ಕನ್ನಡದ ಬಿಗ್ಬಾಸ್ ಸೀಸನ್ 11 ಗ್ರ್ಯಾಂಡ್ ಫಿನಾಲೆ ಹಂತಕ್ಕೆ ಬರುತ್ತಿದೆ. ಇದೇ ಹೊತ್ತಲ್ಲಿ ಕಳೆದ ಬಾರಿಯ ಬಿಗ್ಬಾಸ್ 10ರಲ್ಲಿ ಕ್ಯಾಪ್ಟನ್ಸಿ ಓಟದಲ್ಲಿ ಓರ್ವ ಸ್ಪರ್ಧಿ ಮೋಸ ಮಾಡಿ ಗೆದ್ದಿದ್ದರು. ಅದೇ ರೀತಿ ಈ ಬಾರಿಯ ಬಿಗ್ಬಾಸ್ನಲ್ಲೂ ಮರುಕಳಿಸಿದೆ. ಹೌದು, ಬಿಗ್ಬಾಸ್ ಸೀಸನ್ 10ರಲ್ಲಿ 9 ವಾರ ಎಂಟನೇ ಕ್ಯಾಪ್ಟನ್ ಆಗಿ ವರ್ತೂರು ಸಂತೋಷ್ ಆಯ್ಕೆ ಆಗಿದ್ದರು. ಬಿಗ್ಬಾಸ್ ಕೊಟ್ಟ ಚಟುವಟಿಕೆಯಲ್ಲಿ ಗೆದ್ದು ವರ್ತೂರು ಸಂತೋಷ್ ಕ್ಯಾಪ್ಟನ್ ಪಟ್ಟಕ್ಕೇರಿದ್ದರು.
ವರ್ತೂರು ಸಂತೋಷ್ ಅವರ ಗೆಲುವು ನ್ಯಾಯವಾಗಿ ಇರಲಿಲ್ಲ. ವರ್ತೂರು ಸಂತೋಷ್ ಗೆಲುವಿಗೆ ವಿನಯ್ ಸಹಾಯ ಮಾಡಿದರು. ಹೊರಗಡೆಯಿಂದ ಸಮಯ ಎಣಿಸಿ, ವರ್ತೂರು ಸಂತೋಷ್ ಸಿಗ್ನಲ್ ಕೊಟ್ಟದ್ದರು ವಿನಯ್. ನಾಯಕತ್ವದ ಟಾಸ್ಕ್ಗಾಗಿ ವಿನಯ್ ಹಾಗೂ ವರ್ತೂರ್ ಸಂತೋಷ್ ಮಾಡಿರುವ ಮೋಸ ಎಲ್ಲರ ಗಮನಕ್ಕೆ ಬಂದಿತ್ತು. ಇದನ್ನೂ ಗಮನಿಸಿದ ಸುದೀಪ್ ಅವರೇ ವರ್ತೂರ್ ಅವರಿಗೆ ಈ ಪ್ರಶ್ನೆ ಎತ್ತಿದ್ದರು. ಎಲ್ಲರ ಮುಂದೆಯೇ ಸತ್ಯವನ್ನು ಆಚೆ ತರಿಸಿದ್ದರು ಕಿಚ್ಚ ಸುದೀಪ್. ಆದರೆ ಅಷ್ಟಕ್ಕೆ ಸುಮ್ಮನಾಗದ ಕಿಚ್ಚ ಈ ವಾರ ಕ್ಯಾಪ್ಟನ್ಗೆ ಇಮ್ಯುನಿಟಿ ಇರೋದಿಲ್ಲ ಅಂತರ ಹೇಳಿ ಬಿಗ್ಬಾಸ್ ಮನೆಯ ಕ್ಯಾಪ್ಟನ್ ರೂಮ್ಗೆ ಬೀಗ ಹಾಕಿಸಿದ್ದರು.
ಆದರೆ ಸೇಮ್ ಟು ಸೇಮ್ ಈ ಬಾರಿಯ ಸೀಸನ್ 11ರಲ್ಲೂ ಅಂತದ್ದೇ ಪ್ರಸಂಗ ನಡೆದಿದೆ. ಬಿಗ್ಬಾಸ್ನಲ್ಲಿ ಮೂರನೇ ಬಾರಿಗೆ ಭವ್ಯಾ ಗೌಡ ಕ್ಯಾಪ್ಟನ್ಸಿ ಪಟ್ಟ ಗಿಟ್ಟಿಸಿಕೊಂಡಿದ್ದಾರೆ. ಆದರೆ ಈ ಬಾರಿ ನಡೆದ ಕ್ಯಾಪ್ಟನ್ಸಿ ಟಾಸ್ಕ್ನಲ್ಲಿ ಭವ್ಯಾ ಗೌಡ ಮೋಸ ಮಾಡಿದ್ದು ಎಲ್ಲರ ಕಣ್ಮುಂದೆ ಸಾಕ್ಷಿಗಳು ಇವೆ. ಬಿಗ್ಬಾಸ್ ರೆಸಾರ್ಟ್ ಟಾಸ್ಕ್ನಲ್ಲಿ 29 ಸಾರ್ಸ್ಗಳನ್ನು ಪಡೆದುಕೊಂಡಿದ್ದ ಭವ್ಯಾ ಗೌಡ ಟೀಮ್ ಕ್ಯಾಪ್ಟನ್ಸಿ ಟಾಸ್ಕ್ ಆಯ್ಕೆಯಾಗಿತ್ತು. ಹೀಗಾಗಿ ಅದೇ ತಂಡದ 5 ಸ್ಪರ್ಧಿಗಳಿಗೆ ಕ್ಯಾಪ್ಟನ್ಸಿ ಟಾಸ್ಕ್ ಅನ್ನು ಕೊಟ್ಟಿದ್ದರು ಬಿಗ್ಬಾಸ್. ಐದು ಸ್ಪರ್ಧಿಗಳು ಸಾಲಾಗಿ ನಿಂತುಕೊಂಡಿರಬೇಕು. ಆಗ ಬಿಗ್ಬಾಸ್ ಹೇಳುವ ನಂಬರ್ನಲ್ಲಿರೋ ಚೆಂಡುಗಳನ್ನು ಓಡಿಹೋಗಿ ಹಿಡಿದು ಬಾಸ್ಕೆಟ್ನಲ್ಲಿ ಹಾಕಬೇಕು. ಇದೇ ಟಾಸ್ಕ್ನಲ್ಲಿ ಬಿಗ್ಬಾಸ್ ಮೊದಲು 9 ನಂಬರಿನ ಗೊಂಚಲಿನಿಂದ ಚಂಡುಗಳನ್ನು ತೆಗೆದುಕೊಂಡು ಹೋಗಲು ಹೇಳುತ್ತಾರೆ. ಆಗ ಎಲ್ಲರೂ ಓಡಿ ಹೋಗಿ ಆ ಚೆಂಡನ್ನು ಹಿಡಿಯುತ್ತಾರೆ. ಆಗ ಇದೇ ವೇಲೆ 3ನೇ ಗೊಂಚಲಿನಿಂದ ಚಂಡೊಂದು ಬೀಳುತ್ತದೆ.
ಆದರೆ ಅದನ್ನೂ ಇಬ್ಬರು ಉಸ್ತುವಾರಿಗಳು ಗಮನಕ್ಕೆ ಬರೋದಿಲ್ಲ. ಆ ಕೂಡಲೇ ಭವ್ಯಾ ಆ ಚೆಂಡನ್ನು ಎತ್ತಿಕೊಂಡು ಬುಟ್ಟಿಗೆ ಹಾಕುತ್ತಾರೆ. ಆಗ ಆ ಅದೇ ಬಾಲ್ ಬುಟ್ಟಿಗೆ ಬಿಳುತ್ತದೆ. ಇದರಿಂದ ಮೊದಲ ಹಂತದಲ್ಲಿ ಭವ್ಯಾ ಗೌಡ ಸೇಪ್ ಆಗುತ್ತಾರೆ. ಇದಾದ ಬಳಿಕ ಮತ್ತೆ ಇದೇ ಪ್ರಕ್ರಿಯೆಯಲ್ಲಿ ಚೆಂಡನ್ನು ಹಾಕಿ ಭವ್ಯಾ ಗೌಡ ಈ ವಾರದ ಕ್ಯಾಪ್ಟನ್ ಆಗುತ್ತಾರೆ. ಇನ್ನೂ, ಭವ್ಯಾ ಗೌಡ ಮೋಸದ ಆಟದ ಬಗ್ಗೆ ವೀಕೆಂಡ್ನಲ್ಲಿ ಕಿಚ್ಚ ಸುದೀಪ್ ಪ್ರಸ್ತಾಪ ಮಾಡಿದ್ದಾರೆ. ಭವ್ಯಾ ಗೌಡ ಆಡಿದ ಮೋಸದ ಟಾಸ್ಕ್ ಬಗ್ಗೆ ಕಿಚ್ಚ ಸುದೀಪ್ ಇಂದಿನ ಎಪಿಸೋಡ್ನಲ್ಲಿ ಕ್ಲಾಸ್ ತೆಗೆದುಕೊಳ್ಳಲಿದ್ದಾರೆ. ಜೊತೆಗೆ ಭವ್ಯಾ ಗೌಡಗೆ ಯಾವ ಶಿಕ್ಷೆ ನೀಡಲಿದ್ದಾರೆ ಅಂತ ಕಾದೂ ನೋಡಬೇಕಿದೆ.