವಾಮಿಯನ್ನು ಬರ್ಬರವಾಗಿ ಹತ್ಯೆಗೈದಿದ್ದಾರೆ ಎಂದು ವರದಿಯಾಗಿದೆ.
ಹಲ್ಲೆಯಿಂದ ರೇಣುಕಾ ಸ್ವಾಮಿ ಸಾವನ್ನಪ್ಪಿದ ಬಳಿಕ ನಟ ದರ್ಶನ್ ಹಾಗೂ ಪವಿತ್ರಾ ಭಯದಲ್ಲಿ ನಡುಗುತ್ತಿದ್ದರಂತೆ. ಏನು ಮಾಡ್ಬೇಕು ಎಂದು ತಿಳಿಯದೆ ನಟ ದರ್ಶನ್, ಪೊಲೀಸ್ ಪಿಎಸ್ಐ ಒಬ್ಬರಿಗೆ ಫೋನ್ ಮಾಡಿದ್ದಾರೆ. ‘ಅಚಾತುರ್ಯದಿಂದ ಒಂದು ಕೊಲೆ ಆಗಿದೆ’ ಏನ್ಮಾಡಬೇಕೆಂದು ಗೊತ್ತಾಗ್ತಿಲ್ಲ ಎಂದು ಗೊಗರೆದಿದ್ದರಂತೆ.
ನಟ ದರ್ಶನ್ ಪಶ್ಚಿಮ ವಿಭಾಗದ ಪೊಲೀಸ್ ಅಧಿಕಾರಿಯೊಬ್ಬರಿಗೆ ಫೋನ್ ಮಾಡಿದ್ದರಂತೆ. ಈ ವೇಳೆ PSI ದರ್ಶನ್ ಅವರಿಗೆ ಕೊಲೆ ಮಾಡಿದವರು ಸೆರೆಂಡರ್ ಆಗ್ಬೇಕು ಎಂದಿದ್ದಾರೆ. ಪೊಲೀಸ್ ಅಧಿಕಾರಿ ಹೇಳಿದ್ದಂತೆ ನಾಲ್ವರನ್ನ ಸೆರೆಂಡರ್ ದರ್ಶನ್ ಮಾಡಿಸಿದ್ದರು. ರಾಘವೇಂದ್ರ , ನಿಖಿಲ್, ಕಾರ್ತಿಕ್, ಕೇಶವಮೂರ್ತಿ ಸೆರೆಂಡರ್ ಆಗಿದ್ರು. ಕೇಸ್ನಲ್ಲಿ PSI ಕೂಡ ಸಾಕ್ಷಿಯಾಗಿದ್ದಾರೆ.