ಬಿ ಆರ್ ಪಾಟೀಲ್ ಆಡಿಯೋ ವೈರಲ್ ಬೆನ್ನಲ್ಲೇ ಅತ್ತ ಕಾಗವಾಡ ಶಾಸಕ ರಾಜು ಕಾಗೆ ಸಹ ತಮ್ಮದೇ ಪಕ್ಷದ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ಬಿ ಆರ್ ಪಾಟೀಲ್ ನಂತ ಪರಿಸ್ಥಿತಿ ನನ್ನದು ಆಗಿದೆ. ನಾನು ಸಹ ಎರಡು ದಿನಗಳಲ್ಲಿ ರಾಜೀನಾಮೆ ಸಲ್ಲಿಸುತ್ತೇನೆ ಎಂದು ರಾಜೂ ಕಾಗೆ ಘೋಷಣೆ ಮಾಡಿದ್ದಾರೆ. ಕಾಮಗಾರಿ ವರ್ಕ್ ಆರ್ಡರ್ ಕೊಡೋದಕ್ಕೆ ಸರ್ಕಾರದಿಂದ ವಿಳಂಬ ಆಗುತ್ತಿದೆ. ನಾನು ಎರಡು ದಿನಗಳಲ್ಲಿ ಮುಖ್ಯಮಂತ್ರಿ ಭೇಟಿ ರಾಜೀನಾಮೆ ಸಲ್ಲಿಸಿದ್ರೆ ಸಲ್ಲಿಸಬಹುದು.. ಎಂದಿದ್ದಾರೆ.
13 ಕೋಟಿ ರೂಪಾಯಿ ವೆಚ್ಚದಲ್ಲಿ 75 ಸಮುದಾಯದ ಭವನಗಳಿಗೆ ಅನುಮೋದನೆ ಸಿಕ್ಕಿದೆ. ಆದ್ರೆ, ಎರಡು ವರ್ಷದಿಂದ ವರ್ಕ್ ಆರ್ಡರ್ ಆಗ್ತಾ ಇಲ್ಲ ಎಂದು ಸಿದ್ದರಾಮಯ್ಯ ಸರ್ಕಾರದ ನಡೆ ಬಗ್ಗೆ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದಾರೆ.
ರಾಜೂ ಕಾಗೆ ಹೇಳಿಕೆ ಪಕ್ಷದ ಒಳಗೆ-ಹೊರಗೆ ತೀವ್ರ ಸಂಚಲನ ಮೂಡಿಸಿದೆ