Wednesday, January 28, 2026
17 C
Bengaluru
Google search engine
LIVE
ಮನೆಕ್ರೈಂ ಸ್ಟೋರಿಮೃತಪಟ್ಟ ವ್ಯಕ್ತಿ ಹೆಸರಲ್ಲಿ ವಯಸ್ಸಿನ ದೃಢೀಕರಣ ಪತ್ರ : ಇಬ್ಬರು ವೈದ್ಯರು ಸಸ್ಪೆಂಡ್​

ಮೃತಪಟ್ಟ ವ್ಯಕ್ತಿ ಹೆಸರಲ್ಲಿ ವಯಸ್ಸಿನ ದೃಢೀಕರಣ ಪತ್ರ : ಇಬ್ಬರು ವೈದ್ಯರು ಸಸ್ಪೆಂಡ್​

ತುಮಕೂರು : ಮೃತಪಟ್ಟ ವ್ಯಕ್ತಿ ಹೆಸರಲ್ಲಿ ವಯಸ್ಸಿನ ದೃಢೀಕರಣ ಪತ್ರ ನೀಡಿದ ಇಬ್ಬರು ವೈದ್ಯರ ಅಮಾನತಾಗಿರುವ ಘಟನೆ ತುಮಕೂರು ಜಿಲ್ಲೆ, ಮಧುಗಿರಿ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ನಡೆದಿದೆ.

ಡಾ.ಮಹೇಶ್ ಸಿಂಗ್, ಡಾ.ಪುರುಷೋತ್ತಮ್ ಅಮಾನತಾದ ವೈದ್ಯರಾಗಿದ್ದಾರೆ.  2022ರ ಆಗಸ್ಟ್-ಸೆಪ್ಟಂಬರ್ ತಿಂಗಳಲ್ಲಿ ಮೃತ ಪಟ್ಟಿರೊ ವ್ಯಕ್ತಿ ಹೆಸರಿಗೆ ವಯಸ್ಸಿನ ದೃಢೀಕರಣ ಪತ್ರವನ್ನು  ವೈದ್ಯರು ನೀಡಿದ್ದರು. ಪ್ರಕರಣವನ್ನ ಬಯಲಿಗೆಳೆದು, ಪೊಲೀಸ್ ಠಾಣೆ ಮತ್ತು ಆರೋಗ್ಯ ಇಲಾಖೆ ಆಯುಕ್ತರಿಗೆ ಆರ್ ಟಿಐ ಕಾರ್ಯಕರ್ತರು ದೂರು ನೀಡಿದ್ದರು. ಆರೋಗ್ಯ ಇಲಾಖೆಯ‌ ಮುಖ್ಯ ಜಾಗೃತ ಅಧಿಕಾರಿಗಳ‌ ತನಿಖೆಯಲ್ಲಿ ಇಬ್ಬರು ವೈದ್ಯರು ತಪ್ಪಿತಸ್ಥರು ಎಂದು ದೃಢಪಡಿಸಲಾಗಿದೆ. ಇಲಾಖಾ ತನಿಖೆ ‌ಬಾಕಿ ಇರಿಸಿ‌ ಆರೋಗ್ಯ ಇಲಾಖೆ ಇಬ್ಬರನ್ನೂ ಸಸ್ಪೆಂಡ್‌ ಮಾಡಿದೆ.

ಸದ್ಯ ಹಾವೇರಿ ಜಿಲ್ಲೆಯ ಸವಣೂರಿಗೆ ಡಾ.ಮಹೇಶ್ ಸಿಂಗ್, ಕೋಲಾರ ಜಿಲ್ಲೆಯ ಕೆ.ಜಿ.ಎಫ್ ಗೆ ಡಾ.ಪುರುಷೋತ್ತಮ್​ನನ್ನು ವರ್ಗಾವಣೆ ಮಾಡಲಾಗಿದೆ. ಮಧುಗಿರಿ‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು‌.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments