Wednesday, April 30, 2025
24 C
Bengaluru
LIVE
ಮನೆ#Exclusive Newsಹೊನವಾಡ ರೈತರ ಭೂಮಿ ವಕ್ಫ್​ಗೆ ಸೇರಿಲ್ಲ: ಸಚಿವ ಎಂ.ಬಿ.ಪಾಟೀಲ್​​​​​

ಹೊನವಾಡ ರೈತರ ಭೂಮಿ ವಕ್ಫ್​ಗೆ ಸೇರಿಲ್ಲ: ಸಚಿವ ಎಂ.ಬಿ.ಪಾಟೀಲ್​​​​​

ಬೆಂಗಳೂರು: ರಾಜ್ಯ ಸರ್ಕಾರದ ಗೆಜೆಟ್‌ನಲ್ಲಿ ತಪ್ಪಾಗಿ ನಮೂದಾಗಿರುವ ಕಾರಣದಿಂದಾಗಿ ವಿಜಯಪುರ ತಿಕೋಟಾ ತಾಲೂಕಿನ ಹೊನವಾಡ ಗ್ರಾಮದ ರೈತರ ಭೂಮಿ ವಕ್ಫ್​ಗೆ ಸೇರಿದ್ದು ಎಂಬ ಗೊಂದಲ ಸೃಷ್ಟಿಯಾಗಿದೆ. ರೈತರ ಒಂದಿಂಚು ಭೂಮಿಯನ್ನೂ ವಕ್ಫ್​ಗೆ ಬಿಟ್ಟುಕೊಡುವುದಿಲ್ಲ ಎಂದು ಕೈಗಾರಿಕಾ ಸಚಿವ ಮತ್ತು ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ್ ಸ್ಪಷ್ಟಪಡಿಸಿದ್ದಾರೆ. ರೈತರಿಗೆ ವಕ್ಫ್​ ಮಂಡಳಿ ನೋಟಿಸ್ ನೀಡಿರುವ ವಿಚಾರವಾಗಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಜಯಪುರ ಜಿಲ್ಲೆಯಲ್ಲಿ 1974, 1978 ಮತ್ತು 2016ರಲ್ಲಿ ವಕ್ಫ್​ ಆಸ್ತಿಗಳ ಅಧಿಸೂಚನೆ ಹೊರಬಿದ್ದಿದೆ. ವಕ್ಫ್​ ಆಸ್ತಿ ಇರುವುದು ವಿಜಯಪುರ ನಗರದ ವ್ಯಾಪ್ತಿಯಲ್ಲಿರುವ ಮಹಾಲಬಾಗಾಯತದಲ್ಲಿ ಆದರೆ, 1974ರ ಗೆಜೆಟ್‌ನಲ್ಲಿ ಮಹಾಲಬಾಗಾಯತದ ಪಕ್ಕದಲ್ಲಿ ಹೊನವಾಡ ಎಂದು ಬರೆಯಲಾಗಿದೆ. ಅದರಂತೆ ಹೊನವಾಡ ಗ್ರಾಮದಲ್ಲಿ ಕೇವಲ ಜಿಲ್ಲೆಯ 11 ಎಕರೆ ಮಾತ್ರ ವಕ್ಫ್​ಗೆ ಸೇರಿದ್ದಾಗಿದ್ದು, ಅದರಲ್ಲಿ 10.14 ಎಕರೆ ಖಬರಸ್ತಾನವಿದ್ದು, ಉಳಿದ 24 ಗುಂಟೆ ಈದ್ಯಾ, ಮಸೀದಿ ಸೇರಿದಂತೆ ಇನ್ನಿತರ ಕಟ್ಟಡಗಳಿವೆ. ಉಳಿದ ಭೂಮಿ ರೈತರಿಗೆ ಸೇರಿದ್ದಾಗಿದೆ ಎಂದರು. 1974ರ ಗೆಜೆಟ್‌ನಲ್ಲಿನ ಗೊಂದಲದಿಂದ 1,200 ಎಕರೆ ಭೂಮಿ ವಕ್ಫ್​ಗೆ ಸೇರಿದೆ ಎಂಬ ಗೊಂದಲ ಸೃಷ್ಟಿಯಾಗಿದೆ. ಅಲ್ಲದೆ, 1974ರ ತಪ್ಪುಗಳನ್ನು 1977ರಲ್ಲಿ ವಕ್ಫ್​ಗೆ ಮಂಡಳಿಯೇ ಸರಿಪಡಿಸಿ ಹೊನವಾಡ ಹೆಸರನ್ನು ತೆಗೆದು ಹಾಕಿದೆ ಎಂದು ಹೇಳಿದರು. ರೈತರು, ಖಾಸಗಿ ಭೂ ಮಾಲೀಕರು ಈ ಬಗ್ಗೆ ಯಾವುದೇ ಗೊಂದಲಕ್ಕೆ ಒಳಗಾಗಬಾರದು ಎಂದು ಹೇಳಿದ ಸಚಿವರು, ಗೊಂದಲದ ಕುರಿತಂತೆ ಅಧಿಕಾರಿಗಳೊಂದಿಗೆ ಮತ್ತೆ ಸಭೆ ನಡೆಸಿ ಅದನ್ನು ಸರಿಪಡಿಸುತ್ತೇವೆ ಎಂದು ಭರವಸೆ ನೀಡಿದರು. ಈ ವಿಚಾರದಲ್ಲಿ ಈಗ ಬಿಜೆಪಿ ಸಂಸದ ತೇಜಸ್ವಿ ಸೂರ್ಯ, ಶಾಸಕ ಯತ್ನಾಳ್ ರಾಜಕೀಯ ಮಾಡುವ ಅಗತ್ಯವಿಲ್ಲ ಎಂದು ಹೇಳಿದರು.

+ posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments