Friday, November 21, 2025
20 C
Bengaluru
Google search engine
LIVE
ಮನೆಫ್ರೀಡಂ ಟಿವಿ ವಿಶೇಷಮಾತಿನ ಮಲ್ಲರಿಗಾಗಿ "ದೇಸಾಯಿ" ಸಿನಿಮಾ

ಮಾತಿನ ಮಲ್ಲರಿಗಾಗಿ “ದೇಸಾಯಿ” ಸಿನಿಮಾ

Desai Kannada movie; ಕನ್ನಡ ಚಿತ್ರರಂಗ ಸಾಲು ಸಾಲು ಚಿತ್ರಗಳನ್ನು ನೀಡುವುದರಲ್ಲಿ ಬ್ಯೂಸಿಯಾಗಿದೆ.ಅದೇ ಸಾಲಿನಲ್ಲಿ ಮಹಾಂತೇಶ ವಿ ಚೋಳದಗುಡ್ಡಅವರು ಬರೆದು, ನಾಗಿರೆಡ್ಡಿ ಭಡ ನಿರ್ದೇಶನದ ದೇಸಾಯಿ ಚಿತ್ರ ತೆರೆಗೆ ಬರಲು ಸಜ್ಜಾಗಿದೆ. ಇನ್ನು ಈ ಸಿನಿಮಾ ಬಹುತೇಕ ಚಿತ್ರೀಕರಣ ನಡೆಯುತ್ತಿದೆ.

ಉತ್ತರ ಕರ್ನಾಟಕದ ಶೈಲಿಯ ಕಥಾಹಂದರ ಹೊಂದಿರುವ ಈ ಚಿತ್ರವು  ಕೌಟುಂಬಿಕ ಆಧಾರಿತ ಸಿನಿಮಾವಾಗಿದೆ. ದೇಸಾಯಿ ಚಿತ್ರದಲ್ಲಿ ನಾಯಕನಾಗಿ “ಲವ್ 360” ಖ್ಯಾತಿಯ ಪ್ರವೀಣ್ ಕುಮಾರ್ ಹಾಗೂ  ನಾಯಕಿಯಾಗಿ ಮೈಸೂರಿನ ರಾಧ್ಯ ಅವರು ನಟಿಸುತ್ತಿದ್ದಾರೆ.

ಈ ಸಿನಿಮಾಕ್ಕೆ “ಒರಟ” ಪ್ರಶಾಂತ್, ಚೆಲುವರಾಜು, ಮಧುಸೂದನ್ ರಾವ್, ಕಲ್ಯಾಣಿ, ಹರಿಣಿ, ನಟನ ಪ್ರಶಾಂತ್, ಮಂಜುನಾಥ್ ಹೆಗಡೆ, ಸೃಷ್ಟಿ (ಕಾಂತಾರ) ಮುಂತಾದವರು ಕೈ ಜೋಡಿಸಿದ್ದಾರೆ. ಸದ್ಯ ಈ ಸಿನಿಮಾವು ಸಂಪೂರ್ಣ ಉತ್ತರ ಕರ್ನಾಟಕ ಭಾಗದ ಸಿನಿಮಾವಾಗಿರುವುದರಿಂದ  ಬಯಲು ಸೀಮೆ ಪ್ರದೇಶವಾದ ಬಾದಾಮಿ, ಬಾಗಲಕೋಟೆ ಹಲವಾರು ಭಾಗಗಳಲ್ಲಿ ಚಿತ್ರೀಕರಣ ನಡೆಯುತ್ತಿದೆ.

ಈ ಸಿನಿಮಾ ನಿರ್ದೇಶನ ಮಾಡುತ್ತಿರುವ ನಾಗಿರೆಡ್ಡಿ, ಹಾಗೂ ನಿರ್ಮಾಪಕ ಮಹಾಂತೇಶ್ ಅವರಿಗೆ ಮೊದಲ ಸಿನಿಮಾವಾಗಿದೆ.  ಇನ್ನು ಕಿರಿಯ ಕಲಾವಿದರರು ತಮ್ಮದೇ ಶೈಲಿಯಲ್ಲಿ ಕನ್ನಡ ಸಿನಿಮಾರಂಗಕ್ಕೆ ಕೊಡುಗೆ ನೀಡುತ್ತಿದ್ದಾರೆ.  

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments