Tuesday, April 29, 2025
30.4 C
Bengaluru
LIVE
ಮನೆ#Exclusive NewsTop Newsಸುಧಾಕರ್​-ಪ್ರದೀಪ್ ಈಶ್ವರ್​ ರಾಜಕೀಯ ಆಟ.. ಕರಗ್ತಿವೆ ಬೆಟ್ಟಗುಡ್ಡ

ಸುಧಾಕರ್​-ಪ್ರದೀಪ್ ಈಶ್ವರ್​ ರಾಜಕೀಯ ಆಟ.. ಕರಗ್ತಿವೆ ಬೆಟ್ಟಗುಡ್ಡ

ಚಿಕ್ಕಬಳ್ಳಾಪುರದಲ್ಲಿ ಕಲ್ಲುಕ್ವಾರಿ ಪಾಲಿಟಿಕ್ಸ್ ಜೋರಾಗಿದೆ. ರೈತನಿಗೆ ಗುಂಡಿಟ್ಟ ಪ್ರಕರಣ ಸಂಬಂಧ ರಾಜಕೀಯ ಕೆಸರೆರಚಾಟ ಜೋರಾಗಿದೆ.

ಕಳೆದ ವಾರ ರೈತನ ಮೇಲೆ ಗುಂಡು ಹಾರಿಸಿದ್ದ ಉದ್ಯಮಿ ಸಕಲೇಶ್ ಗೆ ನ ನಿಜಕ್ಕೂ ​ ಕಲ್ಲುಕ್ವಾರಿಗೆ ಪರವಾನಗಿ ಕೊಡಿಸಿದ್ಯಾರು? ಮಾಜಿ ಮಂತ್ರಿ, ಹಾಲಿ ಶಾಸಕ ಸುಧಾಕರ್​ ಅವರಾ? ಚಿಕ್ಕಬಳ್ಳಾಪುರದ ಹಾಲಿ ಶಾಸಕ ಪ್ರದೀಪ್ ಈಶ್ವರ್​ ಅವರಾ? ಕಲ್ಲು ಕ್ಚಾರಿಗೆ ಸಂಸದ ಸುಧಾಕರ್ ಪರ್ಮೀಷನ್ ಕೊಡಿಸಿದ್ರಾ? ಮುಂದುವರಿಕೆಗೆ ಶಾಸಕ ಪ್ರದೀಪ್​ ಈಶ್ವರ್​ ಗ್ರೀನ್ ಸಿಗ್ನಲ್ ಕೊಟ್ರಾ ಎಂಬ ಪ್ರಶ್ನೆ ಎದ್ದಿದೆ.

ಈ ವಿಚಾರದಲ್ಲಿ ರಾಜಕೀಯ ಕೆಸರೆರಚಾಟ ಜೋರಾಗಿದೆ. ಸುಧಾಕರ್ ಮೇಲೆ ಪ್ರದೀಪ್ ಈಶ್ವರ್​.. ಪ್ರದೀಪ್ ಈಶ್ವರ್ ಮೇಲೆ ಸುಧಾಕರ್ ಆರೋಪ ಮಾಡಿಕೊಳ್ತಿದ್ದಾರೆ..

ಅವರ-ಇವರ ರಾಜಕೀಯದಲ್ಲಿ ಚಿಕ್ಕಬಳ್ಳಾಪುರದ ಮಂದಿ ಬಡವಾಗ್ತಿದ್ದಾರೆ. ಸುಧಾಕರ್ -ಪ್ರದೀಪ್ ಈಶ್ವರ್ ರಾಜಕೀಯಕ್ಕೆ ಬೆಟ್ಟಗುಡ್ಡಗಳು ಕರಗ್ತಿವೆ. ಹೀಗಾಗಿ ಸಂಸದ ಸುಧಾಕರ್ ಮತ್ತು ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ರೈತರು ಸಿಟ್ಟು ಹೊರಹಾಕ್ತಿದ್ದಾರೆ.

ಆ ಪಕ್ಷದಲ್ಲಿ ಇರೋರು ಈ ಪಕ್ಷಕ್ಕೆ..ಈ ಪಕ್ಷದಲ್ಲಿ ಇರೋರು ಆ ಪಕ್ಷಕ್ಕೆ ಸಪೋರ್ಟ್ ಮಾಡ್ತಾರೆ.. ಪ್ರದೀಪ್ ಈಶ್ವರ್​ ಎಂಎಲ್​​ಎ ಆದ ಹೊಸತರಲ್ಲಿ ನಿಲ್ಲಿಸಿದ್ರು .. ಬಳಿಕ ಮತ್ತೆ ಸ್ಟಾರ್ಟ್ ಆಗಿದೆ.. ಯಾವುದೂ ಕಾನೂನು ಬದ್ಧವಾಗಿ ನಡೀತಿಲ್ಲ.. ಅಧಿಕಾರಿಗಳಿಗೆ ಲಂಚ ಕೊಡುತ್ತಿದ್ದಾರೆ.. ಕಂಪ್ಲೇಂಟ್ ಕೊಟ್ಟರೂ ತೆಗೆದು ಎಸೆಯುತ್ತಿದ್ದಾರೆ ಎಂದು ರೈತರು ಆಕ್ರೋಶ ಹೊರಹಾಕಿದ್ದಾರೆ.

+ posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments