ರಚಿತಾರಾಮ್ ಬಳ್ಳಾರಿಗೆ ಕಾಲಿಡಂಗಿಲ್ಲ…ಖಾಕಿ ಕಟ್ಟುನಿಟ್ಟು !
ದರ್ಶನ್ ಒಬ್ಬಂಟಿ…ಖಾಕಿ ಹಾಕಲಿದೆ ಇನ್ನೊಂದು ಪಟ್ಟು !
ವಾ.ಓ: ಪರಪ್ಪನ ಅಗ್ರಹಾರಕ್ಕೆ ದರ್ಶನ್ ಕಾಲಿಟ್ಟಾಗ ಅಯ್ಯಯ್ಯೋ…ಅದೆಷ್ಟು ಜನ ಬಾಯಿ ಬಡಿದುಕೊಂಡರು ? ಅದೆಷ್ಟು ಸಿನಿಮಾ ನಟ ನಟಿಯರು ಎದೆ ಬಡಿದುಕೊಂಡರು ? ಇನ್ನೇನು ಕನ್ನಡ ಸಿನಿಮಾ ಗತಿ ಮುಗಿದೇಹೋಯಿತೆಂದು ಮಣ್ಣು ತೂರಿದರು ? ದರ್ಶನ್ ಹೊರಗೆ ಬರೋವರೆಗೆ ಯಾವುದೇ ಸಿನಿಮಾ ನೋಡಲ್ಲ ಎಂದು ನೆಲಕ್ಕೆ ಬಿದ್ದು ಹೊರಳಾಡಿದರು ? ಇಲ್ಲ…ಏನೂ ಬದಲಾಗಲಿಲ್ಲ. ಎಲ್ಲವೂ ಮೊದಲು ಹೇಗಿತ್ತೋ ಹಾಗೆಯೇ ನಡೆಯಿತು…ಮುಂದೆಯೂ ನಡೆಯುತ್ತದೆ. ಲೈಫ್ ಈಸ್ ಮೋರ್ ದೆನ್ ಎನಿ ಪರ್ಸನ್…ದರ್ಶನ್ಗೆ ಬಕೀಟು ಹಿಡಿಯೋರಿಗೆ ಇದೆಲ್ಲ ಮಸ್ತಕಕ್ಕೆ ಈಗ ಅಮರಿಕೊಂಡಿರುತ್ತದೆ. ನೋ ಡೌಟ್…
ವಾ.ಓ: ದರ್ಶನ್ ಇನ್ನಾದರೂ ಬದಲಾಗಬೇಕು ಮತ್ತು ಬದಲಾಗುತ್ತಾರೆ. ಹಾಗಂತ ಬಹುತೇಕ ಮಂದಿ ತಿಳಿದುಕೊಂಡಿದ್ದರು. ಕಂಬಿ ಹಿಂದೆ ಕುಳಿತು ಭಗವದ್ಗೀತೆ ಓದುತ್ತಿದ್ದಾರಂತೆ…ಆಧ್ಯಾತ್ಮದ ಕಡೆ ಮೆದುಳು ಓಡಿಸುತ್ತಿದ್ದಾರಂತೆ…ಹೀಗೆ ಏನೇನೊ ಸುದ್ದಿಗಳು ಬಂದವು. ಇದು ಸಾಲದು ಎನ್ನುವಂತೆ ಹುಬ್ಬಳ್ಳಿಯ ಮಠವೊಂದು ಸ್ವಾಮೀಜಿ ಪುಸ್ತಕವನ್ನು ಓದಲು ಕಳಿಸಿಕೊಟ್ಟು ಘನಂಧಾರಿ ಕಾಯಕ ಮಾಡಿತು. ಪರಿಣಾಮ ಸಡನ್ ಚೇಂಜ್ ಆಯಿತಾ ? ಇಲ್ಲವೇ ಇಲ್ಲ. ಮತ್ತದೇ ಚಾಕಣಾ..ಬಿರಿಯಾನಿ…ಸಿಗರೇಟು. ಹೊರ ಬಿದ್ದ ಸತ್ಯ ಇಷ್ಟು. ಒಳಗೆ ಇನ್ನೆಷ್ಟೋ…ಫಲಿತಾಂಶ ಕಣ್ಣ ಮುಂದಿದೆ. ಈಗ ದಚ್ಚು ಕೇರಾಫ್ ಬಳ್ಳಾರಿ ಬಂಧಿಖಾನೆ…
ವಾ.ಓ: ಈಗಾಗಲೇ ದರ್ಶನ್ ಕಡೆ ಹದ್ದಿನ ಕಣ್ಣನ್ನು ಎಲ್ಲರೂ ನೆಟ್ಟಿದ್ದಾರೆ. ಬಳ್ಳಾರಿ ಅಧಿಕಾರಿಗಳು ಕೂಡ ಇದನ್ನೇ ನಿದ್ದೆಗೆ ಚಟ್ಟ ಕಟ್ಟಿ ಮಾಡುತ್ತಿದ್ದಾರೆ. ದರ್ಶನ್ಗೆ ಏನೇನು ಕೊಡಬೇಕು, ಏನೇನು ಕೊಡಬಾರದು, ಯರ್ಯಾರು ಭೇಟಿ ಮಾಡಬೇಕು…ಎನ್ನುವುದರಿಂದ ಹಿಡಿದು ಪ್ರತಿಯೊಂದನ್ನು ನಿಗದಿ ಮಾಡಿದ್ದಾರೆ. ಅದೇ ರೀತಿ ಜೀವನ ನಡೆಯಲಿದೆ. ದೂಸರಾ ಕೆಮ್ಮಂಗಿಲ್ಲ. ಪರಪ್ಪನ ಅಗ್ರಹಾರದಲ್ಲಿದ್ದಾಗ ಸಿಕ್ಕಸಿಕ್ಕವರು ಭೇಟಿ ಮಾಡಲು ಹಾಜರಿರುತ್ತಿದ್ದರು. `ನಿಮ್ ಜೊತೆ ನಾವಿದ್ದೇವೆ ಬಾಸ್..’ ಎದೆ ಉಬ್ಬಿಸುತ್ತಿದ್ದರು. ಇನ್ನು ಮುಂದೆ ಅವರಿಗೆಲ್ಲ ಗೋಲಿಮಾರ್ ಎನ್ನುತ್ತಿದೆ ಬಳ್ಳಾರಿ ಜೈಲ್.
ವಾ.ಓ: ವಾರಕ್ಕೆ ಎರಡು ಬಾರಿ ಕುಟುಂಬಸ್ಥರು ನೋಡಬಹುದು. ಸಿನಿಮಾ ನಟ ನಟಿಯರು, ನಿರ್ದೇಶಕ, ನಿರ್ಮಾಪಕರು ಜೈಲಿನ ಆಚೀಚೆ ಸುಳಿವಂತಿಲ್ಲ. ರಾಜಕಾರಣಿಗಳಿಗೂ ಅದೇ ರೂಲ್ಸ್ ಲಾಗೂ ಆಗಲಿದೆ. ರಚಿತಾರಾಮ್ ರಾಯರಿಗೆ ಪೂಜೆ ಮಾಡಿಸಿದರೂ, ಇನ್ಯಾವುದೋ ದೇವಸ್ಥಾನದ ಮುಂದೆ ಉರುಳು ಸೇವೆ ಮಾಡಿ ಪ್ರಸಾದ ತಂದರೂ ಸಿಬ್ಬಂದಿ ಕೆಕ್ಕರಿಸುತ್ತದೆ. ಅಲ್ಲಿಗೆ ದರ್ಶನ್ ಹೊಸ ಸಂಕಟ ಅನುಭವಿಸಲಿದ್ದಾರೆ. ಆಗಾಗ ನೋಡಲು ಸಿಗುತ್ತಿದ್ದ ಇವರೂ ದೂರ ದೂರ. ಸಮಾಧಾನದ ಸಂಗತಿ ಅಂದರೆ ಕುಟುಂಬಸ್ಥರು ಬರಲಿದ್ದಾರಲ್ಲ…ಅದೇ ಸಂತಸ…
ವಾ.ಓ: ಬಳ್ಳಾರಿ ಬಿಸಿಲಿಗೆ ಹೊಂದಿಕೊಳ್ಳುವುದು ಒಂದು ಕಡೆ. ಇನ್ನೊಂದು ಕಡೆ ಇನ್ನೆರಡು ಕೇಸು ಜಡಿದಿದ್ದಾರಲ್ಲ ಬೆಂಗಳೂರು ಪೊಲೀಸರು…ಅದೇನು ಹಾಗೆ ಬಂದು ಹೀಗೆ ಹೋಗಿಬಿಡುತ್ತದಾ ? ನೋ ಚಾನ್ಸ್. ಸಿಗರೇಟು ಕೇಸು…ಖೈದಿ ಮೊಬೈಲ್ನಲ್ಲಿ ಮಾತಾಡಿದ್ದು ಜೀವಂತ ಇದೆ. ಅದಕ್ಕೆ ಉತ್ತರಿಸಬೇಕು. ಅಷ್ಟರಲ್ಲಿ ಕೊಲೆ ಆರೋಪದ ಚಾರ್ಜ್ಶೀಟು ಕೇಕೆ ಹಾಕುತ್ತದೆ. ಗಿರೀಶ್ ಅಂಡ್ ಚಂದನ್ ಅದಕ್ಕಾಗಿ ಶ್ರಮ ಪಡುತ್ತಿದ್ದಾರೆ. ಯಾವುದೇ ರೀತಿ ದರ್ಶನ್ ಕುಣಿಕೆಯಿಂದ ತಪ್ಪಿಸಿಕೊಳ್ಳಬಾರದು. ಅದಕ್ಕೆ ತಕ್ಕಂತೆ ಸಾಕ್ಷಿ ಕೂಡಿ ಹಾಕುತ್ತಿದ್ದಾರೆ. ಅದು ಇನ್ನೊಂದು ಪುರಾಣ…
ವಾ.ಓ: ಇತ್ತ ಪವಿತ್ರಾ ಗೌಡ ಜಾಮೀನು ಅರ್ಜಿ ಸಲ್ಲಿಸಿ ಮಟ್ಟಸವಾಗಿ ನಿಂತಿದ್ದಾರೆ. `ನನಗೂ ಕೊಲೆಗೂ ಯಾವುದೇ ಸಂಬAಧ ಇಲ್ಲ. ಕೊಲೆ ಮಾಡು ಎಂದು ನಾನು ಹೇಳಿಲ್ಲ..ಹೀಗಾಗಿ ನನಗೆ ಜಾಮೀನು ನೀಡಿ…’ ಇದು ಪವಿತ್ರಾ ಪರ ವಕೀಲರು ನ್ಯಾಯಾಲಯದಲ್ಲಿ ಮಂಡಿಸಿದ ವಾದ. ಅಲ್ಲಿಗೆ ದರ್ಶನ್ ಹಾಗೂ ಪವಿತ್ರಾ ಸಂಬAಧ ಹಳ್ಳ ಹಿಡಿದು ಹೋಗಲಿದೆ. `ದರ್ಶನ್ ಏನಾದರೇನು…ನಾನು ಬಚಾವಾದರೆ ಸಾಕು…’ ಇದೇ ಪವಿತ್ರಾ ಮನಸಿನ ಸತ್ಯ. ಕೋಟಿ ಕೋಟಿ ಕಾಸಿನ ಬಂಗಲೆ, ಕಾರು, ಒಡವೆ, ಸೀರೆ…ಎಲ್ಲವನ್ನೂ ಬಳಿದುಕೊಂಡು ಈ ಪಾತರಗಿತ್ತಿ ಇನ್ನೊಂದು ಕಂಪೌAಡ್ಗೆ ಜಿಗಿಯಲಿದೆ…
ವಾ.ಓ: ಚಿನ್ನು…ಬಂಗಾರು…ಲಾಲಿಪಪ್ಪು…ಹೀಗೆ ದರ್ಶನ್ರನ್ನು ಕರೆಕರೆದು ಮುಟ್ಟಿಸಬಾರದ ದಡಕ್ಕೆ ಮುಟ್ಟಿಸಿ ಇದೀಗ ಪವಿತ್ರ ಇನ್ನೊಂದು ಬೋಟ್ ಏರುವ ಸಾಧ್ಯತೆ ದಟ್ಟವಾಗಿವೆ. `ಪವಿತ್ರಾ ನಮ್ಮ ಎರಡನೇ ಅತ್ತಿಗೆ…’ ಹೀಗನ್ನುತ್ತಿದ್ದ ಕೆಲವು ಫ್ಯಾನ್ಸು…ಈಗ ಕುತ್ತಿಗೆ ಮಟ ಕುಡಿದು ಕಕ್ಕಾಬಿಕ್ಕಿಯಾಗಿದ್ದಾರೆ. ಯಾರಿಗೆ ಯಾರುಂಟು ಎರವಿನ ಸಂಸಾರ…ಹೀಗAತ ಹಾಡುವುದೂ ಅಸಭ್ಯ. ಕಾರಣ ಪವಿತ್ರಗೌಡ…ದರ್ಶನ್ ಅಸಲಿ ಸಂಸಾರ ಅಲ್ಲ. ಏನಾದಾರಾಗಲಿ…ಇನ್ನಾದರೂ ಈ ಹೆಣ್ಣು ಮುಖದ ಹುಣ್ಣು ದಾಸನ ಬದುಕಿಂದ ದೂರ ಹೋದರೆ…ಅಷ್ಟೇ ಆಯಸ್ಸು ಹೆಚ್ಚಾಗುತ್ತದೆ ದರ್ಶನ್ಗೆ…ಅಲ್ಲವೆ ?
ವಾ.ಓ: ಇದಿಷ್ಟು ಪರಪ್ಪನ ಅಗ್ರಹಾರ ಟು ಬಳ್ಳಾರಿ ಜೈಲಿನವರೆಗಿನ ತಾತ್ಕಾಲಿಕ ಕಥನ. ಈಗ ಹೊಸ ಸಿನಿಮಾದ ಶೂಟಿಂಗ್ ಬಳ್ಳಾರಿ ಬಿರು ಬಿಸಿಲಿನಲ್ಲಿ ಆರಂಭವಾಗಲಿದೆ. ಗಣಿ ಧೂಳು ಯರ್ಯಾರ ಕಣ್ಣನ್ನು ಅಗಲಿಸುತ್ತದೊ…ಮುಚ್ಚಿಸುತ್ತದೋ ಹಂಪೆಯ ವಿರೂಪಾಕ್ಷನಿಗೇ ಗೊತ್ತು. ಅಂದಹಾಗೆ ಬಳ್ಳಾರಿಯ ಉಸ್ತುವಾರಿಯನ್ನು ಬೆಂಗಳೂರು ಶಿವಾಜಿನಗರದ ಜಮೀರ್ ಸಾಹೇಬ್ ವಹಿಸಿಕೊಂಡಿದ್ದಾರೆ. ದಚ್ಚುಗೆ ಕುಚಿಕು ಗೆಳೆಯ ಈ ಜಮೀರ್. ಸದ್ಯಕ್ಕೆ ಬಳ್ಳಾರಿ ಅಳಿಯನಾಗಿರುವ ದರ್ಶನ್ಗೆ ಇದು ಅನುಕೂಲವಾ ಇಲ್ಲವೇ ಪ್ರತಿಕೂಲ ಹವಾಮಾನದ ಮುನ್ಸೂಚನೆಯಾ ? ನೋಡೋಣ…ಬಿಡಿ…
-ಮಹೇಶ್ ದೇವಶೆಟ್ಟಿ, ಫಿಲ್ಮ್ಬ್ಯೂರೊ, ಫ್ರೀಡಂ ಟಿವಿ