Tuesday, January 27, 2026
26.9 C
Bengaluru
Google search engine
LIVE
ಮನೆUncategorizedಸಿದ್ಧಗಂಗಾ ಇಂಟರ್ ಸಿಟಿ ಎಕ್ಸ್ಪ್ರೆಸ್ ಇನ್ಮುಂದೆ ವಿದ್ಯುತ್ ಚಾಲಿತ ಟ್ರೈನ್

ಸಿದ್ಧಗಂಗಾ ಇಂಟರ್ ಸಿಟಿ ಎಕ್ಸ್ಪ್ರೆಸ್ ಇನ್ಮುಂದೆ ವಿದ್ಯುತ್ ಚಾಲಿತ ಟ್ರೈನ್

ಧಾರವಾಡ ಬೆಂಗಳೂರು ಇಂಟರ್ ಸಿಟಿ ಸಿದ್ಧಗಂಗಾ ಎಕ್ಸ್ಪ್ರೆಸ್ ಈ ಹಿಂದೆ ಆರಂಭವಾದಗಿನಿಂದ ಡಿಸೇಲ್ ಇಂಜಿನ್‌ದಿಂದ ಓಡಾಟ ನಡೆಸಿಕೊಂಡು ಬಂದಿದ್ದು, ಈಗ ಕಳೆದ ಶುಕ್ರವಾರದಿಂದ ವಿದ್ಯುತ್ ಚಾಲಿತ ಟ್ರೈನ್​ ಆಗಿ ಪರಿವರ್ತನೆಗೊಂಡಿದೆ.

ಈ ಕುರಿತು ಮಾಹಿತಿ ಹಂಚಿಕೊಂಡಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು, ಧಾರವಾಡ ಬೆಂಗಳೂರು ಸಿದ್ಧಗಂಗಾ ಇಂಟರ್ ಸಿಟಿ ರೈಲು ಸಂಪೂರ್ಣ ವಿದ್ಯುತ್ ಚಾಲಿತ ಇಂಜಿನ ಟ್ರೈನ್ ಆಗಿದ್ದು, ಇನ್ಮುಂದೆ ಈ ಹಿಂದಿನಂತೆ ತನ್ನ ಕಾರ್ಯವನ್ನು ಮುಂದುವರೆಸುವುದಾಗಿ ಹೇಳಿ ಸಂತೋಷ ಹಂಚಿಕೊಂಡಿದ್ದಾರೆ. ಧಾರವಾಡ-ಬೆಂಗಳೂರು ರೈಲ್ವೇ ಲೈನನ್ನು 100% ವಿದ್ಯುದೀಕರಣ ಗೊಳಿಸಿದ ಈ ಹಿನ್ನೆಲೆಯಲ್ಲಿ, ಕೇಂದ್ರ ರೈಲ್ವೇ ಸಚಿವರಿಗೆ ಹಾಗೂ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಧನ್ಯವಾದ ತಿಳಿಸಿದ್ದಾರೆ.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments