ಕೇಸರಿ ಕಾರ್ಯಕರ್ತ ಪುನೀತ್ ಕೆರೆಹಳ್ಳಿಗೆ ಒಳ್ಳೆ ಮೈಲೇಜ್ ಸಿಕ್ತಿದೆ. ಕಾಂಗ್ರೆಸ್ ಸರ್ಕಾರದಿಂದ ರೌಡಿ ಶೀಟರ್ ಓಪನ್ ಮಾಡಿಸಿಕೊಂಡಿದ್ದ ಕೆರೆಹಳ್ಳಿಗೆ ಇದೀಗ ಬಿಜೆಪಿಯ ಭೀಮಬಲ ಸಿಕ್ಕಿದೆ. ನಾಯಿ ಮಾಂಸ ಪ್ರಕರಣದಲ್ಲಿ ಅರೆಸ್ಟ್ ಆಗಿರುವ ಕೆರೆಹಳ್ಳಿಗೆ ಬಿಜೆಪಿ ನಾಯಕರ ಬೆಂಬಲ ಸಿಕ್ಕಿದೆ. ಮಾಜಿ ಸಂಸದ ಪ್ರತಾಪ್ ಸಿಂಹ ಅವರೆ ಖುದ್ದು ಪುನೀತ್ ಕೆರೆಹಳ್ಳಿಯನ್ನು ಸಹೋದರ ಎಂದು ಕರೆದಿದ್ದಾರೆ. ಜೊತೆಗೆ ಪೊಲೀಸ್ ಠಾಣೆಗೆ ತೆರಳಿ ಪುನೀತ್ ಪರ ಪ್ರತಿಭಟನೆ ನಡೆಸಿದ್ದಾರೆ. ಪುನೀತ್ ರನ್ನು ತಲೆಹಿಡುಕ, ಕಳ್ಳ, ಡಕಾಯಿತ, ಕೊಲೆಗಾರ ಎಂದೆಲ್ಲಾ ಕರೆಯುವವರ ಗುಂಪು ಒಂದೆಡೆಯಿದೆ. ಮತ್ತೊಂದೆಡೆ ಪುನೀತ್ ನನ್ನು ನಮ್ಮವನೆಂದು ಅಪ್ಪಿಕೊಳ್ಳುತ್ತಿದೆ. ಬಿಜೆಪಿ ಸಪೋರ್ಟ್ ಸಿಕ್ಕಿರುವುದು ಕೆರೆಹಳ್ಳಿಯ ಲಕ್ ಕುದುರುವ ಲಕ್ಷಣಗಳಿವೆ.