Thursday, May 1, 2025
35.3 C
Bengaluru
LIVE
ಮನೆ#Exclusive Newsಮಹಿಳೆ ಬೈಕ್ ಗೆ ಡಿಕ್ಕಿ: ತರ್ಲೆ BMTC ಚಾಲಕನ ಕಿರಿಕ್ ಗೆ ಬಲಿ ಆಗ್ತಿತ್ತು ಮೂರು...

ಮಹಿಳೆ ಬೈಕ್ ಗೆ ಡಿಕ್ಕಿ: ತರ್ಲೆ BMTC ಚಾಲಕನ ಕಿರಿಕ್ ಗೆ ಬಲಿ ಆಗ್ತಿತ್ತು ಮೂರು ಜೀವ !

ಬೆಂಗಳೂರು: ಓರ್ವ ಮಹಿಳೆ ಆಕೆಯ ಇಬ್ಬರೂ ಮಕ್ಕಳನ್ನು ಸ್ಕೂಟರ್​ನಲ್ಲಿ ತಮ್ಮ ಪಾಡಿಗೆ ತಾವು ಹೋಗುತ್ತಿದ್ದರಂತೆ. ಈ ವೇಳೆ ಬೇಕು ಬೇಕು ಅಂತ ಬಿಎಂಟಿಸಿ ತರ್ಲೆ ಚಾಲಕ ಹಾರ್ನ್ ಮಾಡಿದ್ದಾನೆ. ಅವರು ತಿರುಗಿ ನೋಡಲಿಲ್ಲ ಎನ್ನುವ ಏಕೈಕ ಕಾರಣಕ್ಕೆ ಸ್ಕೂಟರ್​ಗೆ ಡಿಕ್ಕಿ ಹೊಡೆದಿದ್ದಾನೆ. ಚಾಲಕನ ನಿರ್ಲಕ್ಷ್ಯದಿಂದು ಸ್ವಲ್ಪ ಯಾಮಾರಿದರೂ ಇಂದು ಮೂವರು ಪ್ರಾಣ ಕಳೆದುಕೊಳ್ಳಬೇಕಾಗಿತ್ತು.

ಡಿಸೆಂಬರ್ ತಿಂಗಳಲ್ಲಿ ನಡೆದ ಮೊದಲ ಹಲ್ಲೆ

ಇತ್ತೀಚೆಗೆ ಬಿಎಂಟಿಸಿಯ ಕಂಡಕ್ಟರ್, ಡ್ರೈವರ್​ಗಳ ಮೇಲೆ ಹಲ್ಲೆ ಮಾಡುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ನಾಲ್ಕು ತಿಂಗಳಲ್ಲಿ ಇದು ಹತ್ತನೇ ಬಾರಿ ನಡೆದಿರುವ ಹಲ್ಲೆ ಪ್ರಕರಣವಾಗಿದ್ದರೆ, ನವೆಂಬರ್ ತಿಂಗಳಲ್ಲೇ ನಾಲ್ಕು ಕಂಡಕ್ಟರ್, ಡ್ರೈವರ್​ಗಳ ಮೇಲೆ ಹಲ್ಲೆಯಾಗಿತ್ತು. ಡಿಸೆಂಬರ್ ತಿಂಗಳಲ್ಲಿ ನಡೆದ ಇದು ಮೊದಲ ಹಲ್ಲೆಯಾಗಿದೆ.

ಜಾಲಹಳ್ಳಿ ಕ್ರಾಸ್​ನಿಂದ ಕೆಆರ್ ಮಾರುಕಟ್ಟೆಗೆ ಹೋಗುತ್ತಿದ್ದ ಬಿಎಂಟಿಸಿ ಬಸ್​, ಸುಮ್ಮನಹಳ್ಳಿ ಬಿಡ್ಜ್ ಬಳಿ ಒಂದು ಬೈಕ್​​ಗೆ ಟಚ್​ ಆಗಿದೆ. ಬೈಕ್​ ಓಡಿಸುತ್ತಿದ್ದ ಮಹಿಳೆ ಇದರಿಂದ ಕೋಪಗೊಂಡು, ಬಸ್​ ನಿಲ್ಲಿಸಿ ಚಾಲಕನನ್ನು ಎಳೆದು ಮನಬಂದಂತೆ ಥಳಿಸಿದ್ದಾಳೆ.

ನನ್ನ ಮತ್ತು ನನ್ನ ಮಕ್ಕಳನ್ನು ಕೊಲೆ ಮಾಡಲು ಹೀಗೆ ಮಾಡಿದ್ದಾನೆ. ಚೂರು ಯಾಮಾರಿದರೂ ಇಬ್ಬರು ಮಕ್ಕಳು ಪ್ರಾಣ ಕಳೆದುಕೊಳ್ಳುತ್ತಿದ್ದರು ಎಂದು ಕೂಗಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಂತರ ತನ್ನ ಸಹೋದರನನ್ನು ಕರೆಸಿ ಡ್ರೈವರ್​ಗೆ ಥಳಿಸಿದ್ದಾರೆ. ಆ ವೇಳೆ ಡ್ರೈವರ್ ಕುಸಿದು ಬಿದಿದ್ದು, ನಂತರ ಡ್ರೈವರ್​ನನ್ನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ.

+ posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments