ಬೆಳಗಾವಿ(ಅಥಣಿ) :ಉತ್ತರ ಕರ್ನಾಟಕದ ಹಲವು ಭಾಗಗಳಲ್ಲಿ ಎರಡು-ಮೂರು ದಿವಸದಿಂದ ಧಾರಾಕಾರ ಮಳೆ ಸುರಿತಾ ಇದೆ.ಅದೆ ರೀತಿ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನಲ್ಲಿ ಭೀಕರ ಮಳೆ ಸಂಭವಿಸಿದೆ. ದೇವರ ದರ್ಶನಕ್ಕೆ ತೆರಳಿದ ವ್ಯಕ್ತಿ ಶವವಾಗಿ ಪತ್ತೆಯಾಗಿದ್ದಾನೆ.ಬೆಳಗಾವಿ ಜಿಲ್ಲೆ ಅಥಣಿ ಪಟ್ಟಣದ ಜೆರೆ ಗಲ್ಲಿ ನಿವಾಸಿ ಗುರುರಾಜ ಇರಪ್ಪ ಯಾದವಾಡ (75) ಮೃತ ದುರ್ದೈವಿ ಎಂದು ತಿಳಿದು ಬಂದಿದೆ.ಇಂದು ನಸುಕಿನಜಾವ ದೇವರ ದರ್ಶನಕ್ಕೆ ಮಸೊಬಾ ಹಳ್ಳ ದಾಟುವಾಗ ನೀರಿನ ರಭಸಕ್ಕೆ ವ್ಯಕ್ತಿ ಕೊಚ್ಚಿಹೋಗಿದ್ದು ಆಜಾದ್ ಸರ್ಕಲ್ ಬಳಿಯ ಅಗಸಿ ಹತ್ತಿರ ಶವವಾಗಿ ಪತ್ತೆಯಾಗಿದ್ದಾನೆ ಎಂದು ತಿಳಿದುಬಂದಿದೆ.
ಸ್ಥಳಕ್ಕೆ ಅಥಣಿ ಪೊಲೀಸ್ ರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.