#Exclusive NewsTop Newsರಾಜ್ಯಸುದ್ದಿ

ಸೋಮವಾರದಿಂದ ಬೆಳಗಾವಿ ಸುವರ್ಣಸೌಧದಲ್ಲಿ ಚಳಿಗಾಲದ ಅಧಿವೇಶನ ವಿಪಕ್ಷಗಳು ಸಾಲು ಸಾಲು ಅಸ್ತ್ರ

ಬೆಳಗಾವಿ: ನಾಳೆಯಿಂದ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ  ಪ್ರಾರಂಭ ಆಗಲಿದೆ. ಸರ್ಕಾರವನ್ನ ಕಟ್ಟಿ ಹಾಕಲು ವಿಪಕ್ಷಗಳು ಸಾಲು ಸಾಲು ಅಸ್ತ್ರ ರೆಡಿ ಮಾಡಿಕೊಂಡಿದ್ದರೆ ವಿಪಕ್ಷಗಳನ್ನು ಕಟ್ಟಿ ಹಾಕಲು ಸರ್ಕಾರವೂ ಸನ್ನದ್ದವಾಗಿದೆ.9 ದಿನಗಳ ಕಾಲ ಅಧಿವೇಶನ ನಡೆಯಲಿದ್ದು, ಆಡಳಿತ ಪಕ್ಷ ‌ಮತ್ತು ವಿಪಕ್ಷಗಳ ನಡುವೆ ಪ್ರತಿಷ್ಠೆಯ ಜಿದ್ದಿಗೆ ಅಧಿವೇಶನ ಸಾಕ್ಷಿಯಾಗಲಿದೆ. ಚಳಿಗಾಲದ ಅಧಿವೇಶನಕ್ಕೆ ಸುವರ್ಣ ಸೌಧವೂ ಸಿದ್ದವಾಗಿದ್ದು ಸ್ಪೀಕರ್ ಯುಟಿ ಖಾದರ್ ಸಿದ್ದತೆ ವೀಕ್ಷಣೆ ಮಾಡಿದರು.

ವಿಪಕ್ಷಗಳ ಬಳಿ ಇದೆ ಪ್ರಬಲ ಅಸ್ತ್ರ
ಈ ಬಾರಿಯ ಅಧಿವೇಶನದಲ್ಲಿ ಸರ್ಕಾರವನ್ನು ಕಟ್ಟಿ ಹಾಕಲು ವಿಪಕ್ಷಗಳಿಗೆ ಪ್ರಬಲ ಅಸ್ತ್ರಗಳು ಸಿಕ್ಕಿವೆ. ಸಿಎಂ ಸಿದ್ದರಾಮಯ್ಯ  ಮೇಲೆ ಕೇಳಿ ಬಂದಿರುವ ಮುಡಾ ಅಕ್ರಮ ಪ್ರಕರಣದಲ್ಲಿ ಇಡಿ ಪ್ರಸ್ತಾಪ ಮಾಡಿದ ಅಂಶಗಳು, ವಕ್ಪ್ ವಿವಾದ, ಬಳ್ಳಾರಿಯಲ್ಲಿ ಬಾಣಂತಿಯರ ಸಾವು ಪ್ರಕರಣ, ಅಲ್ಪಸಂಖ್ಯಾತರ ಸಂಸ್ಥೆಗಳಿಗೆ ನಿಯಮ ಸಡಿಲಿಕೆ ವಿಚಾರ, ಗುತ್ತಿಗೆಯಲ್ಲಿ ಅಲ್ಪಸಂಖ್ಯಾತರಿಗೆ ಮೀಸಲು ವಿವಾದ, ಗ್ಯಾರಂಟಿ ಯೋಜನೆಯಲ್ಲಿ ಲೋಪ.. ಹೀಗೆ ಸರ್ಕಾರದ ವಿರುದ್ದ ಸಾಲು ಸಾಲು ಅಸ್ತ್ರ ಪ್ರಯೋಗ ಮಾಡುವ ಮೂಲಕ ಸರ್ಕಾರವನ್ನ ತರಾಟೆಗೆ ತೆಗೆದುಕೊಳ್ಳಲು ವಿಪಕ್ಷಗಳು ಸಿದ್ದವಾಗಿವೆ.

ಸರ್ಕಾರಕ್ಕೆ ಕೋವಿಡ್ ಅಕ್ರಮದ ಅಸ್ತ್ರ.
ಸರ್ಕಾರದ ವಿರುದ್ದ ಸಮರ ಸಾರಲು ವಿಪಕ್ಷಗಳಿಗೆ ಸಾಲು ಸಾಲು ಅಸ್ತ್ರಗಳಿದ್ದು, ಅ ಅಸ್ತ್ರಗಳನ್ನ ಎದುರಿಸಲು ಸರ್ಕಾರದ ಬಳಿಯೂ ಬ್ರಹ್ಮಾಸ್ತ್ರಗಳು ರೆಡಿಯಾಗಿವೆ. ಯಡಿಯೂರಪ್ಪ ಅವಧಿಯಲ್ಲಿ ನಡೆದಿರುವ ಕೋವಿಡ್ ಅಕ್ರಮ ಕುರಿತು ನಿವೃತ್ತ ನ್ಯಾ. ಡಿ ಕುನ್ಹಾ ವರದಿ ಇಟ್ಟುಕೊಂಡು ಬಿಜೆಪಿಗೆ (BJP) ತಿರುಗೇಟು ನೀಡಲು ಸರ್ಕಾರ ರೆಡಿಯಾಗಿದೆ.

ಮಂಡನೆಯಾಗಲಿದೆ ಹಲವು ಮಹತ್ವದ ಮಸೂದೆಗಳು
ಅಧಿವೇಶನದಲ್ಲಿ ಸುಮಾರು 6ಕ್ಕೂ ಹೆಚ್ಚು ವಿಧೇಯಕಗಳು ಮಂಡನೆ ಆಗಲಿವೆ. ಬಿಬಿಎಂಪಿ ವಿಧೇಯಕ, ರಾಜ್ಯಪಾಲರ ಅಧಿಕಾರ ಮೊಟಕು ಮಾಡುವ ಗ್ರಾಮೀಣಾಭಿವೃದ್ಧಿ ವಿವಿ ವಿಧೇಯಕ, ಠೇವಣಿದಾರರ ಹಿತರಕ್ಷಣೆ ಕಾಯ್ದೆ ವಿಧೇಯಕ, ಗಣಿಗಾರಿಕೆ ಸಂಬಂಧಿಸಿದ ವಿಧೇಯಕ ಸೇರಿ ಹಲವು ಮಹತ್ವದ ವಿಧೇಯಕಗಳು ಮಂಡನೆ ಆಗಲಿದೆ. ಅಲ್ಲದೆ ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಚರ್ಚೆಗೂ ಹೆಚ್ಚು ಸಮಯ ಮೀಸಲು ಇರಲಿದೆ.

Comments (0)

Your email address will not be published. Required fields are marked *

Back to top button