Monday, June 23, 2025
26.6 C
Bengaluru
Google search engine
LIVE
ಮನೆ#Exclusive NewsTop Newsಸ್ಲಂನಲ್ಲಿ ಬೆಳೆದು ಸುಪ್ರೀಂ ಸಿಜೆಐ ಆಗ್ತಿರುವ ಬಿಆರ್ ಗವಾಯಿ

ಸ್ಲಂನಲ್ಲಿ ಬೆಳೆದು ಸುಪ್ರೀಂ ಸಿಜೆಐ ಆಗ್ತಿರುವ ಬಿಆರ್ ಗವಾಯಿ

ಭಾರತದ ಮುಂದಿನ ಮುಖ್ಯ ನ್ಯಾಯಮೂರ್ತಿಗಳಾಗಿ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಭೂಷಣ್‌ ರಾಮಕೃಷ್ಣ ಗವಾಯಿ ಹೆಸರು ಫೈನಲ್ ಆಗಿದೆ. ಮೇ 13ರಂದು ಅವರು ಸುಪ್ರೀಂಕೋರ್ಟ್ ನ್ಯಾಯಮೂರ್ತಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಈ ಸಂದರ್ಭದಲ್ಲಿಯೇ ಅಂಬೇಡ್ಕರ್‌ ಜಯಂತಿಯಂದು ಅವರು ಆಡಿರುವ ಮಾತುಗಳು ವೈರಲ್‌ ಆಗಿವೆ.ಡಾ. ಬಿ. ಆರ್. ಅಂಬೇಡ್ಕರ್ ಅವರ ಪ್ರಯತ್ನದಿಂದಲೇ ನನಗೆ ಈ ಸ್ಥಾನ ಸಿಗಲು ಸಾಧ್ಯವಾಯಿತು, ನಾನು ಪುರಸಭೆಯ ಶಾಲೆಯಲ್ಲಿ, ಕೊಳಚೆ ಪ್ರದೇಶದಲ್ಲಿ ವಾಸವಿದ್ದು ವಿದ್ಯಾಭ್ಯಾಸ ಮಾಡಿದವನು ಎಂದು ಬಿಆರ್ ಗವಾಯ್ ಹೇಳಿದ್ರು.

ಡಾ. ಅಂಬೇಡ್ಕರ್ ಅವರ ದೃಷ್ಟಿಕೋನದ ಮೇಲೆ ನಿರ್ಮಿಸಲಾದ ಭಾರತೀಯ ಸಂವಿಧಾನವು ಅನೇಕ ಜನರ ಜೀವನವನ್ನು ಹೇಗೆ ಬದಲಾಯಿಸಿದೆ ಮತ್ತು ಸಮಾಜಕ್ಕೆ ನ್ಯಾಯವನ್ನು ತಂದಿದೆ ಎಂಬುದನ್ ಬಿಆರ್ ಗವಾಯ್ ವಿವರಿಸಿದ್ರು.

18 ವರ್ಷಗಳ ಬಳಿಕ ಭಾರತ ಮುಖ್ಯ ನ್ಯಾಯಮೂರ್ತಿಯಾಗಿ ದಲಿತ ವ್ಯಕ್ತಿ ನೇಮಕಗೊಳ್ಳಲಿದ್ದಾರೆ. 2007ರಲ್ಲಿ ದೇಶದ ಉನ್ನತ ನ್ಯಾಯಾಂಗ ಹುದ್ದೆಗೆ ಬಡ್ತಿ ಪಡೆದ ನ್ಯಾಯಮೂರ್ತಿ ಕೆಜಿ.ಬಾಲಕೃಷ್ಣನ್‌ ಬಳಿಕ, ಮುಖ್ಯ ನ್ಯಾಯಮೂರ್ತಿ ಹುದ್ದೆಯನ್ನು ಅಲಂಕರಿಸಿದ 2ನೇ ದಲಿತ ವ್ಯಕ್ತಿ ಇವರು ಎನಿಸಲಿದ್ದಾರೆ.

+ posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments