ಕನ್ನಡ ಚಿತ್ರರಂಗದ ಜನಪ್ರಿಯ ನಿರ್ದೇಶಕ ಮಂಸೋರೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕನ್ನಡದಲ್ಲಿ ತಮ್ಮದೇ ಶೈಲಿಯಲ್ಲಿ ಸಿನಿಮಾಗಳನ್ನು ನಿರ್ದೇಶನ ಮಾಡಿ ರಾಷ್ಟ್ರ ಪ್ರಶಸ್ತಿಯನ್ನು ಗಿಟ್ಟಿಸಿಕೊಂಡಿದ್ದಾರೆ. ಈ ಜನಪ್ರಿಯ ನಿರ್ದೇಶಕನ ದಾಂಪತ್ಯ ಜೀವನದಲ್ಲಿ ಬಿರುಗಾಳಿ ಬೀಸಿದೆ.
ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಮಂಸೋರೆ ಪತ್ನಿ ಅಖಿಲಾ ತಮ್ಮ ಪತಿ ವಿರುದ್ಧ ವರದಕ್ಷಣೆ ಹಾಗೂ ಕೊಲೆ ಬೆದರಿಕೆ ಕೇಸನ್ನು ದಾಖಲಿಸಿದ್ದಾರೆ.
ಮಂಸೋರೆ ಪೊಲೀಸರಿಗೆ ನೀಡಿದ ದೂರಿನಲ್ಲಿ ನನ್ನ ಪತ್ನಿ ಮಾನಸಿಕ ಖಿನ್ನತೆಗೆ ಒಳಗಾಗಿದ್ದಾಳೆ , ಅದಕ್ಕಾಗಿ ಈ ಹಿಂದೆ ಅವಳನ್ನು “ಸಂಪೂರ್ಣ ಕೌನ್ಸಲಿಂಗ್” ಸೆಂಟರ್ ನಲ್ಲಿ ಚಿಕಿತ್ಸೆಗಾಗಿ ಕರೆದೊಯ್ದಿದ್ದೆ ಎಂದು ಹೇಳಿಕೊಂಡಿದ್ದಾರೆ.
ಅಖಿಲಾ ದೂರಿನ ಪ್ರಕಾರ ಪತಿ ಮಂಸೋರೆ ಸಿನಿಮಾ ಮಾಡುವುದಾಗಿ ನನ್ನ ತವರಿನಿಂದ 10 ಲಕ್ಷವನ್ನು ಪಡೆದಿದ್ದಾರೆ ,ಹಾಗೆ ನನ್ನ ಅತ್ತೆ ಮತ್ತು ನಾದಿನಿ 30 ಲಕ್ಷ ರೂಪಾಯಿಯ SUV ಕಾರನ್ನು ಕೊಡಿಸುವಂತೆ ದುಂಬಾಲು ಬಿದ್ದಿದ್ದಾರೆ, ಈ ವಿಚಾರ ಹೊರಗೆ ಬಾಯ್ ಬಿಟ್ರಿ ಕೊಂದುಬಿಡುದಾಗಿ ದಮಕಿ ಹಾಕಿತ್ತಿದ್ದರು .ಎಂದು ಪತಿಯ ಮನೆಯವರ ವಿರುದ್ಧ ಸುಬ್ರಮಣ್ಯ ಪುರ ಪೊಲೀಸ್ ಠಾಣೆಯಲ್ಲಿ ದೂರನ್ನು ನೀಡಿದ್ದಾರೆ
ಮಂಸೋರೆ ,ನನ್ನ ಪತ್ನಿ ಮನೆಯಿಂದ ಮದುವೆಯ ಸಂದರ್ಭದಲ್ಲಿ ಯಾವುದೇ ನಗದು ಹಾಗೂ ಚಿನ್ನಾಭರಣಗಳು ,ವಾಹನ ಇತ್ಯಾದಿಗಳನ್ನು ವರದಕ್ಷಿಣೆಯಾಗಿ ಪಡೆದಿಲ್ಲ
ತಮ್ಮ ದೂರಿನಲ್ಲಿ ಸ್ಪಷ್ಟನೆ ನೀಡಿದ್ದಾರೆ. ನನ್ನ ಪತ್ನಿ ಮನೆಯಿಂದ ಹೊರಗೆ ಹೋಗುವಾಗ ನಾನು ಕೊಡಿಸಿದ್ದ ಚಿನ್ನಾಭರಣಗಳು ಹಾಗೂ ನಾನು ನಿರ್ದೇಶನ ಮಾಡಿ ಪ್ರಶಸ್ತಿ ಪಡೆದಿದ್ದ ಪದಕಗಳನ್ನು ಒತ್ತೋಯ್ದಿದ್ದಾರೆ
2021 ರಲ್ಲಿ ಪ್ರೀತಿಸಿ ಮದುವೆಯಾಗಿದ್ದ ಮಂಸೋರೆ ಹಾಗೂ, ಅಖಿಲಾ ಮೂರು ವರ್ಷಗಳಲ್ಲಿಯೇ ಒಬ್ಬರ ವಿರುದ್ಧ ಮತ್ತೊಬ್ಬರು ಪೊಲೀಸ್ ಕೇಸನ್ನು ದಾಖಲಿಸಿಕೊಂಡಿದ್ದಾರೆ