Monday, June 23, 2025
26.6 C
Bengaluru
Google search engine
LIVE
ಮನೆ#Exclusive Newsಸ್ನೇಹಮಯಿ ಕೃಷ್ಣರನ್ನು ಸಿಎಂ ಸುಮ್ನೆ ಬಿಡ್ತಾರೆ ಅಂದ್ಕೊಂಡಿದ್ದಿಯಾ...? ; ಬ್ಯಾಂಕ್ ಮಂಜು(ಮುಡಾ ಎ4 ಆರೋಪಿ)

ಸ್ನೇಹಮಯಿ ಕೃಷ್ಣರನ್ನು ಸಿಎಂ ಸುಮ್ನೆ ಬಿಡ್ತಾರೆ ಅಂದ್ಕೊಂಡಿದ್ದಿಯಾ…? ; ಬ್ಯಾಂಕ್ ಮಂಜು(ಮುಡಾ ಎ4 ಆರೋಪಿ)

ಮೈಸೂರು : ಮುಡಾ ಹಗರಣ  ಹೊರಗೆ ಬರುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ  ಅವರ ಜೀವಕ್ಕೆ ಕಂಟಕ ಎದುರಾಗುತ್ತಾ ಎಂಬ ಅನುಮಾನ ಮೂಡಿದೆ.

ಮಾಜಿ ಮಂತ್ರಿ ತನ್ವೀರ್ ಸೇಠ್ ಆಪ್ತ ಬ್ಯಾಂಕ್ ಮಂಜು ಆಡಿರುವ ಮಾತು ಇಂತಹ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಮೈಸೂರಿನ ಬೆಲವತ್ತ ಬಳಿಯ ಜಮೀನು ವಿಚಾರದಲ್ಲಿ ಕುಟುಂಬವೊಂದಕ್ಕೆ ಡಿ.5ರಂದು ಬ್ಯಾಂಕ್ ಮಂಜು ಧಮ್ಕಿ ಹಾಕಿದ್ದ. ಈ ವೇಳೆ ಜಮೀನು ಮಾಲೀಕ, ಸ್ನೇಹಮಯಿ ಕೃಷ್ಣ ಅಂಥವ್ರೇ ಸಿಎಂ ವಿರುದ್ಧ ಹೋರಾಡುತ್ತಿದ್ದಾರೆ. ನಾನು ನಿಮ್ಮ ವಿರುದ್ದ ಹೋರಾಡ್ತಿನಿ ಎಂದಿದ್ದರು.ಈ ಮಾತಿಗೆ ಟಕ್ಕರ್ ನೀಡುವ ಭರದಲ್ಲಿ ಬ್ಯಾಂಕ್ ಮಂಜು, ಸ್ನೇಹಮಯಿ ಕೃಷ್ಣರನ್ನು ಸಿಎಂ ಸುಮ್ನೆ ಬಿಡ್ತಾರೆ ಅಂದ್ಕೊಂಡಿದ್ದಿಯಾ. ಸಮಯಕ್ಕಾಗಿ ಕಾಯ್ತಿದ್ದಾರೆ ಎಂದು ಹೇಳಿದ್ದ. ಅಂದ ಹಾಗೇ, ಈ ಘಟನೆ ನಡೆದ 17 ದಿನಕ್ಕೆ ಅಂದರೆ ಡಿ.22ರಂದು ಜಮೀನು ಮಾಲೀಕ ಹನುಮಂತು ನಡು ರಸ್ತೆಯಲ್ಲಿ ಕೊಲೆಯಾಗಿದ್ದ. ಈ ಕೇಸಲ್ಲಿ ಬ್ಯಾಂಕ್ ಮಂಜು ನಾಲ್ಕನೇ ಆರೋಪಿ ಆಗಿದ್ದಾನೆ.ಈ ಸಂಬಂಧ ಪ್ರತಿಕ್ರಿಯಿಸಿರುವ ಸ್ನೇಹಮಯಿ ಕೃಷ್ಣ, ನನಗೆ, ನನ್ನ ಕುಟುಂಬಕ್ಕೆ ಏನಾದರೂ ತೊಂದರೆ ಆದ್ರೆ ಸಿಎಂ ಹೊಣೆ ಎಂದು ಎಚ್ಚರಿಕೆ ಕೊಟ್ಟಿದ್ದಾರೆ. ಇನ್ನೂ ಪೊಲೀಸರಿಗೆ ಮನವಿ ಮಾಡಿದ್ರೂ ಭದ್ರತೆ ಕೊಟ್ಟಿಲ್ಲ ಎಂದು ಆರೋಪಿಸಿದ್ದಾರೆ…
+ posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments