Thursday, September 11, 2025
20.3 C
Bengaluru
Google search engine
LIVE
ಮನೆ#Exclusive NewsTop Newsತುಮಕೂರಲ್ಲಿ ಓಡಾಡಿದ್ನಾ ಕೆಫೆ ಬಾಂಬರ್? ಪೊಲೀಸ್ ಶೋಧ

ತುಮಕೂರಲ್ಲಿ ಓಡಾಡಿದ್ನಾ ಕೆಫೆ ಬಾಂಬರ್? ಪೊಲೀಸ್ ಶೋಧ

ರಾಮೇಶ್ವರಂ ಕೆಫೆ ಸ್ಫೋಟದ ಆರೋಪಿಗಾಗಿ ಕಳೆದ ರಾತ್ರಿ ತುಮಕೂರು ನಗರದಲ್ಲಿ ತನಿಖಾ ತಂಡ ಶೋಧ ನಡೆಸಿದೆ.

28 ಜೀಪ್​ಗಳಲ್ಲಿ ಬೆಂಗಳೂರಿನಿಂದ ಬಂದಿದ್ದ ಪೊಲೀಸರು, ತುಮಕೂರು ರೈಲ್ವೇ ನಿಲ್ದಾಣ, ಕೆಎಸ್​ಆರ್​ಟಿಸಿ ಬಸ್ ನಿಲ್ದಾಣ, ಮಂಡಿಪೇಟೆ ಸೇರಿ ವಿವಿಧೆಡೆ ಪರಿಶೀಲನೆ ನಡೆಸಿದರು. ತನಿಖಾ ತಂಡಕ್ಕೆ ತುಮಕೂರು ಪೊಲೀಸರು ಸಾಥ್ ನೀಡಿದರು.

ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟಿಸಿದ್ದ ಬಾಂಬರ್ ತುಮಕೂರಿಗೆ ಬಂದು ಹೋಗಿರುವ ಸುಳಿವು ಸಿಕ್ಕ ಹಿನ್ನೆಲೆಯಲ್ಲಿ ತನಿಖಾ ತಂಡ ನಿನ್ನೆ ರಾತ್ರಿ ದಿಢೀರ್ ಎಂದು ತುಮಕೂರಲ್ಲಿ ಶೋಧ ಕಾರ್ಯ ನಡೆಸಿದೆ.

ಪ್ರಮುಖ ಸ್ಥಳಗಳ ಸಿಸಿಟಿವಿ ಕೆಮರಾಗಳನ್ನು ಕೂಡ ತನಿಖಾ ಪರಿಶೀಲಿಸಿದೆ.

ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments