Tuesday, June 24, 2025
26.6 C
Bengaluru
Google search engine
LIVE
ಮನೆಜಿಲ್ಲೆತಮಿಳುನಾಡಿಗೆ ಅಣ್ಣಮಲೈ ಸಿಎಂ ಆಗ್ತಾರೆ: ಅವಧೂತ ವಿನಯ್ ಗುರೂಜಿ ಭವಿಷ್ಯ..!

ತಮಿಳುನಾಡಿಗೆ ಅಣ್ಣಮಲೈ ಸಿಎಂ ಆಗ್ತಾರೆ: ಅವಧೂತ ವಿನಯ್ ಗುರೂಜಿ ಭವಿಷ್ಯ..!

ಅಣ್ಣಮಲೈ. ಖಾಕಿ ಕಳಚಿಟ್ಟು ಇದೀಗ ಖಾದಿ ತೊಟ್ಟು ಪೂರ್ಣ ಪ್ರಮಾಣದ ರಾಜಕಾರಣಿಯಾಗಿ ತಮಿಳುನಾಡಿನಲ್ಲಿ ಓಡಾಡುತ್ತಿದ್ದಾರೆ..ನೆಲೆಯೇ ಇಲ್ಲದ ಬಿಜಿಪಿಗೊಂದು ಭದ್ರ ಬುನಾದಿ ಹಾಕೋಕೆ ಅಂತಲೇ ತಮಿಳುನಾಡು ರಾಜ್ಯದ ಅಧ್ಯಕ್ಷರಾಗಿ ಬಿಜೆಪಿ ಪಟ್ಟಕೊಟ್ಟಿದೆ. ಅದ್ರಂತೆ ಅಣ್ಣಮಲೈ ಕೂಡ ತಮಿಳುನಾಡು ತುಂಬಾ ಕಪ್ಪು, ಕೆಂಪು, ಬಿಳಿ ಧ್ವಜದ ನಡುವೆ ಕೇಸರಿ ಧ್ವಜ ಹಾರಿಸೋಕೆ ಸಜ್ಜಾಗಿದ್ದಾರೆ.

ಇದೀಗ. ಗೌರಿಗದ್ದೆಯ ಅವಧೂತ ಸ್ವಾಮೀಜಿ ಅಣ್ಣಮಲೈ ತಮಿಳುನಾಡಿನ ಸಿಎಂ ಆಗ್ತಾರೆ..ತಮಿಳುನಾಡಿನಲ್ಲಿ ಧರ್ಮ ಬೆಳೆಯುತ್ತದೆ ಅಂದಿದ್ದಾರೆ. ಅಷ್ಟೆ ಅಲ್ಲದೆ ಅಣ್ಣಮಲೈರವರಿಗೆ ಆಧ್ಯಾತ್ಮಿಕವಾಗಿಯೂ ಕೆಲವೊಂದು ಸಲಹೆ ಸೂಚನೆಗಳನ್ನ ಕೊಟ್ಟಿದ್ದಾರಂತೆ.. ಕೈಗೆ ಎರಡು ಸೇಬು ಕೊಟ್ಟು, ನೀವು ಸಿಎಂ ಆಗ್ತೀರಾ ಅಂತ ಹೇಳಿ ಕಳಿಸಿದ್ದಾರಂತೆ..ಸತ್ಯವಾಗುತ್ತಾ ಅವಧೂತ ವಿನಯ್ ಗುರೂಜಿ ಭವಿಷ್ಯ ಎಂಬ ಚರ್ಚೆಗಳು ಇದೀಗ ಆರಂಭವಾಗಿವೆ.

ಹೇಳಿ ಕೇಳಿ ಅಣ್ಣಮಲೈ ಕರುನಾಡಲ್ಲಿ, ಖಾಕಿ ತೊಟ್ಟು ಸೌಂಡ್ ಮಾಡಿದವರು..ಪೊಲೀಸ್ ಇಲಾಖೆಯಲ್ಲಿ ಸಾಕಷ್ಟು ಹೆಸ್ರು ಮಾಡಿದ್ರು..ವಿದ್ಯಾವಂತ ಯುವಕರಿಗೂ ಸ್ಪೂರ್ತಿ ಎನ್ನಿಸಿಕೊಂಡಿದ್ರು.. ಚಿಕ್ಕಮಗಳೂರು, ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆಗಳಲ್ಲಿ ಕೆಲಸ ಮಾಡಿ ಸೈ ಎನಿಸಿಕೊಂಡಿದ್ದವರು.. ಇನ್ನು ಇದೇ ಅಣ್ಣಮಲೈ ಚಿಕ್ಕಮಗಳೂರಿನಲ್ಲಿ ಎಸ್ಪಿ ಆಗಿದ್ದಾಗಿನಿಂದಲೇ ಗೌರಿಗದ್ದೆಯ ಅವಧೂತ ವಿನಯ್ ಗುರೂಜಿ ಜೊತೆ ಆತ್ಮೀಯವಾಗಿದ್ದವರು.. ಇನ್ನು ವಿನಯ್ ಗುರೂಜಿ ಸಂಕಷ್ಟಗಳ ಸಂದರ್ಭಗಳ ಸಮಯದಲ್ಲಿ ಕಾನೂನಾತ್ಮಕವಾಗಿಯೂ ನೆರವು ಕೊಟ್ಟಿದ್ರು.. ಅನೇಕ ವೇದಿಕೆ ಕಾರ್ಯಕ್ರಮಗಳಲ್ಲೂ ವಿನಯ್ ಗುರೂಜಿ ಮತ್ತು ಅಣ್ಣಮಲೈ ಕಾಣಿಸಿಕೊಂಡಿದ್ರು.

ಅದರ ಮುಂದುವರಿದ ಭಾಗ ಎಂಬಂತೆ, ಪೊಲೀಸ್ ಇಲಾಖೆಗೆ ರಾಜೀನಾಮೆ ಕೊಟ್ಟು ರಾಜಕೀಯದ ಹಾದಿ ತುಳಿದಿರುವ ಅಣ್ಣಮಲೈರಿಗೆ ಅವಧೂತ ವಿನಯ್ ಗುರೂಜಿ, ಭಾನುವಾರ ಕಡೂರು ತಾಲೂಕಿನ ಯಗಟಿಯಲ್ಲಿ ನಡೆದು ಕುಮಾರವ್ಯಾಸ ಜಯಂತಿ ಸಂದರ್ಭದಲ್ಲಿ ಭಾಷಣ ಮಾಡುತ್ತಾ ಅಣ್ಣಮಲೈ ತಮಿಳುನಾಡು ಸಿಎಂ ಆಗ್ತಾರೆ ಅಂತ ಭವಿಷ್ಯ ಹೇಳಿದ್ದೀನಿ ಅಂದ್ರು.. ಅಲ್ಲದೆ ತಿರುವಣ್ಣಾಮಲೈ ದೇವಸ್ಥಾನಕ್ಕೂ ಭೇಟಿ ಕೊಡ್ತೀರಿ ಅಂತ ಸಲಹೆ ನೀಡಿರುವುದಾಗಿ ತಿಳಿಸಿದ್ರಂತೆ.. ಅವರಿಗೆ ಎರಡು ಸೇಬು ಕೊಟ್ಟು ಆರ್ಶಿವಾದ ಮಾಡಿದ್ದೀನಿ ಅಂದ್ರು.

 

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments