Wednesday, June 25, 2025
26.8 C
Bengaluru
Google search engine
LIVE
ಮನೆ#Exclusive NewsTop NewsRameshwaramCafe: ರಾಮೇಶ್ವರಂ ಕೆಫೆಗೆ ಅಸಾದುದ್ದೀನ್ ಓವೈಸಿ ಭೇಟಿ.. ಪುಡಿ ಇಡ್ಲಿ ಸೇವನೆ

RameshwaramCafe: ರಾಮೇಶ್ವರಂ ಕೆಫೆಗೆ ಅಸಾದುದ್ದೀನ್ ಓವೈಸಿ ಭೇಟಿ.. ಪುಡಿ ಇಡ್ಲಿ ಸೇವನೆ

ಬೆಂಗಳೂರಿನ ಕುಂದಲಹಳ್ಳಿಯಲ್ಲಿ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಸಂಭವಿಸಿದ ನಂತರ ರಾಮೇಶ್ವರಂ ಕೆಫೆ ದೇಶಾದ್ಯಂತ ಸುದ್ದಿಯಾಗಿದೆ.

ಹೈದರಾಬಾದ್​ನ ರಾಮೇಶ್ವರಂ ಕೆಫೆಗೆ ಎಂಐಎಂ ಅಧ್ಯಕ್ಷ, ಸಂಸದ ಅಸಾದುದ್ದೀನ್ ಓವೈಸಿ ಭೇಟಿ ನೀಡಿ ಪುಡಿ ಇಡ್ಲಿ ತಿಂದು, ವಾವ್ ಸಖತ್ ಟೇಸ್ಟ್ ಎಂಬ ಉದ್ಘಾರ ತೆಗೆದಿದ್ದಾರೆ.

ರಾಮೇಶ್ವರಂ ಕೆಫೆಗೆ ಆಗಮಿಸಿದ ಅಸಾದುದ್ದೀನ್ ಓವೈಸಿಯವರನ್ನು ಕೆಫೆ ಒಡತಿ ದಿವ್ಯಾರಾಘವೇಂದ್ರರಾವ್ ಖುದ್ದಾಗಿ ಸ್ವಾಗತಿಸಿ ಸತ್ಕರಿಸಿದರು. ಅಸಾದುದ್ದೀನ್ ಓವೈಸಿ ಜೊತೆಗೆ ಸೆಲ್ಫಿ ತೆಗೆದುಕೊಳ್ಳಲು ಹಲವು ಗ್ರಾಹಕರು ಮುಗಿಬಿದ್ದಿದರು.

ಈ ಸಂದರ್ಭದಲ್ಲಿ ಎಪಿಜೆ ಅಬ್ದುಲ್ ಕಲಾಂ ಅವರ ಸ್ಮರಣಾರ್ಥ, ಅವರ ಹುಟ್ಟೂರಾದ ರಾಮೇಶ್ವರಂ ಹೆಸರನ್ನು ಕೆಫೆಗೆ ಇಟ್ಟಿರೋದನ್ನು ಶ್ಲಾಘಿಸಿದರು.

ಅಲ್ಲದೇ, ಬೆಂಗಳೂರಿನ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣವನ್ನು ಅಸಾದುದ್ದೀನ್ ಓವೈಸಿ ತೀವ್ರವಾಗಿ ಖಂಡಿಸಿದರು. ಇದು ಹೇಡಿಗಳ ಕೃತ್ಯ.. ಭಾರತೀಯ ಸಂಸ್ಕೃತಿ ಮೇಲಿನ ದಾಳಿ ಎಂದು ಅಸಾದುದ್ದೀನ್ ಓವೈಸಿ ಆಕ್ರೋಶ ಹೊರಹಾಕಿದರು. ನಿಮ್ಮೊಂದಿಗೆ ನಾವಿದ್ದೇವೆ ಎನ್ನುವ ಮೂಲಕ ದಿವ್ಯಾ ರಾಘವೇಂದ್ರರಾವ್ ಅವರಲ್ಲಿ ಅಸಾದುದ್ದೀನ್ ಓವೈಸಿ ಧೈರ್ಯ ತುಂಬಿದರು

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments