Tuesday, June 24, 2025
27.5 C
Bengaluru
Google search engine
LIVE
ಮನೆಜಿಲ್ಲೆಬಸನಗೌಡಪಾಟೀಲ್​ ಯತ್ನಾಳ್​ ವಿರುದ್ಧ ಕಾಂಗ್ರೆಸ್ ಮುಖಂಡ ತಮ್ಮಾಟಗಾರ ವಾಗ್ದಾಳಿ

ಬಸನಗೌಡಪಾಟೀಲ್​ ಯತ್ನಾಳ್​ ವಿರುದ್ಧ ಕಾಂಗ್ರೆಸ್ ಮುಖಂಡ ತಮ್ಮಾಟಗಾರ ವಾಗ್ದಾಳಿ

ಧಾರವಾಡ : ಶಾಸಕ ಯತ್ನಾಳರಿಗೆ ಬಿಜೆಪಿಯ ರಾಜ್ಯಾಧ್ಯಕ್ಷ, ವಿರೋಧ ಪಕ್ಷದ ಸ್ಥಾನ ಸಿಕ್ಕಿಲ್ಲ. ಹೀಗಾಗಿ ಅವರು ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ ಎಂದು ಶಾಸಕ‌ ಬಸನಗೌಡಪಾಟೀಲ್ ಯತ್ನಾಳ ವಿರುದ್ಧ ಕಾಂಗ್ರೆಸ್ ಮುಖಂಡ‌ ತಮ್ಮಾಟಗಾರ ಕಿಡಿಕಾರಿದರು.

ಯತ್ನಾಳವರು ಹುಚ್ಚರಂತೆ ಮಾತಾಡುತ್ತಿದ್ದಾರೆ. ಅವರಿಗೆ ಮೆಂಟಲ್ ಆಸ್ಪತ್ರೆಯ ಚಿಕಿತ್ಸೆ ಅವಶ್ಯಕತೆ ಇದೆ. ಮುಸ್ಲಿಂ ಧರ್ಮಗುರುಗಳ ಬಗ್ಗೆ ಬೇಕಾಬಿಟ್ಟಿಯಾಗಿ ಮಾತಾಡುತ್ತಿದ್ದಾರೆ. ಮುಸ್ಲಿಂ‌ ಗುರುಗಳಾದ ತನ್ವೀರ್ ಹಾಸ್ಮಿ ಪೀರಾ ಅವರ ಬಗ್ಗೆ ಸೊಸಿಯಲ್ ಮೀಡಿಯಾ, ಮಾಧ್ಯಮ ಮುಂದೆ ಸುಖಾಸುಮ್ಮನೆ‌ ಮಾಡುತ್ತಿದ್ದಾರೆ. ಅವರ ಪಕ್ಷದ ಕೇಂದ್ರ ಸಚಿವರಾದ ಗಡ್ಕರಿಗೂ ಗುರುಗಳಾದ ತನ್ವೀರ ಅವರು ಭೇಟಿಯಾಗಿದ್ದಾರೆ. ಅದರ ಪೋಟೋ ಕೂಡಾ ನಾವು ನೀಡುತ್ತೇವೆ.  ಯತ್ನಾಳ ಅವರು ನೀಡಿರುವ ಪೋಟೋ ಅಲ್ ಹಾಸ್ಮಿ ಡಾಟ್ ವರ್ಜ್ ವೆಬಸೈಟ್​​ನಲ್ಲಿದ್ದು, 12 ವರ್ಷ ಹಿಂದಿನ ಪೀರಾ ಗುರುಗಳು ಹಾಕಿರುವ ಪೋಟೊಗಳಾಗಿವೆ.

ದೇಶದಲ್ಲಿನ ಫೇಮಸ್ ದರ್ಗಾದ್ ಹಾಗೇ, ಇರಾಕನ ಬಗ್ದಾದ್ ಒಳಗಿನ ಮೆಹಬೂಬ್ ಸುಬಾನಿ ಫೇಮಸ್ ದರ್ಗಾ ಆಗಿದೆ. ದೇಶ ವಿದೇಶಗಳಿಂದ ಯಾತ್ರಿಕರು ಅಲ್ಲಿಗೆ ಹೋಗಿ ಆರ್ಶೀವಾದ ತಗೊಂಡು ಬರುತ್ತಾರೆ. ‌ಹೀಗೆ ಗುರುಗಳಾದ ತನ್ವೀರ್ ಹಾಸ್ಮಿ ಪೀರಾ ಅವರು, ಅಲಾ ದರ್ಗಾದ ಗುರುಗಳನ್ನು ಭೇಟಿ ಮಾಡಿದ್ದಾರೆ. ಇದನ್ನೇ ಇಟ್ಕೊಂಡು ನೂರಾರು ಸಮಸ್ಯೆಗಳನ್ನು ಬಿಟ್ಟು ಇದರ ಬಗ್ಗೆ ಸದನದಲ್ಲಿ ಮಾತನಾಡಿ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ. ಯತ್ನಾಳ ಅವರು ಹುಚ್ಚರ ರೀತಿ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಕಿಡಿಕಾರಿದರು.

ದೊಡ್ಡ ಸಮಾಜದ ನಾಯಕರಾಗಿ ಹೋರಾಟಗಳನ್ನು ಮಾಡಿದ್ದಾರೆ. ಅವರ ಹಿರಿಯ ರಾಜಕಾರಣಿ ಅವರು. ಕೇಂದ್ರ ಸಚಿವರಾಗಿದ್ದದವರು ಈ ರೀತಿ‌ ನಡೆದುಕೊಳ್ಳುವುದು ಸರಿಯಲ್ಲ. ಉತ್ತರ ಕರ್ನಾಟಕದ ಬಗ್ಗೆ ಸದನದಲ್ಲಿ ಅವರು ಧ್ವನಿ ಎತ್ತಲ್ಲಿ ಅದನ್ನು ಬಿಟ್ಟು ಈ ರೀತಿ ಗೊಂದಲ‌ ಸೃಷ್ಟಿ ಬೇಡಾ ಎಂದು ಧಾರವಾಡದಲ್ಲಿ ಕಾಂಗ್ರೆಸ್ ಮುಖಂಡ ಇಸ್ಮಾಯಲ್ ತಮ್ಮಾಟಗಾರ ತಿಳಿಸಿದರು.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments