ಜಿಲ್ಲೆ

ಟಿಎಪಿಸಿಎಂಎಸ್ ಚುನಾವಣೆ ಮುಂದೂಡಿಕೆ ಹಿನ್ನೆಲೆ ಜೆಡಿಎಸ್​ ಕಾರ್ಯಕರ್ತರ ಪ್ರೊಟೆಸ್ಟ್

ಚನ್ನಪಟ್ಟಣ  : ಚನ್ನಪಟ್ಟಣದ ಟಿಎಪಿಸಿಎಂಎಸ್ ಚುನಾವಣೆ ಮುಂದೂಡಿಕೆ ಹಿನ್ನೆಲೆ ಚುನಾವಣೆ ಮುಂದೂಡಿಕೆ ಖಂಡಿಸಿ ಚನ್ನಪಟ್ಟಣ ತಾಲೂಕಿನ ಡಿವೈಎಸ್ಪಿ ಕಚೇರಿ ಮುಂಭಾಗ ಜೆಡಿಎಸ್ ಪ್ರತಿಭಟನೆ ನಡೆಸುತ್ತಿದ್ದಾರೆ. ಚುನಾವಣೆ ನಡೆಸಿದ್ರೆ ಕಾನೂನು ಸುವ್ಯವಸ್ಥೆ ಹದಗೆಡುತ್ತೆ ಎಂದು ಪೊಲೀಸರು ವರದಿ ನೀಡಿದ್ದರು. ಪೊಲೀಸರ ವರದಿ ಹಿನ್ನೆಲೆ ಚುನಾವಣೆಯನ್ನು ಸಹಕಾರ ಇಲಾಖೆ ಮುಂದೂಡಲಾಗಿತ್ತು.

ಇದೀಗ ಪೊಲೀಸರ ನಡೆ ಖಂಡಿಸಿ ಜೆಡಿಎಸ್ ಮುಖಂಡರು, ಕಾರ್ಯಕರ್ತರಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಪೊಲೀಸರು ಎಕಪಕ್ಷಿಯವಾಗಿ ನಿರ್ಧಾರ ಕೈಗೊಂಡಿದ್ದಾರೆ ಎಂದು ಕಿಡಿಕಾರಿದರು. ಇದೇ ವೇಳೆ ಪೊಲೀಸರು ಹಾಗೂ ಜೆಡಿಎಸ್​ ಕಾರ್ಯಕರ್ತರ ನಡುವೆ ವಾಗ್ವಾದ ನಡೆಯಿತು. ಪೊಲೀಸ್ ಠಾಣೆಗೆ ಮುತ್ತೆಗೆ ಹಾಕಲು ಜೆಡಿಎಸ್​ ಕಾರ್ಯಕರ್ತರು ಯತ್ನಿಸಿದ್ದರು.

Comments (0)

Your email address will not be published. Required fields are marked *

Back to top button