Wednesday, August 20, 2025
18.9 C
Bengaluru
Google search engine
LIVE
ಮನೆಜಿಲ್ಲೆಧರ್ಮಸ್ಥಳ ಶವ ಹೂತಿಟ್ಟ ಕೇಸ್​ ತನಿಖೆಗೆ ಮೊಹಂತಿ ಸೂಕ್ತ ವ್ಯಕ್ತಿ ಅಲ್ಲ; ಅನುಪಮಾ ಶಣೈ

ಧರ್ಮಸ್ಥಳ ಶವ ಹೂತಿಟ್ಟ ಕೇಸ್​ ತನಿಖೆಗೆ ಮೊಹಂತಿ ಸೂಕ್ತ ವ್ಯಕ್ತಿ ಅಲ್ಲ; ಅನುಪಮಾ ಶಣೈ

ಮಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ ಶವಗಳನ್ನು ಹೂತಿಟ್ಟ ಪ್ರಕರಣದ ತನಿಖೆ ಮಾಡಲು ಎಸ್​ಐಟಿ ಮುಖ್ಯಸ್ಥರನ್ನಾಗಿ ಪ್ರಣವ್​ ಮೊಹಂತಿ ಅವರನ್ನು ನೇಮಕ ಮಾಡಿದ ರಾಜ್ಯ ಸರ್ಕಾರದ ನಡೆಯನ್ನು ಮಾಜಿ ಡಿವೈಎಸ್​​ಪಿ ಅನುಪಮಾ ಶಣೈ ಆಕ್ಷೇಪಿಸಿದ್ದಾರೆ.

ಮಂಗಳೂರಿನಲ್ಲಿ ಮಾತನಾಡಿದ ಅವರು ಪ್ರಣವ್​ ಮೊಹಂತಿ ಅವರು ಸರ್ಕಾರ ಪ್ರಣವ್‌ ಮೊಹಂತಿರನ್ನ ನೇಮಕ ಮಾಡಿದ್ದು ಸರಿ ಇಲ್ಲ.. ಅತ್ಯಾಚಾರ ಮತ್ತು ನರಹತ್ಯೆ ಕುರಿತಾದ ತನಿಖೆಗೆ ಸೂಕ್ತ ವ್ಯಕ್ತಿಯಲ್ಲ. ಮೊಹಂತಿ ನೇಮಕದಲ್ಲಿ ಸಚಿವ ಕೆ.ಜೆ.ಚಾರ್ಜ್‌ ಕೈವಾಡವಿದೆ.ಹೀಗಂತ ಕೆಲ ಪೊಲೀಸರು ಹೇಳುತ್ತಿದ್ದಾರೆ ಎಂದು ಮಾಜಿ ಡಿವೈಎಸ್​ಪಿ ಅನುಪಮಾ ಶಣೈ ಆರೋಪಿಸಿದ್ದಾರೆ. ಮೊಹಂತಿ ನೇಮಕದಿಂದ ಪೊಲೀಸರ ನೈತಿಕ ಬಲ ಕುಗ್ಗಿದೆ ಎಂದು ಕಿಡಿಕಾರಿದ್ರು.

ಡಿವೈಎಸ್‌ಪಿ ಗಣಪತಿ ಆತ್ಮಹತ್ಯೆ ಮಾಡಿಕೊಳ್ಳುವಾಗ ಹಿರಿಯ ಐಪಿಎಸ್‌ ಅಧಿಕಾರಿ ಎಎಂ ಪ್ರಸಾದ್‌ , ಪ್ರಣವ್‌ ಹೆಸರು ಉಲ್ಲೇಖಿಸಿದ್ರು. ಮೊಹಂತಿ ಜಾಗದಲ್ಲಿ ದಯಾನಂದ್‌, ಡಿಜಿಪಿ ಡಾ.ಕೆ.ರಾಮಚಂದ್ರಾವ್‌ ನೇಮಕ ಮಾಡಬೇಕಾಗಿತ್ತು ಎಂದು ಆಗ್ರಹಿಸಿದ್ರು.

+ posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments