Thursday, November 20, 2025
22.5 C
Bengaluru
Google search engine
LIVE
ಮನೆUncategorizedಯಾರಾಗ್ತಾರೆ ದೆಹಲಿ ಅಧಿಪತಿ..? ಕೇಸರಿ ಪಡೆಯತ್ತ ಎಲ್ಲರ ಚಿತ್ತ..!

ಯಾರಾಗ್ತಾರೆ ದೆಹಲಿ ಅಧಿಪತಿ..? ಕೇಸರಿ ಪಡೆಯತ್ತ ಎಲ್ಲರ ಚಿತ್ತ..!

ನವದೆಹಲಿ: ದೆಹಲಿ ವಿಧಾನಸಭೆ ಚುನಾವಣೆ ಫಲಿತಾಂಶ ಹೊರಬಿದ್ದಿದ್ದು, ಬಿಜೆಪಿ ಭರ್ಜರಿ ಗೆಲವು ಸಾಧಿಸಿದೆ. 27 ವರ್ಷಗಳ ನಂತರ ದೆಹಲಿಯಲ್ಲಿ ಅಧಿಕಾರಕ್ಕೆ ಬಂದಿರುವ ಬಿಜೆಪಿಯು ಸಿಎಂ ಆಯ್ಕೆ ಮಾಡಲು ನಾಳೆ ಶಾಸಕಾಂಗ ಸಭೆ ಕರೆದಿದೆ. ಇದರೊಂದಿಗೆ ಇದೇ ತಿಂಗಳ 19 ಅಥವಾ 20ರಂದು ಪ್ರಮಾಣ ವಚನ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಲಾಗಿದೆ.

ಫೆಬ್ರವರಿ 5 ರಂದು ನಡೆದ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಆಡಳಿತ ಪಕ್ಷ ಎಎಪಿಯನ್ನು ಮಣಿಸಿ ಬಿಜೆಪಿ ಅಧಿಕಾರಕ್ಕೆ ಬಂದಿತ್ತು. ಬಿಜೆಪಿಯ ಪರ್ವೇಶ ವರ್ಮಾ ಅವರು ಆಪ್ ಅಧ್ಯಕ್ಷ ಅರವಿಂದ್ ಕೇಜ್ರಿವಾಲ್  ಅವರನ್ನು ಸೋಲಿಸಿ ಭರ್ಜರಿ ಜಯಗಳಿಸಿದ್ದರು. ಈ ಹಿನ್ನಲೆಯಲ್ಲಿ ಪರ್ವೇಶ್ ವರ್ಮಾ ದೆಹಲಿ ಸಿಎಂ ಆಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತದೆ.

+ posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments