Monday, June 23, 2025
26.6 C
Bengaluru
Google search engine
LIVE
ಮನೆಜಿಲ್ಲೆಮನಕಲುಕುವ ಘಟನೆ : ಸಾವಿನಲ್ಲೂ ಒಂದಾದ ತಂದೆ-ಮಗಳು

ಮನಕಲುಕುವ ಘಟನೆ : ಸಾವಿನಲ್ಲೂ ಒಂದಾದ ತಂದೆ-ಮಗಳು

ಚಿಕ್ಕಬಳ್ಳಾಪುರ: ಮಗಳಿಗೆ ಈಜು ಕಲಿಸಲು ಹೋಗಿ ತಂದೆ ದಾರುಣವಾಗಿ ಬಲಿಯಾಗಿರೋ ಘಟನೆ ಶಿಡ್ಲಘಟ್ಟ ತಾಲೂಕಿನ ಶೆಟ್ಟಿಹಳ್ಳಿ ಗ್ರಾಮದಲ್ಲಿ ನಡೆದಿದೆ. ತಂದೆ ನಾಗೇಶ್ ಮಗಳು ಧನುಶ್ರೀ  ಮೃತ ದುರ್ದೈವಿಗಳು.

ತಂದೆ ನಾಗೇಶ್ ಮಗಳಿಗೆ ಈಜು ಕಲಿಸಲು ಹೋಗಿದ್ದ. ವೇಳೆ ಕೆರೆಯಲ್ಲಿ ಹೂಳು ತುಂಬಿದ್ರಿಂದ ಹಳಿಯಲ್ಲಿ ಸಿಲುಕಿ ಇಬ್ಬರು ದಾರುಣವಾಗಿ ಸಾವನ್ನಪ್ಪಿದ್ದಾರೆ. ಮೃತ ಧನುಶ್ರೀ ಭರತನಾಟ್ಯದಲ್ಲಿ ಖ್ಯಾತಿ ಪಡೆದಿದ್ದಳು.

ಇಬ್ಬರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಶಿಡ್ಲಘಟ್ಟ ಸಾರ್ವಜನಿಕ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಈ ವಿಷಯ ತಿಳಿದ ಕೂಡಲೇ ಆಸ್ಪತ್ರೆ ಮುಂದೆ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ಆಸ್ಪತ್ರೆಗೆ ಬಳಿ ಶಿಡ್ಲಘಟ್ಟ ಶಾಸಕ ಬಿ ಎನ್ ರವಿಕುಮಾರ್ ಭೇಟಿ ನೀಡಿ ಕುಟುಂಸ್ಥರಿಗೆ ಸಾಂತ್ವನ ಹೇಳಿದ್ದಾರೆ.

+ posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments