
ಹುಬ್ಬಳ್ಳಿ :ಸಿದ್ದರಾಮಯ್ಯನವರು ಹುಟ್ಟುಹಬ್ಬದ ಶುಭಕೋರಿದರು ಇದರಲ್ಲಿ ರಾಜಕೀಯ ಚರ್ಚೆ ಏನು ಆಗಿಲ್ಲ ಎಂದು ಹುಬ್ಬಳ್ಳಿಯಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದರು. ಸಹಜವಾಗಿಯೇ ಪ್ರದೀಪ್ ಶೆಟ್ಟರ್ ಕೂಡ ಮನೆಗೆ ಬಂದಿದ್ದರು. ಸಿದ್ದರಾಮಯ್ಯನವರು ನಮ್ಮ ರಾಜಕೀಯ ಜೀವನದ ಒಡನಾಟ ನೆನಪಿಸಿಕೊಂಡರು ಎಂದರು.

ನಾನು ಲೋಕಸಭೆ ಟಿಕೆಟ್ ಆಕಾಂಕ್ಷಿಯಲ್ಲ. ಪಕ್ಷವೂ ನನ್ನನ್ನು ಸ್ಪರ್ಧಿಸುವಂತೆ ಹೇಳಿಲ್ಲ, ಹೇಳಿದ್ರೆ ನೋಡೋಣ.. ಲೋಕಸಭೆ ಚರ್ಚೆ ಜನವರಿ ನಂತರ ಶುರುವಾಗುತ್ತೆ. ಪಕ್ಷ ಬಯಸಿದ್ರೆ ಸ್ಪರ್ಧಿಸಲು ಸಿದ್ಧ ಎಂದು ಜಗದೀಶ್ ಶೆಟ್ಟರ್ ತಿಳಿಸಿದರು.




