Monday, June 23, 2025
26.6 C
Bengaluru
Google search engine
LIVE
ಮನೆ#Exclusive Newsಸಿದ್ದರಾಮಯ್ಯಗೆ ಡ್ಯಾಮೇಜ್‌ ಆದ್ರೆ ಪಕ್ಷಕ್ಕೆ ಆದಂತೆ-ಮಲ್ಲಿಕಾರ್ಜುನ ಖರ್ಗೆ

ಸಿದ್ದರಾಮಯ್ಯಗೆ ಡ್ಯಾಮೇಜ್‌ ಆದ್ರೆ ಪಕ್ಷಕ್ಕೆ ಆದಂತೆ-ಮಲ್ಲಿಕಾರ್ಜುನ ಖರ್ಗೆ

ಸಿಎಂ ಸಿದ್ದರಾಮಯ್ಯ ಅವರು ಇವತ್ತು ಇರಬಹುದು ನಾಳೆ ಇಲ್ಲದೆ ಇರಬಹುದು. ಆದರೆ, ಕಾಂಗ್ರೆಸ್ ಪಕ್ಷ ಮುಂದುವರಿಯುತ್ತದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು.ಬೆಂಗಳೂರಿನ ತಮ್ಮ ನಿವಾಸದಲ್ಲಿ ಶುಕ್ರವಾರ ಮಾತನಾಡಿದ ಅವರು, ” ಎಫ್ ಐ ಆರ್ ಆದರೆ ಸಿಎಂ ರಾಜೀನಾಮೆ ಕೊಡಬೇಕು ಅನ್ನುವುದಾದರೆ ಗೋದ್ರಾ ಪ್ರಕರಣ ಆದಾಗ ಅಂದಿನ ಸಿಎಂ ನರೇಂದ್ರ ಮೋದಿ ರಾಜೀನಾಮೆ ನೀಡಿದ್ದರಾ? ಅಮಿತ್ ಶಾ ಅವರದು ಸಾಕಷ್ಟು ಪ್ರಕರಣ ಆಗಿತ್ತು ಅವರು ರಾಜೀನಾಮೆ ನೀಡಿದ್ದರಾ? ” ಎಂದು ಪ್ರಶ್ನಿಸಿದರು.

ಸಿದ್ದರಾಮಯ್ಯಗೆ ಡ್ಯಾಮೇಜ್‌ ಆದ್ರೆ ಪಕ್ಷಕ್ಕೆ ಆದಂತೆ

ಯಾರನ್ನೇ ಆಗಲಿ ವೈಯುಕ್ತಿಕವಾಗಿ ಟಾರ್ಗೆಟ್ ಮಾಡಬಾರದು. ಸಿದ್ದರಾಮಯ್ಯ ಅವರ ಇಮೇಜ್ ಡ್ಯಾಮೇಜ್ ಮಾಡಿದರೆ ಅದರಿಂದ ಪಕ್ಷಕ್ಕೂ ಡ್ಯಾಮೇಜ್ ಆಗುತ್ತದೆ. ಅವರ ಆಸಕ್ತಿ ಇರೋದು ಕಾಂಗ್ರೆಸ್ ಪಕ್ಷಕ್ಕೆ ಡ್ಯಾಮೇಜ್ ಮಾಡುವುದು ವೈಯುಕ್ತಿಕ ಅಲ್ಲ. ಸಿದ್ದರಾಮಯ್ಯ ಇವತ್ತು ಇರಬಹುದು, ನಾಳೆ ಇಲ್ಲದೆ ಇರಬಹುದು. ಆದರೆ ಪಕ್ಷ ಮುಂದುವರಿಯುತ್ತದೆ ಎಂದರು.ಕಾಂಗ್ರೆಸ್ ಪಕ್ಷದ ಮೂಲ ಮತಗಳನ್ನು ಹಾಳು ಮಾಡಲಿಕ್ಕೆ ಬಿಜೆಪಿಯವರು ಇದನ್ನೆಲ್ಲಾ ಮಾಡುತ್ತಿದ್ದಾರೆ. ಕಾನೂನು ಅದರದ್ದೇ ಆದ ಕ್ರಮಗಳನ್ನು ಕೈಗೊಳ್ಳುತ್ತದೆ‌. ಪರಿಸ್ಥಿತಿ ಏನು ಬರುತ್ತದೆ ಅನ್ನೋದನ್ನು ಪರಿಶೀಲಿಸುತ್ತದೆ. ಏನೂ ಇಲ್ಲದಿದ್ದರೂ ಪ್ರತಿ ದಿನ ಮುಡಾ, ಮುಡಾ ಅಂತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

 

16 ಲಕ್ಷ ಕೋಟಿ ಉದ್ಯಮಿಗಳು ಹಣ ಲೂಟಿ ಮಾಡಿದ್ರು. ಈಗ ಸಣ್ಣ ವಿಚಾರ ತಗೆದುಕೊಂಡು ಫೈಟ್ ಮಾಡ್ತಿದಾರೆ. ಅದರಲ್ಲೂ
ಚಾರ್ಜ್ ಶೀಟ್ ಸಹಾ ಆಗಿಲ್ಲ ಕನ್ವಿಕ್ಷನ್ ಆಗಿಲ್ಲ. ಪ್ರತಿದಿನ ಇದನ್ನೇ ಮಾತನಾಡ್ತಿದ್ದಾರೆ ಎಂದು ಕಿಡಿಕಾರಿದರು. ಎಫ್ ಐ ಆರ್ ದಾಖಲಾದ ಮೇಲೆ ಹೈ ಕಮಾಂಡ್ ಸಿಎಂ ಜೊತೆ ನಿಲ್ಲುತ್ತಾ ಅನ್ನೋದು ಊಹನಾತ್ಮಕವಾದ ಪ್ರೆಶ್ನೆ. ನಾವು ಅವರ ಜೊತೆ ನಿಂತಿದ್ದೇವೆ.ಅವರಿಗೆ ಬೆಂಬಲ ಕೊಟ್ಟಿದ್ದೇವೆ. ಯಾಕೆಂದರೆ ಅವರು ಪಕ್ಷವನ್ನು ಪ್ರತಿನಿಧಿಸುತ್ತಾರೆ. ಇದು ಅವರ ವೈಯುಕ್ತಿಕ ವಿಚಾರ ಅಲ್ಲ ಎಂದರು.
ಮೋದಿ‌ ದಲಿತ ನಾಯಕ ಹಾಗೂ ದಲಿತರಿಗೆ ಮೀಸಲಿಟ್ಟ ಹಣವನ್ನು ಇತರ ಉದ್ದೇಶಕ್ಕೆ ಬಳಕೆ ಮಾಡಿರುವ ಬಗ್ಗೆ ಹರಿಯಾಣದಲ್ಲಿ ಮಾಡಿದ ಆರೋಪಕ್ಕೆ ಹರಿಯಾಣದಲ್ಲೇ ಉತ್ತರ ಕೊಡುತ್ತೇನೆ ಎಂದು ಹೇಳಿದರು.

+ posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments