Thursday, November 20, 2025
21.7 C
Bengaluru
Google search engine
LIVE
ಮನೆ#Exclusive NewsTop News3 ಎಕರೆ ದಾಳಿಂಬೆ ಬೆಳೆ ಬೆಂಕಿಗಾಹುತಿ; ರೈತನಿಗೆ ಪರಿಹಾರ ನೀಡಲು ರೈತ ಸಂಘ ಆಗ್ರಹ

3 ಎಕರೆ ದಾಳಿಂಬೆ ಬೆಳೆ ಬೆಂಕಿಗಾಹುತಿ; ರೈತನಿಗೆ ಪರಿಹಾರ ನೀಡಲು ರೈತ ಸಂಘ ಆಗ್ರಹ

ಯಾದಗಿರಿ: ಜಿಲ್ಲೆಯ ವಡಗೇರಾ ತಾಲೂಕಿನ ಶಿವಪೂರ ಗ್ರಾಮದಲ್ಲಿ ಆಕಸ್ಮಿಕ ಬೆಂಕಿ ತಗುಲಿ ಸುಮಾರು 3 ಎಕರೆಗೂ ಹೆಚ್ಚು ದಾಳಿಂಬೆ ಬೆಳೆ ಸುಟ್ಟು ಭಸ್ಮವಾದ ಘಟನೆ ನಡೆದಿದೆ.

ಸೈದಪ್ಪ ರಾಮದುರ್ಗ ಎಂಬುವವರಿಗೆ ಸೇರಿದ ತೋಟದಲ್ಲಿ ರವಿವಾರ ಮದ್ಯಾಹ್ನ ಈ ಘಟನೆ ಸಂಭವಿಸಿದೆ. ಈ ಕುರಿತು ಫ್ರೀಡಂ ಟಿವಿಯ ಜೊತೆ ಮಾತನಾಡಿದ ರೈತ ಸೈದಪ್ಪ, ಲಕ್ಷಾನುಗಟ್ಟಲೇ ಹಣ ಖರ್ಚು ಮಾಡಿ ಬೆಳೆ ಬೆಳೆದಿದ್ದೇವು. ಆದ್ರೆ, ಆಕಸ್ಮಿಕ ಬೆಂಕಿಯಿಂದಾಗಿ ದಾಳಿಂಬೆ ಬೆಳೆ ಸಂಪೂರ್ಣಾಗಿ ಸುಟ್ಟು ಹೋಗಿದೆ. ಸಾಕಷ್ಟು ಸಾಲ ಮಾಡಿ ದಾಳಿಂಬೆ ಬೆಳೆದಿದ್ದೆ. ಈ ರೀತಿ ಅನಾಹುತವಾದ್ದರಿಂದ ದಿಕ್ಕುತೋಚದಂತಾಗಿದೆ. ಸರ್ಕಾರ ನಮ್ಮ ನೆರವಿಗೆ ಬರಬೇಕೆಂದು ಫ್ರೀಡಂ ಟಿವಿ ಬಳಿ ರೈತ ಸೈದಪ್ಪ ಅಳಲು ತೋಡಿಕೊಂಡರು.

ಇನ್ನು ಈ ಘಟನೆ ಕುರಿತು ರಾಜ್ಯ ರೈತ ಸಂಘ ಹಸಿರು ಸೇನೆ ಜಿಲ್ಲಾಧ್ಯಕ್ಷ ಮಲ್ಲನಗೌಡ ಹಗರಟಗಿ ಮಾತನಾಡಿ, 3 ಎಕರೆಗೂ ಹೆಚ್ಚು ಬೆಳೆ ಹಾನಿಯಾಗಿದೆ. ಇದರಿಂದ ರೈತ ತೀವ್ರ ಕಂಗಾಲಾಗಿದ್ದಾನೆ. ಈ ಘಟನೆ ಬಗ್ಗೆ ಶಾಸಕರು ಮತ್ತು ಅಧಿಕಾರಿಗಳು ಸರ್ಕಾರದ ಗಮನಕ್ಕೆ ತರಬೇಕು. ಆ ಮೂಲಕ ರೈತನಿಗೆ ಪರಿಹಾರ ಕೊಡಿಸಬೇಕು. ಹಾಗೂ ವಡಗೇರಾ ತಾಲೂಕು ಕೇಂದ್ರದಲ್ಲಿ ಅಗ್ನಿಶಾಮಕ ದಳ ಕಚೇರಿ ಸ್ಥಾಪಿಸಬೇಕು ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಮಲ್ಲನಗೌಡ ಹಗರಟಗಿ ಒತ್ತಾಯಿಸಿದರು.

+ posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments