ಮಂಗಳೂರು : ವಿವಿಧ ಜಿಲ್ಲೆ, ತಾಲೂಕುಗಳಿಗೆ ಮಂಗಳೂರಿನಿಂದ ಹೊರಡುವ ವೇಗದೂತ, ಸರ್ವಿಸ್ ಹಾಗೂ ಖಾಸಗಿ ಬಸ್ ರೂಟ್ಗಳ ಬಸ್ಗಳಿಗೆ ಕನ್ನಡ ನಾಮಫಲಕಗಳ ಸ್ಟಿಕರ್ ಅಂಟಿಸುವ ಅಭಿಯಾನ ಆರಂಭವಾಗಿದೆ. ಈ ವಾರಾಂತ್ಯದವರೆಗೆ ಈ ಅಭಿಯಾನ ನಡೆಯಲಿದೆ. ಮಂಗಳೂರಿನ ಸಹಾಯಕ ಸಾರಿಗೆ ಅಧಿಕಾರಿ (ಎಆರ್ಟಿಒ) ವಿಶ್ವನಾಥ್ ನಾಯ್ಕ್ ಅವರ ನೇತೃತ್ವದಲ್ಲಿ ನಗರದ ಸರ್ವಿಸ್ ಬಸ್ ನಿಲ್ದಾಣದಲ್ಲಿ ಬಸ್ಗಳಿಗೆ ಕನ್ನಡ ನಾಮಫಲಕಗಳ ಸ್ಟಿಕರ್ ಅಳವಡಿಕೆ ಅಭಿಯಾನ ನಡೆಯಿತು.

ಬಸ್ಗಳ ಮಾರ್ಗಗಳನ್ನು ಕನ್ನಡದಲ್ಲಿ ನಮೂದಿಸಬೇಕಾಗಿದೆ. ಈ ಬಗ್ಗೆ ಪರಿಶೀಲನೆ ನಡೆಸಲಾಗುತ್ತದೆ. ಕೆಲವು ಬಸ್ ಗಳು ಈ ನಿಯಮವನ್ನು ಪಾಲಿಸುತ್ತಿಲ್ಲ. ಇದೀಗ ಈ ವಾರಾಂತ್ಯದವರೆಗೆ ಖಾಸಗಿ ಬಸ್ಗಳಿಂದಲೇ ಹಣ ಭರಿಸಿಕೊಂಡು ಕನ್ನಡ ನಾಮಫಲಕದ ಸ್ಟಿಕರ್ ಅಳವಡಿಕೆ ಕಾರ್ಯ ನಡೆಯಲಿದೆ. ಮುಂದಿನ ವಾರದಿಂದ ದಂಡ ವಿಧಿಸುವ ಕಾರ್ಯ ನಡೆಯಲಿದೆ ಎಂದು ಎಆರ್ಟಿಒ ವಿಶ್ವನಾಥ್ ನಾಯ್ಕ್ ತಿಳಿಸಿದರು.
ಬಸ್ ಗಳಲ್ಲಿ ಕನ್ನಡ ನಾಮಫಲಕ ಕಡ್ಡಾಯಗೊಳಿಸಲಾಗಿದ್ದರೂ, ಬಹುತೇಕ ಖಾಸಗಿ ಬಸ್ನಲ್ಲಿ ಇದನ್ನು ಪಾಲಿಸುತ್ತಿಲ್ಲ. ಈ ಬಗ್ಗೆ ನಿರಂತರವಾಗಿ ಬಂಧಪಟ್ಟವರಿಗೆ ದೂರು ನೀಡಲಾಗುತ್ತಿದೆ. ಇದೀಗ ಆರ್ಟಿಒ ಮೂಲಕ ಈ ಕಾರ್ಯ ಆರಂಭಗೊಂಡಿದೆ ಎಂದು ಸಾಮಾಜಿಕ ಕಾರ್ಯಕರ್ತ ಜಿ.ಕೆ. ಭಟ್ ತಿಳಿಸಿದ್ದಾರೆ.


