ಬೆಂಗಳೂರಿನ ಜನರ ಪಾಲಿಗೆ, ಮಾಧ್ಯಮದವರ ಪಾಲಿಗೆ ಕೊಡುಗೈ ದಾನಿ ಎಂದೇ ಖ್ಯಾತರಾಗಿರುವ ಪ್ರಭಾವಿ ಶಾಸಕರಿಗೆ ಸಲಹೆಕೋರನ ಕಾಟ ತೀವ್ರವಾಗಿದೆ. ಮನೆಗೆ ಬಂದ ಯಾರನ್ನೂ ಬರಿಗೈನಲ್ಲಿ ಕಳಿಸದ ಆ ಈ ಲೀಡರ್ಗೆ ಆತನಿಂದ ಅಪಖ್ಯಾತಿ ಬರುತ್ತಿದೆ. ಶಾಸಕರ ಕಳೆದ ಬರ್ತ್ಡೇ ಸಮಯದಲ್ಲೂ ಪ್ಯಾಕೇಜ್ ಕೊಡಿಸುತ್ತೇನೆ ಎಂದು ತುಂಬಾ ಮಾಧ್ಯಮ ಸಂಸ್ಥೆಗಳನ್ನ ಕರೆಸಿ ಆ ಸಲಹೆಕೋರ ಪ್ರೋಗ್ರಾಂ ಮಾಡಿಸಿದ್ದ.. ಶಾಸಕರ ಬರ್ತ್ಡೇ ಪ್ರೋಗ್ರಾಂ ಕವರೇಜ್ಗೆ ಮಾಧ್ಯಮಗಳಿಗೆ ಸಾಕಷ್ಟು ಜಾಹೀರಾತು ಹಣ ಕೊಡೋದಾಗಿ ಹೇಳಿದ್ದ. ಆದರೆ ಹಲವರಿಗೆ ತನ್ನ ಪರ್ಸನಲ್ ರೀಸನ್ಗಾಗಿ ಹಣ ಕೊಡಿಸದೆ ಅವರೆಲ್ಲಾ ಶಾಸಕರ ವಿರುದ್ಧ ತಿರುಗಿ ಬೀಳುವಂತೆ ಮಾಡಿದ್ದಾನೆ.
ಈತ ಬರುವ ಮುಂಚೆ ಸದರಿ ಶಾಸಕರನ್ನು ದ್ವೇಷಿಸುವ ಜನರೇ ಇರಲಿಲ್ಲ. ಆದರೆ ಈತ ಬಂದಮೇಲೆ ಶಾಸಕರಿಗೆ ಹಲವು ವಿರೋಧಿಗಳು ಹುಟ್ಟಿಕೊಂಡಿದ್ದಾರೆ.. ಈತ ಬಂದ ಮೇಲೆ ಶಾಸಕರು, ಸಿಎಂ, ಡಿಸಿಂಎ ಕಚೇರಿ ಆವರಣ, ಮಂತ್ರಿಗಳ ಪಡಸಾಲೆಯಲ್ಲಿನಿರಂತರವಾಗಿ ಚಾಡಿಮಾತುಗಳು ಕೇಳಿಬರುತ್ತಿವೆ. ಇವನ ಮೇಲಿನ ಸಿಟ್ಟನ್ನು ಶಾಸಕರು ಹಾಗು ಅವರ ಕುಟುಂಬಸ್ಥರ ಮೇಲೆ ತಿರುಗಿಸುತ್ತಿದ್ದಾರೆ. ಯಾವುದಾದರು ಸುದ್ದಿಗಳು ಪ್ರಸಾರವಾದರೆ ಅವರಿಗೆ ಕರೆ ಮಾಡಿ ಧಮ್ಕಿ ಹಾಕುವ ರೀತಿ ಮಾತನಾಡುವುದು, ನಾನಿಲ್ಲದಿದ್ದರೆ ಶಾಸಕರ ಕಚೇರಿಯೇ ನಡೆಯಲ್ಲ ಎಂಬ ರೀತಿ ಮಾತನಾಡುವುದು
ಶಾಸಕರು ಮತ್ತು ಅವರ ಮಗ ನನ್ನ ಮೇಲೆ ಫುಲ್ ಡಿಪೆಂಡ್ ಆಗಿದ್ದಾರೆಂದು ಲೂಸ್ ಟಾಕ್ ಮಾತನಾಡುತ್ತಾ ಗೌರವಸ್ಥ ಶಾಸಕರ ಮಾನ ಕಳೆಯುತ್ತಿದ್ದಾನೆ..
ಶಾಸಕರ ಕುಟುಂಬ ಈ ಬಾರಿ ಸಚಿವ ಸ್ಥಾನ ಕಳೆದುಕೊಳ್ಳಲು ಶಾಸಕರ ಸಲಹೆಗಾರನ ಲೂಸ್ ಟಾಕ್ಗಳೇ ಪ್ರೇರಣೆ ಎನ್ನಲಾಗ್ತಿದೆ..
ಶಾಸಕರ ಕಚೇರಿಗೆ ಬರುವ ಬೆಂಬಲಿಗರು ಕೂಡ ಈತನ ಚಿಲ್ಲರೆ ವರ್ತನೆಗೆ ಬೇಸತ್ತಿದ್ದಾರೆ. ಶಾಸಕರ ಜೊತೆಗೆ ಇದ್ದುಕೊಂಡು, ತಿಂದುಂಡು ಆರ್ಥಿಕವಾಗಿ ದುಂಡಗಾಗಿರುವ ಈತನನ್ನ ಉಗಿದು ಅಟ್ಟದಿದ್ದರೆ, ಶಾಸಕರ ಇಮೇಜ್ ಮತ್ತಷ್ಟು ಹಾಳಾಗಲಿದೆ ಎನ್ನುತ್ತಿದ್ದಾರೆ.
ಯಾರಿಗೂ ಕೇಡು ಬಯಸದ, ಯಾರಿಗೂ ಇಲ್ಲ ಎನ್ನದ ಶಾಸಕರ ಪಕ್ಕದಲ್ಲಿ ವಕ್ಕರಿಸಿಕೊಂಡಿರುವ ಶನಿಯಂತಾ ಈತ, ತುಟಿ ಮೀರಿದ ಹಲ್ಲಿನಂತೆ ಆಡುತ್ತಿದ್ದು, ಶಾಸಕರ ಕುಟುಂಬದ ಗೌರವ ಕಳೆಯುತ್ತಿರುವುದು ಬೆಂಬಲಿಗರ ಆಕ್ರೋಶಕ್ಕೆ ಕಾರಣವಾಗಿದೆ..