ನಾರಾಯಣಸ್ವಾಮಿ ಅವರು ಮೈಸೂರಿನ ಇನ್ಪೋಸಿಸ್ ಹಾಗೂ ಮಂಡ್ಯದ ಬೂದನಗೆರೆಯ ಬಳಿ ಕೈಗಾರಿಕಾ ನಿವೇಶನಗಳನ್ನು ಖರ್ಗೆ ಅವರ ಸಹಾಯದಿಂದ ಪಡೆದಿದ್ದಾರೆ ಎನ್ನುವ ಮಾಹಿತಿಯನ್ನು ಆಪ್ತರು ನೀಡಿದ್ದಾರೆ.
ನಾರಾಯಣಸ್ವಾಮಿ ಅವರು ಕ್ಯಾಬಿನೆಟ್ ಸಚಿವ ಸ್ಥಾನಮಾನವಿರುವ ಅಖಿಲಾ ಭಾರತ ರೈಲ್ವೇ ಗ್ರಾಹಕರ ವೇದಿಕೆಯ ಅಧ್ಯಕ್ಷರಾಗಿದ್ದರು. ಇದನ್ನು ಸಹ ಮಲ್ಲಿಕಾರ್ಜುನ ಖರ್ಗೆ ಅವರ ಶಿಫಾರಸ್ಸಿನ ಮೇರೆಗೆ ಕಾಂಗ್ರೆಸ್ ಅಲ್ಲಿ ಇದ್ದಂತಹ ಕಾಲದಲ್ಲಿ ಇದನ್ನು ಪಡೆದಿದ್ದರು. ಕಾಂಗ್ರೆಸ್ ಪಕ್ಷದಲ್ಲಿ ಇದ್ದಾಗ ರಾಜಕೀಯ ಮೆಟ್ಟಿಲುಗಳನ್ನು ಹತ್ತಿ ಹೋದವರು ಸುಮ್ಮನೆ ಆರೋಪ ಮಾಡಬಾರದು.
ನಾರಾಯಣಸ್ವಾಮಿ ಅವರು ವ್ಯಕ್ತಿಗತವಾಗಿ ಟೀಕೆ ಮಾಡುವ ಮೊದಲು ಮಾಹಿತಿ ಪಡೆದುಕೊಂಡು ಟೀಕೆ ಮಾಡಬೇಕು. ನಾರಾಯಣ ಸ್ವಾಮಿ ಅವರು ಮಾಧ್ಯಮ ಗೋಷ್ಠಿಯಲ್ಲಿ ಬಿಡಿಎ ಉದಾಹರಣೆ ನೀಡಿದ್ದಾರೆ. ಅವರಿಗೆ ವಿಷಯದ ಕೊರತೆಯಿದೆ. 1983ರಲ್ಲಿ ತಂದ ತಿದ್ದುಪಡಿ ಪ್ರಕಾರ ಬಿಡಿಎ ಮೂಲೆ ನಿವೇಶನಗಳನ್ನು ಮಂಜೂರು ಮಾಡುವಂತಿಲ್ಲ ಹರಾಜು ಮಾಡಬೇಕು ಎನ್ನುವ ನಿಯಮ ತಿಳಿದು ಮಾಡನಾಡಬೇಕು. ಯಾವುದೇ ಕಾರಣಕ್ಕೂ ವ್ಯಕ್ತಿಗತವಾಗಿ ನಿವೇಶನಗಳನ್ನು ಪಡೆಯಲು ಆಗುವುದಿಲ್ಲ. ಇದನ್ನು ಸಂಘ, ಸಂಸ್ಥೆಗಳು ಮಾತ್ರ ಪಡೆಯಲು ಸಾಧ್ಯ.
