ಹುಬ್ಬಳ್ಳಿ: ಸಿದ್ದರಾಮಯ್ಯ ಯಾವತ್ತು ರಾಜೀನಾಮೆ ಕೊಡ್ತಾರೆ ಅಂತಾ ಕಾಯ್ತಿದಾರೆ . ಸಿಎಮ್ ರೇಸ್ ನಲ್ಲಿ ವೋಟರ್ ಲಿಸ್ಟ್ ರೂಪದಲ್ಲಿ ಹೊರಗೆ ಬರ್ತಿದೆ ಕಾಂಗ್ರೇಸ್ ನಾಯಕರ ಹೆಸರು.ಕೇಂದ್ರದ ನಾಯಕರು ಸೂಚನೆ ಕೊಟ್ಟರೂ ಸಿಎಮ್ ಕುರಿತು ಮಾತಾಡುತ್ತಿದ್ದಾರೆ.ಕೊನೆಗೆ ಖುರ್ಚಿ ಖಾಲಿ ಇಲ್ಲ ಅಂತಾರೆ.ಕೇಂದ್ರದ ನಾಯಕರ ಮಾತಿಗೂ ಬೆಲೆ ಇಲ್ಲ.ಸಿದ್ದರಾಮಯ್ಯ ರಾಜೀನಾಮೆಗೆ ನಾನು ಅಪೇಕ್ಷೆ ಪಡಲ್ಲ.ಕೋರ್ಟ್ ನಲ್ಲಿ ಅವರ ಪರವಾಗಿ ಜಡ್ಜಮೆಂಟ್ ಬರಲಿ. ಸಿದ್ದರಾಮಯ್ಯ ಪತ್ನಿಗೆ ತೊಂದರೆ ಆಗ್ತಿದೆ ಅನ್ನೋ ನೋವಿದೆ. ಸಿದ್ದರಾಮಯ್ಯ ತಪ್ಪಿತಸ್ಥ ಅಂದ್ರೆ ಮರ್ಯಾದೆಯಿಂದ ರಾಜೀನಾಮೆ ಕೊಡಬೇಕು. ಅಕಸ್ಮಾತ್ ಸಿದ್ದರಾಮಯ್ಯ ರಾಜೀನಾಮೆ ಕೊಟ್ಟು, ಸಿದ್ದರಾಮಯ್ಯ ಹೇಳಿದವರು ಸಿಎಮ್ ಆದ್ರೆ ಗುಡ್. ಇಲ್ಲದಿದ್ದರೆ ಕರ್ನಾಟಕದಲ್ಲಿ ಚುನಾವಣೆ ಬಿಟ್ಟು ಬೇರೆ ದಾರಿಯೇ ಇಲ್ಲ . ಕಾಂಗ್ರೆಸ್ ಸರ್ಕಾರ ಹೋಗೆ ಹೋಗುತ್ತೆ ಸಿದ್ದರಾಮಯ್ಯ ಜೊತೆ ಜನ ಇದಾರೆ ಅವರ ಹೇಳಿದವರು ಸಿಎಮ್ ಆದರೆ, ಉಳಿದವರು ಸುಮ್ನೆ ಇರಲ್ಲ ನನ್ನ ಅನುಭವದ ಪ್ರಕಾರ ಸಿದ್ದರಾಮಯ್ಯ ಇನ್ನೊಬ್ಬರಿಗೆ ಸಿಎಂ ಆಗೋ ಅವಕಾಶ ಕೊಡಲ್ಲ ಅವರ ಪರವಾಗಿದ್ದವರಿಗೆ ಅವಕಾಶ ಕೊಡ್ತಾರೆ. ಕಾಂಗ್ರೆಸ್ ನಾಯಕರ ಮಾತೇ ಶಾಸಕರು ಕೇಳಲ್ಲ. ಸಿದ್ದರಾಮಯ್ಯ ಜಡ್ಜಮೆಂಟ್ ಮೇಲೆ ಕರ್ನಾಟಕ ಕಾಂಗ್ರೆಸ್ ಭವಿಷ್ಯ ನಿಂತಿದೆ. ಅಕಸ್ಮಾತ್ ಸಿದ್ದರಾಮಯ್ಯ ರಾಜೀನಾಮೆ ಕೊಟ್ಟರೆ, ಕರ್ನಾಟಕದಲ್ಲಿ ಮಾತ್ರ ಅಲ್ಲ ಇಡೀ ದೇಶದಲ್ಲಿ ಕಾಂಗ್ರೆಸ್ ಮುಚ್ಚುತ್ತೆ ಹುಬ್ಬಳ್ಳಿಯಲ್ಲಿ ಕೆ ಎಸ್ ಈಶ್ವರಪ್ಪ ಹೇಳಿಕೆ.