Big Boss : ಬಿಗ್ ಬಾಸ್ ೧೦ರ ರನ್ನರ್ ಅಪ್ ಡ್ರೋನ್ ಪ್ರತಾಪ್ , ಬಿಗ್ ಬಾಸ್ ಮನೆಯಲ್ಲಿನ ಆಟದ ಆನಂದದಿಂದ ಹೊರ ಬರೋ ಹೊತ್ತಲ್ಲೇ ಡ್ರೋನ್ ಪ್ರತಾಪ್ ಬೆನ್ನು ಬಿದ್ದ Dr ಪ್ರಯಾಗ್ . ಸಾಲು ಸಾಲು ಪ್ರತಾಪ್ ವಿರುದ್ದ ದೂರು ದಾಖಲಿಸಿರುವ Dr ಪ್ರಯಾಗ್ ಸಾಲಿಗೇ ಹೊರ ರಾಜ್ಯ ಮಹಾರಾಷ್ಟ್ರ ತಂಡವು ಸೇರ್ಪಡೆಯಾಗಿದೆ.
ಬ್ಯುಸ್ನೆಸ್ ಪಾಟ್ನರ್ ಮಾಡ್ತೀನಿ ಅಂತ ಲಕ್ಷ ಲಕ್ಷ ದೋಖಾ ಮಾಡಿದ್ದಾನೆ ಎಂದು ಆರೋಪ ಮಾಡಿದ್ದ, ಮಹಾರಾಷ್ಟ್ರ ಮೂಲದ ಸಾರಂಗ್ ಈಗ ಹಣಕ್ಕಾಗಿ ಪಟ್ಟು ಹಿಡಿಯುತ್ತಿದ್ದಾನೆ . ಬಿಗ್ ಬಾಸ್ ಮನೆಯಿಂದ ಹೊರ ಬಂದಿರುವ ಪ್ರತಾಪ್ ಮನೆಯಲ್ಲೇ ಠಿಕಾಣಿ ಹೂಡಿ ನನ್ನ ಹಣ ವಸೂಲಿ ಮಾಡಿಕೊಳ್ಳುತ್ತೇನೆ ಎಂದು ಹಠಕ್ಕೆ ಬಿದ್ದಿದ್ದಾನೆ ಸಾರಂಗ್.
ಇನ್ನೂ ಸಾರಂಗ್ ದೂರಿಗೆ ಶಕ್ತಿ ತುಂಬಲು Dr ಪ್ರಯಾಗ್ ಆರ್ ಆರ್ ನಗರದ ಪೊಲೀಸ್ ಠಾಣೆಯಲ್ಲಿ ಮತ್ತೊಂದು ದೂರು ದಾಖಲಿಸಿದ್ದಾರೆ . ಆ ದೂರಿನಲ್ಲಿ ಡ್ರೋನ್ ಪ್ರತಾಪ್ ಮಾತ್ರವಲ್ಲದೆ ಆತನ ತಂಡದ ಸದಸ್ಯರ ವಿರುದ್ಧವೂ ದೂರು ದಾಖಲಿಸಿದ್ದಾರೆ. ಡ್ರೋನ್ ಪ್ರತಾಪ್, ಸಿರಣ್ ಮಾದವ್, ಸಾರಂಗ ಸೀಮಂತ್ ಮಾನೆ ಮತ್ತು ಸಾಗರ್ ಗಾರ್ಗ್ ಮೇಲೆ ವಂಚನೆ ಆರೋಪ ಕೇಳಿಬಂದಿದ್ದು. ಇವರು ಡ್ರೋನಾರ್ಕ್ ಏರೋಸ್ಪೇಸ್ ಪ್ರೈ.ಲಿ ಮತ್ತು ಕ್ಯಾಸ್ಟರ್ ಡ್ರೋಣಾಟಿಕ್ಸ್ ಪ್ರೈ.ಲಿ ಕಂಪನಿಗಳನ್ನ ತೆರೆದು ವಂಚಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಸುಳ್ಳು ಮಾಹಿತಿ ನೀಡಿ ರೈತರಿಂದ ಹಣ ಪಡೆದು ವಂಚಿಸಿದ್ದಾರೆಂದು ಡಾ. ಪ್ರಯಾಗ್ ರಿಂದ ದೂರು ದಾಖಲಾಗಿದೆ.
ಈ ಬಗ್ಗೆ ತನಿಖೆ ಮಾಡಿ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಡಾ.ಪ್ರಯಾಗ್ ದೂರು ನೀಡಿದ್ದಾರೆ. ಸದ್ಯ ಡ್ರೋನ್ ಪ್ರತಾಪ್ ನಿನ್ನೆ ಬಿಗ್ ಬಾಸ್ ಮನೆಯಿಂದ ಹೊರಬಂದಿದ್ದಾರೆ. ಹೊರಬರುತ್ತಿದ್ದಂತೆಯೇ ಪ್ರತಾಪ್ ಮೇಲೆ ವಂಚನೆಯ ಕೇಸ್ ದಾಖಲಾಗಿದೆ.ಇನ್ನೂ ಎಲ್ಲರ ಚಿತ್ತ ಡ್ರೋನ್ ಪ್ರತಾಪ್ ಪ್ರತಿಕ್ರಿಯೆಯತ್ತ ನೆಟ್ಟಿದೆ. ಈ ಪ್ರಕರಣ ಮುಂದೆ ಯಾವ ತಿರುವು ಪಡೆದುಕೊಳ್ಳುತ್ತೋ ಕಾದು ನೋಡಬೇಕಿದೆ.