ರಾಜಕೀಯ

ಹೋರಾಟಗಾರರ ಬಿಡುಗಡೆಗೆ ಚಾಲುಕ್ಯ ಡಾ.ರಾಜ್ ಟ್ರಸ್ಟ್​​ ಆಗ್ರಹ

ಬೆಂಗಳೂರು : ಕರವೇ ರಾಜ್ಯಾಧ್ಯಕ್ಷ ನಅರಾಯಣಗೌಡ ಸೇರಿ 29 ಕನ್ನಡಪರ ಸಂಘಟನೆ ಕಾರ್ಯಕರ್ತರನ್ನು ಬಂಧನ ಖಂಡಿಸಿ ಕರವೇ ಕಾರ್ಯಕರ್ತರು ಹಾಗೂ ಡಾ. ರಾಜ್​ಕುಮಾರ್ ಪ್ರತಿಮೆ ಪ್ರತಿಷ್ಠಾಪನಾ ಟ್ರಸ್ಟ್ ಸದಸ್ಯರು ಪ್ರತಿಭಟನೆ ಮಾಡಿದರು. ನಗರದಲ್ಲಿಂದು ಫ್ರೀಡಂ ಪಾರ್ಕಿನ ಮೈದಾನದಲ್ಲಿ ಜಮಾಯಿಸಿದ ಹೋರಾಟಗಾರರು , ಆಂಗ್ಲಭಾಷೆಯ ನಾಮಫಲಕಗಳನ್ನು ತೆರವುಗೊಳಿಸುವಂತೆ ದಿಟ್ಟ ಹೋರಾಟ ಮಾಡಿದ ಕರವೇ ಕಾರ್ಯಕರ್ತರನ್ನು ಬಂಧಿಸಿದ್ದು ಖಂಡನೀಯ . ಕೂಡಲೇ ಎಲ್ಲರನ್ನೂ ಬಿಡುಗಡೆಗೊಳಿಸಬೇಕು ಎಂದು ಆಗ್ರಹಿಸಿದರು.

ಮಾತೃಭಾಷೆ ಕನ್ನಡ ನಮ್ಮದೇ ನೆಲ ಕರ್ನಾಟಕದಲ್ಲಿ ಅಗ್ರಮಾನ್ಯ ಭಾಷೆಯಾಗಿ ಉಳಿಯಬೇಕು ಮತ್ತು ಬೆಳೆಯಬೇಕು. ಆ ಮೂಲಕ ಅದರ ಆಸ್ಥಿತೆಯನ್ನು ಶಾಶ್ವತವಾಗಿ ಬೇರೆ ಯಾವುದೇ ಭಾಷೆಯ ಹಂಗು ಇಲ್ಲದೇ ಕಾಪಾಡಬೇಕು.

ಪ್ರಾಣ ಬಿಡ್ತೀವಿ ಹೊರೆತು ಕಡ್ಡಾಯವಾಗಿ ಕರ್ನಾಟಕ ಯಅವುದೇ ಮೂಲೆಯ ನಾಮಫಲಕಗಳಲ್ಲಿ ಕನ್ನಡ ಇಲ್ಲದೆ ಹೋದರೆ ಬಿಡಲಾರೆವು ಎಂದು ಹೋರಾಟಗಾರರು ಹೇಳಿದರು. ರಾಜ್ಯಸರ್ಕಾರ ಹೋರಾಟಗಾರರನ್ನು ಬಿಡುಗಡೆ ಮಾಡಲಿ. ಇಲ್ಲದಿದ್ದರೆ ರಾಜ್ಯದ್ಯಾಂತ ಹೀರಾಟಮಅಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

 ಮಹಾಲಕ್ಷ್ಮೀಪುರ  ಕುರುಬರಹಳ್ಳಿ ಚಾಲುಕ್ಯ ಡಾ ರಾಜ್ ಕುಮಾರ್ ಟ್ರಸ್ಟ್ ನೋಂ  ವತಿಯಿಂದ  ಕರವೇ ರಾಜ್ಯಾಧ್ಯಕ್ಷರಾದ ಟಿ.ಎ.ನಾರಾಯಣಗೌಡರ  ಬಿಡುಗಡೆಗಾಗಿ ಹಾಗೂ ಕಡ್ಡಾಯ ಕನ್ನಡ ನಾಮಫಲಕ ಕ್ಕಾಗಿ  ಬೃಹತ್ ಪ್ರತಿಭಟನೆ ಅಧ್ಯಕ್ಷರಾದ  ವಿ ಸುರೇಶ ಖಚಾಂಚಿ ಪುರೋಶೋತ್ತಮ  ರಘು ನಾಗರಾಜ್ ರಂಗಸ್ವಾಮಣ್ಣ ಸಂಚಾಲಕರಾದ ಪುನೀತ್.

Comments (0)

Your email address will not be published. Required fields are marked *

Back to top button