ಕಲಬುರಗಿ : ನಮ್ಮ ಸೈನಿಕರ ಕಾರ್ಯವೈಖರಿಗೆ ಇಡೀ ರಾಷ್ಟ್ರವೇ ಮೆಚ್ಚುಗೆ ವ್ಯಕ್ತಪಡಿಸುತ್ತಿದೆ.ಪ್ರಧಾನಿ ಸೈನಿಕರಿಗೆ ಧೈರ್ಯ ತುಂಬಿರುವುದು ಅವರ ಜವಾಬ್ದಾರಿ ಹಾಗೂ ಶ್ಲಾಘನಿಯ ಕಾರ್ಯ ಎಂದು ಕಲಬುರಗಿಯಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಏ. 22 ರಂದು ಪಹಲ್ಗಾಮ್ ಅಟ್ಯಾಕ್ ಆಗಿರೋದು, ಆದರೆ ಪ್ರಧಾನಿ ಕಾಣಿಸಿಕೊಂಡಿರೋದು ಬಿಹಾರ ಚುನಾವಣೆಯಲ್ಲಿ ಎಂದು ಪ್ರಿಯಾಂಕ್ ಖರ್ಗೆ ಲೇವಡಿ ಮಾಡಿದ್ದಾರೆ. ಜಮ್ಮು-ಕಾಶ್ಮೀರ , ಅದಂಪುರ ಸೇರಿ ಎಲ್ಲೆಲ್ಲಿ ಬ್ಲಾಕ್ ಔಟ್ ಮಾಡಿದ್ರು ಅಲ್ಲಿ ಕಾಣಿಸಬಹುದಿತ್ತು,ಆದ್ರೆ ಕಾಣಿಸಲಿಲ್ಲ ಅದರ ಬದಲಾಗಿ ಮೇ 12 ರಂದು ಕಾಣಿಸಿಕೊಂಡರು.ಅದಾದ ಬಳಿಕ ಮೇ 13ಕ್ಕೆ ಅದಾಂಪುರ ಹೋಗಿ ಘೋಷಣೆ ಕೂಗಿ ಸೈನಿಕರಿಗೆ ಸ್ಥೈರ್ಯ ತುಂಬಿದ್ದಾರೆ. ಏ. 22 ರಿಂದ ಮೇ. 12ರ ವರೆಗೆ ಎಲ್ಲಿದ್ದರು ಪ್ರಧಾನಿ ಮೋದಿ ಎಂದು ಪ್ರಶ್ನೆ ಮಾಡಿದ ಪ್ರಿಯಾಂಕ್ ಖರ್ಗೆ.
ಮೋದಿ ಆಪ್ತಮಿತ್ರ ಅಮೇರಿಕಾ ಅಧ್ಯಕ್ಷ ಟ್ರಂಪ್ ನಾಲ್ಕಾಲ್ಕು ಬಾರಿ ಹೇಳಿದ್ದಾರೆ.ಭಾರತ್-ಪಾಕ್ ನಡುವಿನ ಯುದ್ದ ಕದನ ವಿರಾಮಕ್ಕೆ ನಾನು ಕಾರಣ ಅಂತಾ ಹೇಳ್ತಿದ್ದಾರೆ. ಭಾರತ ಮತ್ತು ಪಾಕಿಸ್ತಾನಕ್ಕೆ ಹೋಲಿಕೆ ಮಾಡ್ತಿದ್ದಾರೆ.ಟೇರರ್ ಸ್ಟೇಟ್ ಗೂ ನಮಗೂ ಹೋಲಿಕೆ ಮಾಡುತ್ತಿದ್ದಾರೆ.ವ್ಯಾಪಾರದ ಆಮಿಷ ನೀಡಿದ್ದೇನೆ , ತೇರಿಗೆ ಆಮಿಷ ನೀಡಿದ್ದೇನೆ ಎರಡು ರಾಷ್ಟ್ರಕ್ಕೆ ಅಂತಾ ಹೇಳಿದ್ದಾರೆ.
ಪಾಕಿಸ್ತಾನಕ್ಕೆ ಇಂಟರ್ ನ್ಯಾಷನಲ್ ಫಂಡ್ನಿಂದ ಲೋನ್ ಕೋಡಿಸಿದ್ದಾರೆ.ಎಂಟು ಸಾವಿರ ಕೋಟಿಯಿಂದ ಉದ್ಯೋಗ ಸೃಷ್ಟಿ ಮಾಡ್ತಾರ ಆಣೆ ಕಟ್ಟು ಕಟ್ತಾರಾ..? ಪಾಕಿಸ್ತಾನ ಮತ್ತೆ ಟೆರೆರ್ ಆಕ್ಟಿವಿಟಿಯೇ ಮಾಡ್ತಾರೆ ಆ ಹಣದಿಂದ ಎಂದು ಪ್ರಿಯಾಂಕ್ ಖರ್ಗೆ ಹೇಳಿಕೆ ನೀಡಿದ್ದಾರೆ. ‘ನಮ್ಮ ವಿದೇಶಾಂಗ ನೀತಿ ನಿಮ್ಮ ಸ್ನೇಹಿತ ಟ್ರಂಪ್ ಬಳಿ ಅಡವಿಟ್ಟಿದ್ದಿರಿ’.ಟ್ರಂಪ್ ಮುಂದೆ ಮುಂಡಿಯೂರಿದ್ರಾ..? ಕೈ ಕಾಲು ಬಿದ್ದರಾ..? ನನಗೆ ಗೋತ್ತಿಲ್ಲ.ಅವರು ತಾನೆ ಹೇಳೋದು ‘ಮೈ ಫ್ರೇಂಡ್ ಟ್ರಂಪ್’ ಅಂತಾ.ನಾಲ್ಕಾಲ್ಕು ಬಾರಿ ಟ್ರಂಪ್ ನನ್ನಿಂದನೇ ಯುದ್ದ ನಿಂತಿದೆ ಅಂತಾ ಹೇಳ್ತಿದ್ದಾರೆ.
ಯಾರು ಹತ್ರ ಮಂಡಿಯೂರಿದ್ರು, ಕೈ ಕಾಲು ಬಿದ್ರು ಅಂತಾ ಅವರೇ ಹೇಳಬೇಕು ಸಿಸಿಎಸ್ ಸಭೆ ಮಾಡಲಿ ನಾವು ಬೇಡ ಅಂತಿಲ್ಲ ಆಲ್ ಪಾರ್ಟಿ ಮೀಟಿಂಗ್ ಮಾಡಲಿ ,ಪಾರ್ಲಿಮೆಂಟ್ ಕರೆಯಿರಿ ಎಂದು ಸಚಿವ ಪ್ರಿಯಾಂಕ್ ಖರ್ಗೆ ಆಗ್ರಹಿಸಿದ್ದಾರೆ…