Tuesday, June 24, 2025
26.6 C
Bengaluru
Google search engine
LIVE
ಮನೆಜಿಲ್ಲೆನಿಗಮ ಮಂಡಳಿ ಆಯ್ಕೆ : ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಯಾರಿಗೆ ಮಣೆ.?

ನಿಗಮ ಮಂಡಳಿ ಆಯ್ಕೆ : ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಯಾರಿಗೆ ಮಣೆ.?

ಶಿಡ್ಲಘಟ್ಟ : ಮಂಡಳಿ ಆಯ್ಕೆ ಪ್ರಕ್ರಿಯೆ ಸರ್ಕಾರದಲ್ಲಿ ಶುರುವಾಗ್ತಿದ್ದಂಗೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನನಗೆ ತನಗೆ ಅನ್ನೋ ಹಾಗೆ ನಾಯಕರು ದುಂಬಾಲು ಬಿದ್ದಿದ್ದಾರೆ. ತಮ್ಮ ರಿಪೋರ್ಟ್ ಕಾರ್ಡ್ ಹಿಡಿದು ಡಿಸಿಎಂ ಡಿ.ಕೆ ಶಿವಕುಮಾರ್ ಮನೆ ಬಾಗಿಲು ಕಾಯೋಕೆ ಶುರುಮಾಡಿದಾರೆ. ಇಡೀ ಜೆಲ್ಲೆಯ ೫ ವಿಧಾನಸಭಾ ಕ್ಷೇತ್ರಗಳ ಪೈಕಿ ಬಾಗೇಪಲ್ಲಿ, ಚಿಂತಾಮಣಿ, ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸಾಧಿಸಿದ್ರೆ,ಶಿಡ್ಲಘಟ್ಟದಲ್ಲಿ ದಳ ಗೆದ್ದು ಬೀಗಿದೆ.

ಇನ್ನು ಗೌರಿಬಿದನೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎನ್.ಎಚ್ ಶಿವಶಂಕರರೆಡ್ಡಿಯನ್ನು ಪಕ್ಷೇತರ ಅಭ್ಯರ್ಥಿ ಪುಟ್ಟಸ್ವಾಮಿಗೌಡ ಸೋಲಿಸಿದ್ರೂ, ಪುಟ್ಟಸ್ವಾಮಿಗೌಡ ಕಾಂಗ್ರೆಸ್ ಪಕ್ಷದ ಪರ ಅಭ್ಯರ್ಥಿ ಅಂತಾ ಬಿಂಬಿಸಲಾಗಿದೆ. ಇದಕ್ಕೆ ಮೂಲ ಕಾರಣ ಡಿಕೆಶಿ ಜೊತೆಗಿನ ಗೌಡರ ನಂಟು ಹಾಗೂ ಹೊಸಕೋಟೆ ಶಾಸಕ ಶರತ್ ಬಚ್ಚೇಗೌಡರ ಮಾವ ಎನ್ನುವ ವಿಚಾರ.

ಈ ಎಲ್ಲಾ ಬೆಳವಣಿಗೆಗಳಲ್ಲಿ ಇಡೀ ಜಿಲ್ಲೆಯಲ್ಲಿ ಕಾಂಗ್ರೆಸ್ ಈಗ ಪಾರುಪತ್ಯ ಸ್ಥಾಪಿಸಿದೆ ಅಂದ್ರೆ ತಪ್ಪಲ್ಲಾ. ಹೀಗಾಗಿ ಜಿಲ್ಲೆಯನ್ನು ಪ್ರತಿನಿಧಿಸೋಕೆ ಯಾರಿಗಾದ್ರೂ ಒಂದು ನಿಗಮ-ಮಂಡಳಿ ಸ್ಥಾನ ನೀಡಬೇಕು ಎನ್ನುವ ಪಕ್ಷದ ತೀರ್ಮಾನಕ್ಕೆ ಈಗ ತೀವ್ರ ಪೈಪೋಟಿ ಮೂಡಿದೆ. ಪ್ರತಿ ವಿಧಾನಸಭಾ ಕ್ಷೇತ್ರದಿಂದಲೂ ನಿಗಮ-ಮಂಡಳಿ ಬೇಡಿಕೆ ಶುರುವಾಗಿದೆ. ಗೆದ್ದಿರುವ ಶಾಸಕರ ಪೈಕಿ ಚಿಂತಾಮಣಿ ಡಾ.ಎಂ.ಸಿ ಸುಧಾಕರ್ ಈಗಾಗಲೆ ಸಚಿವರಾಗಿದ್ದು ಅವರ ಕಟ್ಟಾ ಬೆಂಬಲಿಗರು ಹೇಗಾದ್ರೂ ಮಾಡಿ ಸ್ಥಾನ ಗಿಟ್ಟಿಸಬೇಕು ಅಂತಾ ಪರದಾಡ್ತಿದಾರೆ. ಶಿಡ್ಲಘಟ್ಟ ಕ್ಷೇತ್ರದಲ್ಲಿ ಮಾಜಿ ಶಾಸಕ ವಿ.ಮುನಿಯಪ್ಪ ಚುನಾವಣೆಯಿಂದ ದೂರ ಉಳಿದ್ರೂ ಕೂಡ ಹಿರಿಯ ನಾಯಕ ಎನ್ನುವ ಮಾನದಂಡದ ಮೇಲೆ ನಿಗಮ-ಮಂಡಳಿಯಲ್ಲಿ ಸ್ಥಾನ ಕಲ್ಪಿಸಿ ಅಂತಾ ಪಟ್ಟು ಹಿಡಿದಿದಾರೆ. ಹಿರಿಯ ನಾಯಕರನ್ನು ಭೇಟಿ ಮಾಡಿರುವ ಮಾಜಿ ಸಚಿವ ವಿ.ಮುನಿಯಪ್ಪ ಇದು ನನ್ನ ರಾಜಕೀಯ ಜೀವನದ ಕೊನೆಯ ಅವಧಿ ಈ ಬಾರಿ ನನಗೊಂದು ರಾಜಕೀಯ ನೆಲೆ ಕಲ್ಪಿಸಿಕೊಡಿ ಅಂತಿದಾರೆ.

ಇವರ ವಿರುದ್ದ ಪೈಪೋಟಿಗೆ ಬಿದ್ದಿರುವ ರಿಯಲ್ ಎಸ್ಟೇಟ್ ಉಧ್ಯಮಿ ಹಾಗೂ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಹೀನಾಯ ಸೋಲು ಅನುಭವಿಸಿರುವ ರಾಜೀವ್‌ಗೌಡ ಕೂಡ ನಿಗಮ-ಮಂಡಳಿ ಬೇಡಿಕ ಇಟ್ಟಿದ್ದಾರೆ. ಪಕ್ಷಕ್ಕಾಗಿ ಹಣ ಸುರಿದಿದ್ದೇನೆ, ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದೇನೆ, ಈಗ ಪಕ್ಷ ನನ್ನ ಕೈ ಬಿಟ್ರೆ ಮುಂದೆ ಜನರ ಬಳಿ ಹೋಗೋದಾದ್ರೂ ಹೇಗೆ ಅನ್ನೊ ಪ್ರಶ್ನೆಯನ್ನ ರಾಜೀವ್ ಗೌಡ ಹಿರಿಯ ಮುಖಂಡರ ಬಳಿ ತೋಡಿಕೊಂಡಿದ್ದಾರೆ ಅಂತಿದಾರೆ ಅವರ ಬೆಂಬಲಿಗರು. ಬೆಂಗಳೂರು ಮೂಲದಿಂದ ಬಂದು ಶಿಡ್ಲಘಟ್ಟ ಕ್ಷೇತ್ರದಲ್ಲಿ ಸ್ಪರ್ಧಿಸಿ ಮೂರನೇ ಸ್ಥಾನಿಕ್ಕೆ ತೃಪ್ತಿಪಟ್ಟುಕೊಂಡಿರುವ ರಾಜೀವ್ ಗೌಡ ಬಗ್ಗೆ ಹಿರಿಯ ಮುಖಂಡರಲ್ಲಿ ಒಲವಿಲ್ಲ ಅನ್ನೋದು ತಿಳೀತಿದೆ. ಇದಕ್ಕೆ ಮುಖ್ಯ ಕಾರಣ ಪಕ್ಷದ ಚಿಹ್ನೆ ಸಿಗದೆ ಹೋದ್ರೂ ಪಕ್ಷದ ಹೆಸರು ಪ್ರಚಾರ ಮಾಡಿಕೊಂಡು ಚುನಾವಣೆ ಸ್ಪರ್ಧಿಸಿ ಎರಡನೇ ಸ್ಥಾನಗಳಸಿರುವ ಪುಟ್ಟು ಆಂಜಿನಪ್ಪ ಶತಾಯ-ಗತಾಯ ನನಗೇ ನಿಗಮ ಮಂಡಳಿ ಬೇಕು ಅಂತಿದಾರೆ. ಈಗಾಗಲೆ ಕೃಷ್ಣಬೈರೇಗೌಡರ ಬೆಂಬಲ ಪಡೆದು ಸ್ಥಾನಕ್ಕಾಗಿ ಲಾಬಿನಡೆಸಿರೋದು ಗುಟ್ಟಾಗಿ ಉಳಿದಿಲ್ಲ.