ನಿಯಮಗಳ ಪ್ರಕಾರ ಹಾಗೂ ನ್ಯಾಯಲಯಗಳ ಆದೇಶದ ಪ್ರಕಾರ ಸಿಎ ನಿವೇಶನಗಳನ್ನು ಹರಾಜು ಮಾಡಲು ಅವಕಾಶವಿಲ್ಲ. ಬಿಜೆಪಿ ನಾಯಕರು ನಿಯಮ ಗೊತ್ತಿದ್ದೂ ಸಿಎ ನಿವೇಶಗಳನ್ನು ಹರಾಜು ಹಾಕಬೇಕು ಎಂದು ಜನರ ದಾರಿ ತಪ್ಪಿಸಲು ಹೇಳುತ್ತಿದ್ದಾರೋ ಗೊತ್ತಿಲ್ಲ. ನಾರಾಯಣಸ್ವಾಮಿ ಅವರು ಕೈಗಾರಿಕಾ, ಸಾಮಾನ್ಯ, ಸಿಎ ನಿವೇಶನಗಳ ವಿಧದ ಬಗ್ಗೆ ಮೊದಲು ತಿಳಿದುಕೊಳ್ಳಬೇಕಿತ್ತು. ಹರಾಜು ಮಾಡಬೇಕಿತ್ತು ಎಂದು ಸುಳ್ಳು ಹೇಳುತ್ತಿದ್ದಾರೆ.
ಆ.28, ಬುಧವಾರ (ಇಂದು) ಬಿಜೆಪಿ ಕಚೇರಿಯಲ್ಲಿ ಖರ್ಗೆ ಅವರ ಟ್ರಸ್ಟ್ ಗೆ ಭೂಮಿ ನೀಡಿರುವ ಬಗ್ಗೆ ಪತ್ರಿಕಾ ಗೋಷ್ಠಿ ನಡೆಸಲಾಗಿದೆ. ಇದಕ್ಕೆ ಸೂಕ್ತ ಉತ್ತರ ನೀಡಲಾಗುವುದು. ಹಾಗೂ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ರಾಜ್ಯಪಾಲರಿಗೆ ದೂರು ಸಲ್ಲಿಸಿದ್ದಾರೆ. ಜನಪ್ರತಿನಿಧಿಯಾದ ಅವರಿಗೆ ಸಿಎ ನಿವೇಶನ ಎಂದರೆ ಏನು, ಸಾಮಾನ್ಯ ನಿವೇಶನ ಎಂದರೆ ಏನು ಎಂಬುದು ತಿಳಿಯದಿರುವುದು ದುರಂತ ಹಾಗೂ ದುರದೃಷ್ಟಕರ.
ಕಳೆದ ಅನೇಕ ವರ್ಷಗಳಿಂದ ಕೆಐಡಿಬಿಯಲ್ಲಿ ನ್ಯಾಯಯುತವಾಗಿ ಸಿಎ ನಿವೇಶನಗಳ ಹಂಚಿಕೆಯಾಗಿಲ್ಲ. ಬಿಡಿಎ ಸೇರಿದಂತೆ ಯಾರು, ಯಾರು ನಿವೇಶನಗಳನ್ನು ಅಭಿವೃದ್ದಿ ಪಡಿಸುತ್ತಾರೋ ಅವರೆಲ್ಲಾ ಸಿಎ ನಿವೇಶನಗಳನ್ನು ಹಂಚಿಕೆ ಮಾಡಬೇಕು. ಆದರೆ ಎಷ್ಟೋ ಕಡೆಗಳಲ್ಲಿ ನ್ಯಾಯಯುತ ಹಂಚಿಕೆ ಮಾಡಲಾಗಿಲ್ಲ.
ಬಿಜೆಪಿ ಸರ್ಕಾರ ಅಧಿಕಾರದಲ್ಲಿ ಇದ್ದಾಗ ಅರ್ಜಿ ಕರೆಯಲಾಯಿತು. ಆದರೆ ಕಾರಣಾಂತರಗಳಿಂದ ಹಂಚಿಕೆ ಮಾಡಲು ಸಾಧ್ಯವಾಗಲಿಲ್ಲ. ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದ ನಂತರ ಸಿಎ ನಿವೇಶನಗಳನ್ನು ಹಂಚಿಕೆ ಮಾಡಲು ಕ್ರಮ ತೆಗೆದುಕೊಳ್ಳಲಾಗಿದೆ.
07.02.2024 ರಲ್ಲಿ ಕೆಐಡಿಬಿಯು ಸಿಎ ನಿವೇಶನಕ್ಕೆ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆ ಬಗ್ಗೆ ಏಳು ನಿಯಮಾವಳಿಗಳನ್ನು ಬಿಡುಗಡೆ ಮಾಡಿತ್ತು. ನಿವೇಶನಗಳನ್ನು ಯಾರೋ ಹಂಚಿಕೆ ಮಾಡಲು ಬರುವುದಿಲ್ಲ. ಕೈಗಾರಿಕಾ ಸಚಿವರು ಸಮಿತಿ ರಚನೆ ಮಾಡುತ್ತಾರೆ. ಅದರಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ಇರುತ್ತಾರೆ. ನಿವೇಶನ ಕೋರಿ ಬಂದಿರುವ ಅರ್ಜಿಗಳನ್ನು ಪರಿಶೀಲನೆ ಮಾಡಲಾಗುತ್ತದೆ. ಇದಕ್ಕೆ ನಿಗಧಿತ ಶುಲ್ಕ ಪಾವತಿ ಮಾಡಬೇಕಾಗುತ್ತದೆ. ನಿವೇಶನ ಮಂಜೂರಾದ ಇಂತಿಷ್ಟು ದಿನದೊಳಗೆ ಪೂರ್ತಿ ಮೊತ್ತ ನೀಡಬೇಕಾಗುತ್ತದೆ. ಆನಂತರ ಗುತ್ತಿಗೆ ಮೇಲೆ ಭೂಮಿ ನೀಡಲಾಗುತ್ತದೆ. ಸಂಸ್ಥೆಯವರು ಹೇಳಿದ ಯೋಜನೆ ಪೂರ್ತಿಗೊಳಿಸಿದ ನಂತರ ಭೂಮಿ ಹಂಚಿಕೆ ಮಾಡಲಾಗುತ್ತದೆ. ಏಕಗಂಟಿನಲ್ಲಿ ಪಾವತಿ ಮಾಡಿದ ಹಾಗೂ ಯೋಜನೆಯ ಪ್ರಗತಿ ನೋಡಿಕೊಂಡು ನಂತರ ಸೇಲ್ ಡೀಡ್ ಮಾಡಿಕೊಡುವ ಅವಕಾಶವೂ ಇರುತ್ತದೆ.
ಫೆಬ್ರವರಿ ಮೊದಲನೇ ವಾರದಲ್ಲಿ ಸಿಎ ನಿವೇಶನಕ್ಕೆ ಯಾರು, ಯಾರು ಅರ್ಜಿ ಹಾಕಬಹುದು ಎನ್ನುವುದಕ್ಕೆ ಪತ್ರಿಕಾ ಜಾಹೀರಾತು ನೀಡಲಾಗಿದೆ. ಕೆಐಡಿಬಿಯ ಅಧಿಕೃತ ವೆಬ್ ಸೈಟಿನಲ್ಲೂ ಮಾಹಿತಿ ನೀಡಲಾಗಿದೆ. ಬೆಂಗಳೂರಿನಲ್ಲಿ ಜೋನ್ 1, 2, 3 ವಿಭಾಗಗಳಿವೆ. ಒಂಬತ್ತು ಜಿಲ್ಲಾ ಕೇಂದ್ರಗಳಲ್ಲಿ ಒಟ್ಟು 193 ಸಿಎ ನಿವೇಶನಗಳಿಗೆ ಅರ್ಜಿ ಕರೆಯಲಾಗಿದೆ. ಒಟ್ಟು 377.69 ಎಕರೆ ಪ್ರದೇಶವನ್ನು ಹಂಚಿಕೆ ಮಾಡಲು ಅರ್ಜಿ ಕರೆಯಲಾಗಿತ್ತು. ಒಟ್ಟು 283 ಅರ್ಜಿಗಳು ಬಂದಿದ್ದವು. ಬೆಂಗಳೂರು ಜೋನ್ 1, 2 ಮತ್ತು 3ರಲ್ಲಿ ಕ್ರಮವಾಗಿ 67, 11, 127 ಅರ್ಜಿಗಳು ಬಂದಿವೆ. ಇವರು ಅರ್ಜಿ ಹಾಕುವಾಗ ಠೇವಣಿ ಮೊತ್ತವನ್ನು ಕಟ್ಟಿದ್ದಾರೆ. 20 ವರ್ಷಗಳ ಹಳೆಯ ಸಿದ್ದಾರ್ಥ ವಿಹಾರ ಟ್ರಸ್ಟ್ ಗೆ 5 ಎಕರೆ ಜಾಗವನ್ನು ಮಂಜೂರು ಮಾಡಲಾಗಿದೆ.
ಪ್ರಿಯಾಂಕ ಖರ್ಗೆ ಅವರು ಅಧಿಕಾರ ದುರುಪಯೋಗ ಮಾಡಿಕೊಂಡು ನಿವೇಶನ ಪಡೆದಿದ್ದಾರೆ ಎಂದು ಆರೋಪ ಮಾಡಿದ್ದಾರೆ. ನಿಯಮದ ಪ್ರಕಾರ ಬಂದ ಅರ್ಜಿಗಳಲ್ಲಿ ಶೇ 24 ರಷ್ಟು ನಿವೇಶನಗಳನ್ನು ಪರಿಶಿಷ್ಟ ಸಮುದಾಯಗಳಿಗೆ ಹಂಚಿಕೆ ಮಾಡಲಾಗಿದೆ. ಸಿದ್ದಾರ್ಥ ವಿಹಾರ ಸಂಸ್ಥೆಯ ಬಗ್ಗೆ ಹಾಗೂ ಅದರ ದ್ದೇಯೋದ್ದೇಶಗಳ ಬಗ್ಗೆ ಮಾತನಾಡುವುದಿಲ್ಲ ಬದಲಾಗಿ ಮಂತ್ರಿಯಾಗಿ ಅವರು ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ ಎನ್ನುವ ನಾರಾಯಣ ಸ್ವಾಮಿ ಅವರದ್ದು ತಪ್ಪು ಮಾಹಿತಿ.
ಚುನಾವಣಾ ಅಫಿಡವಿಟ್ ಅಲ್ಲಿ ಅಭ್ಯರ್ಥಿಯು ಯಾವುದಾರದೂ ಸಂಘ ಸಂಸ್ಥೆಯ ಸದಸ್ಯ ಸೇರಿದಂತೆ ಇತರೇ ಹುದ್ದೆಯಲ್ಲಿ ಇದ್ದರೆ ಅದನ್ನು ಯಾರೂ ತಿಳಿಸುವುದಿಲ್ಲ. ಆರ್.ಅಶೋಕ್ ಅವರು ತಮ್ಮ ಟ್ರಸ್ಟಿಗೆ 13 ಎಕರೆ ಜಾಗ ಪಡೆದು ವಿವಾದದ ನಂತರ ವಾಪಸ್ ಮಾಡಿದ್ದರು. ನಾರಾಯಣ ಸ್ವಾಮಿ ಅವರು ವೈಯಕ್ತಿಕ ವಿಚಾರಗಳನ್ನು ತಂದು ರಾಜಕೀಯಕರಣ ಮಾಡುತ್ತಿದ್ದಾರೆ.
ಲೆಹರ್ ಸಿಂಗ್ ಅವರು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ ಆದ ಕಾರಣ್ಕೆ ಎಂಎಲ್ ಸಿ ಹಾಗೂ ರಾಜ್ಯಸಭಾ ಸದಸ್ಯನಾಗಿದ್ದೇನೆ. ಇದೇ ಬಿಜೆಪಿಯ ತುಮಕೂರಿನ ದಿವಂಗತ ರಾಜಾಚಾರ್ ಎಂಬುವರು ಬಿಜೆಪಿಗೆ ಸಾಕಷ್ಟು ಕೆಲಸ ಮಾಡಿದರು. ಎಂಎಲ್ ಸಿ ಆಗಬೇಕು ಎಂದು ಪ್ರಯತ್ನಿಸಿದರೂ ಆಗಲಿಲ್ಲ. ಪುತ್ತೂರು ಶ್ರೀನಿವಾಸ್ ಅವರು ಬಿಜೆಪಿ ಕಟ್ಟುವ ನಿಟ್ಟಿನಲ್ಲಿ ಜೀವ ಸವೆಸಿದವರು ಅವರಿಗೂ ಸ್ಥಾನ ಸಿಗಲಿಲ್ಲ. ಅವರೆಲ್ಲರಿಗಿಂತ ಲೆಹರ್ ಸಿಂಗ್ ಅವರು ಹೆಚ್ಚು ಕೆಲಸ ಮಾಡಿದ್ದಾರೆ ಎನಿಸುತ್ತದೆ.
ಸಿಟಿ ಮಾರುಕಟ್ಟೆಯಲ್ಲಿ ಗುಜರಿ ವ್ಯಾಪಾರ ಮಾಡುತ್ತಿದ್ದ ಲೆಹರ್ ಸಿಂಗ್ ಅವರು ಇಂದು 73 ಕೋಟಿಗಳ ಒಡೆಯ. ಅವರು ಹೇಗೆ ನಡೆದುಕೊಂಡು ಬಂದರು, ಹೇಗೆ ಪಕ್ಷ ಕಟ್ಟಿದರು ಎಂಬುದು ಬಿಜೆಪಿಯವರಿಗೆ ಗೊತ್ತಿದೆ. ಇದೇ ಪಕ್ಷದ ವಾಮನಚಾರ್ಯ ಅವರು ಪಕ್ಷಕ್ಕಾಗಿ ದುಡಿದು ಏನೂ ಸ್ಥಾನಮಾನ ಸಿಗದೆ ಮನೋರೋಗಕ್ಕೆ ಒಳಗಾಗುವ ಸ್ಥಿತಿಗೆ ಬಂದಿದ್ದಾರೆ. ಶಂಕರಗೌಡ ಪಾಟೀಲ್ ಅವರು, ಶೇಷಗಿರಿಚಾರ್ಯ ಪ್ರಕಾಶ್ ಅವರು, ಬಿ.ವಿ.ಗಣೇಶ್ ಅವರು, ನರಹರಿ ರಾವ್ ಅವರು, ತೇಜಸ್ವಿನಿ ಅನಂತ್ ಕುಮಾರ್ ಅವರ ಟಿಕೆಟ್ ತಪ್ಪಿಸಿ ಲೆಹರ್ ಸಿಂಗ್ ಹೇಗೆ ಟಿಕೆಟ್ ಪಡೆದರು ಎಂಬುದನ್ನು ಅವರ ಪಕ್ಷದವರೇ ತಿಳಿಸಬೇಕು.
ನಾನು ರಾಜಸ್ಥಾನದಿಂದ ಬಂದರು ಲೋಕಲ್ ಮನುಷ್ಯ ಎಂದು ಸೋನಿಯಾ ಗಾಂಧಿ ಅವರ ಬಗ್ಗೆ ಮಾತನಾಡಿದ್ದಾರೆ. ದಯವಿಟ್ಟು ಇವರು ಸಂಘಪರಿವಾರದ ಸಾಹಿತ್ಯ ಓದಿ ಎಂದು ಹೇಳುತ್ತೇನೆ. ನಿಮ್ಮ ಸಂಘ ಪರಿವಾರದ ಗೋಳವಾಲ್ಕರ್ ಅವರು ಯಾರಿಂದ ಪ್ರಭಾವಕ್ಕೆ ಒಳಗಾದರು ಎಂದು ತಿಳಿದುಕೊಳ್ಳಿ, ನಿಮ್ಮ ಸಂಘವು ಹಿಟ್ಲರ್, ಮುಸಲೋನಿ ಅವರಿಂದ ಪ್ರಭಾವಕ್ಕೆ ಒಳಗಾಗಿದೆ. ಅವರು ಯಾವ ದೇಶದವರು ತಿಳಿದುಕೊಳ್ಳಿ ಲೆಹರ್ ಸಿಂಗ್ ಅವರೇ. ನಿಮ್ಮ ಸಂಘದ ಸಮವಸ್ತ್ರ ಹೇಗೆ ಬಂದಿತು ತಿಳಿದುಕೊಳ್ಳಿ. ಹಾಗೂ ಎಷ್ಟು ಬೇಗ ಮೇಲಕ್ಕೆ ಬರುವುದು ಎಂದು ಕಾರ್ಯಕರ್ತರಿಗೆ ಪಾಠ ಮಾಡಿ.
ಲೆಹರ್ ಸಿಂಗ್ ಅವರು ಹಾಗೂ ನಾರಾಯಣಸ್ವಾಮಿ ಅವರು ಸಿದ್ದಾರ್ಥ ವಿಹಾರ ಸಂಸ್ಥೆ ಹೇಗೆ ಕೆಲಸ ಮಾಡುತ್ತದೆ ಎಂದು ಸಂಸ್ಥೆಗೆ ಭೇಟಿ ನೀಡಿ ತಿಳಿದುಕೊಳ್ಳಲಿ.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಾಮಚಂದ್ರಪ್ಪ ಅವರ ಮಾತುಗಳು
ಗುಲ್ಬರ್ಗಾದ ಬುದ್ದ ವಿಹಾರದ ಉದ್ಘಾಟನೆ ವೇಳೆ ಅದರ ಸಂಘಟಕರಾಗಿದ್ದವರು. ಹಾಗೂ ದಲೈಲಾಮಾ ಅವರನ್ನು ಉದ್ಘಾಟನೆ ಮಾಡಲು ಆಹ್ವಾನಿಸಿದವರಲ್ಲಿ ಅವರೂ ಒಬ್ಬರೂ. ಕಾಂಗ್ರೆಸ್ ಪಕ್ಷದಲ್ಲಿ ಕೆಲಸ ಮಾಡಿದವರು.
ಪರಿಶಿಷ್ಟರ ಎಲ್ಲಾ ಸೌಲಭ್ಯಗಳನ್ನು ಖರ್ಗೆ ಅವರ ಕುಟುಂಬವೇ ಪಡೆದಿದೆ ಎನ್ನುವ ರೀತಿ ಮಾತನಾಡಿರುವುದು ಸರಿಯಿಲ್ಲ. ಕಾಂಗ್ರೆಸ್ ಕೇಂದ್ರ ಹಾಗೂ ರಾಜ್ಯದಲ್ಲಿ ಅಧಿಕಾರದಲ್ಲಿ ಇದ್ದಾಗ ಎರಡೂ ಕಡೆಯೂ ಒಂದಷ್ಟು ಕಡೆ ಅಧಿಕಾರ ಅನುಭವಿಸಿದರು. ಆಗ ಇವರು ಬೇಡ ಎಂದು ಹೇಳಬೇಕಿತ್ತು.
ಮೈಸೂರು ಹಾಗೂ ಮಂಡ್ಯದಲ್ಲಿ ಕೈಗಾರಿಕೆಗಳನ್ನು ನಡೆಸುತ್ತಿದ್ದಾರೆ. ಈಗ ಅದನ್ನು ಹರಾಜು ಹಾಕಿದರೆ ಕೋಟ್ಯಂತರ ರೂಪಾಯಿ ಬರುತ್ತದೆ ಇದು ಯಾವ ಕೊಡುಗೆ.
ದಲಿತ ನಾಯಕರಾಗಿ ಬೆಳೆಯುತ್ತಿರುವವರನ್ನು ದಲಿತ ನಾಯಕರನ್ನೇ ಇಟ್ಟುಕೊಂಡು ಹಣಿಯುವ ಕೆಲಸ ಮಾಡುತ್ತದೆ ಬಿಜೆಪಿ. ಕಸ ಪೊರಕೆಯಂತೆ ಬಳಸಿ ಬಿಸಾಡುತ್ತಾರೆ.
ದಲಿತ ನಾಯಕರು ಬಿಜೆಪಿಗೆ ಹೋಗಿ ಬಲಿಯಾಗಬೇಡಿ. ಅಂಬೇಡ್ಕರ್ ಅನುಯಾಯಿಗಳು ಏಕೆ ಬಿಜೆಪಿಗೆ ಹೋಗಿ ನಾಶವಾಗುತ್ತಿದ್ದಾರೆ. ಇನ್ನಾದರೂ ನಾರಾಯಣಸ್ವಾಮಿಗಳು ಬುದ್ದಿ ಕಲಿಯಲಿ.
ಮಾಧ್ಯಮಗೋಷ್ಠಿಯಲ್ಲಿ ಕಾನೂನು ಘಟಕದ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸಮೂರ್ತಿ ಅವರು ಉಪಸ್ಥಿತರಿದ್ದರು.