
ಕೇಂದ್ರ ಬಜೆಟ್ 2026ರಲ್ಲಿ ಭಾರತೀಯ ರೈಲ್ವೆ ವಲಯಕ್ಕೆ ಭಾರಿ ಕೊಡುಗೆ ನೀಡಲಾಗಿದ್ದು, ವಿಶೇಷವಾಗಿ ದಕ್ಷಿಣ ಭಾರತದ ನಗರಗಳಾದ ಬೆಂಗಳೂರು, ಚೆನ್ನೈ ಮತ್ತು ಹೈದರಾಬಾದ್ ನಡುವೆ ಸಂಚಾರ ವ್ಯವಸ್ಥೆಯನ್ನು ಕ್ರಾಂತಿಕಾರಿಯಾಗಿಸಲು 7 ಹೊಸ ಹೈಸ್ಪೀಡ್ ರೈಲ್ವೆ ಕಾರಿಡಾರ್ಗಳನ್ನು ಘೋಷಿಸಲಾಗಿದೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಚೆನ್ನೈ – ಬೆಂಗಳೂರು, ಬೆಂಗಳೂರು – ಹೈದರಾಬಾದ್,ಹೈದರಾಬಾದ್ – ಚೆನ್ನೈ,ಹೈದರಾಬಾದ್ – ಪುಣೆ,ಮುಂಬೈ – ಪುಣೆ,ದೆಹಲಿ – ವಾರಾಣಸಿ, ವಾರಾಣಸಿ – ಸಿಲಿಗುರಿ 7 ಪ್ರಮುಖ ಮಾರ್ಗಗಳನ್ನು ಘೋಷಿಸಿದ್ದಾರೆ. ಈ ಕಾರಿಡಾರ್ಗಳ ಮೂಲಕ ನಗರಗಳ ನಡುವಿನ ಪ್ರಯಾಣದ ಸಮಯವನ್ನು ಅರ್ಧಕ್ಕಿಂತಲೂ ಹೆಚ್ಚು ಕಡಿಮೆ ಮಾಡುವ ಗುರಿ ಹೊಂದಲಾಗಿದೆ.
ಉದಾಹರಣೆಗೆ, ಬೆಂಗಳೂರು ಮತ್ತು ಚೆನ್ನೈ ನಡುವಿನ ಪ್ರಯಾಣವು ಕೇವಲ 2 ಗಂಟೆಗಳ ಒಳಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಈ ರೈಲುಗಳು ಗಂಟೆಗೆ 250 ರಿಂದ 300 ಕಿ.ಮೀ ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿರಲಿವೆ. ಇದು ಕೇವಲ ಸಾರಿಗೆಯಲ್ಲದೆ, ಈ ನಗರಗಳ ನಡುವಿನ ಆರ್ಥಿಕ ವಹಿವಾಟನ್ನು ಹೆಚ್ಚಿಸಲು ಮತ್ತು ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ನೆರವಾಗಲಿದೆ.
ಕೇವಲ ಹೊಸ ಕಾರಿಡಾರ್ಗಳಲ್ಲದೆ, ಪ್ರಸ್ತುತ ಇರುವ ರೈಲ್ವೆ ಹಳಿಗಳನ್ನು ವಂದೇ ಭಾರತ್ ರೈಲುಗಳ ಗರಿಷ್ಠ ವೇಗಕ್ಕೆ ಅನುಗುಣವಾಗಿ ಮೇಲ್ದರ್ಜೆಗೇರಿಸುವ ಯೋಜನೆಯನ್ನೂ ಬಜೆಟ್ನಲ್ಲಿ ಉಲ್ಲೇಖಿಸಲಾಗಿದೆ. ಇದರಿಂದ ಸಾಮಾನ್ಯ ಎಕ್ಸ್ಪ್ರೆಸ್ ರೈಲುಗಳ ವೇಗವೂ ಹೆಚ್ಚಾಗಲಿದೆ.
ಈ ಕಾರಿಡಾರ್ಗಳನ್ನು ಗ್ರೋಥ್ ಕನೆಕ್ಟರ್ಸ್ ಎಂದು ಕರೆಯಲಾಗಿದ್ದು, ಇವು ಕೈಗಾರಿಕಾ ಕಾರಿಡಾರ್ಗಳ ಅಭಿವೃದ್ಧಿಗೆ ಪೂರಕವಾಗಿರಲಿವೆ. ವಿಶೇಷವಾಗಿ ಬೆಂಗಳೂರು-ಚೆನ್ನೈ ಮತ್ತು ಹೈದರಾಬಾದ್ ನಡುವಿನ ಈ “ತ್ರಿಕೋನ” ಸಂಪರ್ಕವು ಐಟಿ ಮತ್ತು ಉತ್ಪಾದನಾ ವಲಯಕ್ಕೆ ಭಾರಿ ಶಕ್ತಿ ನೀಡಲಿದೆ.