ಮಾಜಿ ಸಚಿವ ವಿ.ಮುನಿಯಪ್ಪ, ಬಂಡಾಯ ಅಭ್ಯರ್ಥಿ ಪುಟ್ಟು ಆಂಜಿನಪ್ಪ, ಸೋಲನ್ನು ಮೂರನೇ ಸ್ಥಾನದಲ್ಲಿ ಸ್ವೀಕರಿಸಿರುವ ರಾಜೀವ್‌ಗೌಡ ನಡುವಿನ ಪೈಪೋಟಿ ನಿಲ್ಲುವಂತೆ ಕಾಣ್ತಿಲ್ಲ. ಮೂವರೂ ಹೇಗಾದ್ರೂ ಮಾಡಿ ಸ್ಥಾನ ಪಡೀಬೇಕು ಅಂತಾ ಪಟ್ಟು ಹಿಡಿದು ಕೂತಿದಾರೆ. ಇಂತಹ ಪೈಪೋಟಿಯನ್ನು ನಿವಾರಿಸಲು ಹೈ ಕಮ್ಯಾಂಡ್ ಮೂವರಿಗೂ ಸ್ಥಾನ ತಪ್ಪಿಸುವ ಚಿಂತನೆ ನಡೆಸಿದೆ. ಹೀಗಾಗಿ ಬಾಗೇಪಲ್ಲಿಲ ಕ್ಷೇತ್ರದಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಿರುವ ಎಸ್.ಎನ್.ಸುಬ್ಬಾರೆಡ್ಡಿಗೆ ನಿಗಮ ಮಂಡಳಿ ಸ್ಥಾನ ಕಲ್ಪಿಸುವ ಮೂಲಕ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯುವ ತಂತ್ರ ಹೆಣೆದಿದೆ. ಸೀನಿಯರ್ ಪಾಲಿಟಿಕ್ ಆಗಿರುವ ಸುಬ್ಬಾರೆಡ್ಡಿಗೆ ಈ ಬಾರಿ ಸಚಿವ ಸ್ಥಾನ ಖಾಯಂ ಅಂದುಕೊAಡಿದ್ದ ಬೆಂಬಲಿಗರಿಗೆ ನಿರಾಸೆ ಮೂಡಿದೆ. ಈ ಬಾರಿ ಸಚಿವ ಸ್ಥಾನ ನೀಡದ ಕಾಂಗ್ರೆಸ್ ಪಕ್ಷದ ಮೇಲೆ ಮುನಿಸು ಬಂದಿದೆ. ಕಾರ್ಯಕರ್ತರ ಈ ಮುನಿಸನ್ನು ನಿಗಮ, ಮಂಡಳಿ ನೀಡುವ ಮೂಲಕ ಶಮನ ಮಾಡಲು ಹೊರಟಿರುವ ಹೈ ಕಮ್ಯಾಂಡ್ ನಿಲುವಿಗೆ ಸುಬ್ಬಾರೆಡ್ಡಿ ಸುತಾರಾಂ ಒಪ್ಪುತ್ತಿಲ್ಲ. ಶಾಸಕನಾಗೆ ಉಳೀತಿನಿ ಕೊಡೋದಾದ್ರೆ ಸಚಿವ ಸ್ಥಾನ ನೀಡಿ ಅಂತಾ ಪಟ್ಟು ಹಿಡಿದು ಕೂತಿದಾರೆ.

ಈ ಎಲ್ಲಾ ಬೆಳವಣಿಗೆಗಳಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸಿರುವ ಗೌರಿಬಿದನೂರು ಶಾಸಕ ಪುಟ್ಟಸ್ವಾಮಿಗೌಡಗೆ ಹುದ್ದೆ ಕಲ್ಪಿಸುವ ಸನ್ನಿವೇಶಗಳು ಬಹಳಷ್ಟಿದೆ. ಇದಕ್ಕೆ ಪುಟ್ಟಸ್ವಾಮಿಗೌಡ ಡಿಕೆಶಿಗೆ ಪರಮಾಪ್ತ ಎನ್ನುವ ಕಾರಣವೂ ಒಂದಾಗಬಹುದು. ಆದ್ರೆ ಹೀಗೇನಾದ್ರೂ ಸ್ಥಾನ ಕಲ್ಪಿಸಿದ್ರೆ ಅದು ತಪ್ಪು ಸಂದೇಶವನ್ನು ಮತದಾರರಿಗೆ ನೀಡಿದಂತಾಗುತ್ತದೇನೋ ಎನ್ನುವ ಆತಂಕ ಹಿರಿಯ ನಾಯಕರನ್ನು ಕಾಡ್ತಿದೆ. ಹೀಗಾಗಿ ಎಲ್ಲವೂ ಸುಸೂತ್ರವಾಗಿ ಕೊನೆಗಾಣಬೇಕಾದ್ರೆ ಸಧ್ಯಕ್ಕೆ ಬಾಗೇಪಲ್ಲಿ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಮನವೊಲಿಸಿ ನಿಗಮ ಮಂಡಳಿ ಸ್ಥಾನ ನೀಡುವುದೇ ಸೂಕ್ತ ಎನ್ನುವ ಅಭಿಪ್ರಾಯ ರಾಜಕೀಯ .

 

 

 

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments